ನಿಯಮಿತ ವ್ಯಾಯಾಮ, ಆರೋಗ್ಯ ಪೂರ್ಣ ಆಹಾರ ಸೇವನೆಯಿಂದ ಕ್ಯಾನ್ಸರ ರೋಗ ತಡೆಗಟ್ಟಬಹುದು- ಟಿ. ಭೂಬಾಲನ್

ವಿಜಯಪುರ: ನಿಯಮಿತ ವ್ಯಾಯಾಮ ಮತ್ತು ಆರೋಗ್ಯ ಪೂರ್ಣ ಆಹಾರ ಸೇವನೆಯಿಂದ ಕ್ಯಾನ್ಸರ್ ರೋಗ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.

ನಗರದಲ್ಲಿ ಭಾರತೀಯ ರೆಡ್‌ಕ್ರಾಸ ಸೊಸೈಟಿ ವಿಜಯಪುರ ಜಿಲ್ಹಾ ಶಾಖೆ ಮತ್ತು ಜಿಲ್ಹಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ಯಾನ್ಸರ ರೋಗದ ಅರಿವು ಮತ್ತು ಮುಂಜಾಗ್ರತೆ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಕ್ಯಾನ್ಸರ ರೋಗ ಕುರಿತು 25 ಸಾವಿರ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕ್ಯಾನ್ಸರ್ ಕುರಿತು ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.  ಈ ಸಂಶೋಧನೆಗಳ ಅನುಕೂಲಗಳು ಸಮಾಜಕ್ಕೆ ತಲುಪಬೇಕಾಗಿದೆ ಎಂದು ಅವರು ಹೇಳಿದರು.

ಜಿಲ್ಹಾ ಶಸ್ತ್ರಚಿಕಿತ್ಸಕ ಡಾ. ಮಾಸ್ತಿಹೊಳಿ ಮಾತನಾಡಿ, ಕ್ಯಾನ್ಸರ ರೋಗವನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಜಾಥಾವನ್ನು ನಡೆಯಿತು.  ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ ಈ ಜಾಥಾಗೆ ಚಾಲನೆ ನೀಡಿದರು.  ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ಎಸ್. ಪಾಟೀಲ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಅಶ್ವಿನಿ ಬಿದರಿ ನರ್ಸಿಂಗ ಕಾಲೇಜಿನ ಮತ್ತು ಸರಕಾರಿ ನರ್ಸಿಂಗ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ರೆಡಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದರು.

ಜಿಲ್ಹಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಭಾರತೀಯ ರೆಡಕ್ರಾಸ್ ಸಂಸ್ಥೆಯ ಚೇರಮನ್ ಶರದ ರೊಡಗಿಯವರು ಸ್ವಾಗತಿಸಿದರು.  ಡಾ. ಎಸ್. ಎಲ್. ಲಕ್ಕಣ್ಣನವರ ವಂದಿಸಿದರು.

ಕ್ಯಾನ್ಸರ್ ರೋಗದ ಕುರಿತು ಸಮಗ್ರ ಮಾಹಿತಿ ಒದಗಿಸುವ ಭಿತ್ತಿ ಪತ್ರಗಳನ್ನು ರೆಡ್ ಕ್ರಾಸ್ ಸಂಸ್ಥೆ ಜಿಲ್ಹೆಯ ಎಲ್ಲ ಮಹಾವಿದ್ಯಾಲಯಗಳಿಗೆ ತಲುಪಿಸಲಿದೆ.

Leave a Reply

ಹೊಸ ಪೋಸ್ಟ್‌