ವಿಜಯಪುರ ಆದರ್ಶ ನಗರದ ಮಾರುತಿ ಮಂದಿರದಲ್ಲಿ ಶ್ರೀರಾಮನಿಗೆ ಪೂಜೆ

ವಿಜಯಪುರ: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬಸವನಾಡು ವಿಜಯಪುರ ನಗರದ ಆದರ್ಶ ನಗರದ ಶ್ರೀ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು.

ದೇವಸ್ಥಾನದಲ್ಲಿ ಸೇರಿದ ಬಡಾವಣೆಯ ನಿವಾಸಿಗಳು ಶ್ರೀರಾಮಚಂದ್ರನ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮನಾಮ ಜಪಿಸಿದರು.  ಅಲ್ಲದೇ, ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.  ಅಲ್ಲದೇ, ಪ್ರಸಾದ ಹಂಚಿ ಖುಷಿಪಟ್ಟರು.

ಈ ಸಂದರ್ಭದಲ್ಲಿ ಶ್ರೀ ಹನುಮಾನ ದೇವಸ್ಥಾನ ಅಧ್ಶಕ್ಷ ಜಿ. ಡಿ. ಅಂಗಡಿ, ಸದಸ್ಯರರಾದ ಧರ್ಮರಾಯ ಮಮದಾಪೂರ, ಎಸ್. ಪಿ. ಚೌಧರಿ, ಅಶೋಕ ನಡವಿನಮನಿ, ಎಸ್. ಐ. ಪಟ್ಟಣಶೆಟ್ಟಿ, ಎ. ಎಂ. ಹಡಪದ, ದೇವಸ್ಧಾನದ ಆರ್ಚಕ ರಾಘವೇಂದ್ರ ಆಧ್ಶ ಹಾಗೂ ಬಡಾವಣೆ ಗಣ್ಶರು, ಮಹಿಳೆಯರು, ಯುವಕರು ಉಪಸ್ಥಥಿತರಿದ್ದರು.

Leave a Reply

ಹೊಸ ಪೋಸ್ಟ್‌