ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಭಾವನ ಬೆಳಗೆರೆ ಸಂಪಾದಕತ್ವದಲ್ಲಿ ಶೀಘ್ರದಲ್ಲಿ ಪುನಾರಂಭ

ಬೆಂಗಳೂರು: ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಅತೀ ಶೀಘ್ರದಲ್ಲಿ ಭಾವನಾ ಬೆಳಗೆರೆ ಸಂಪಾದಕತ್ವದಲ್ಲಿ ಪುನಾರಂಭವಾಗಲಿದೆ.

ಬೆಂಗಳೂರಿನ ಹಾಯ್ ಬೆಂಗಳೂರು ಪತ್ರಿಕೆ ಕಚೇರಿಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ ರವಿ ಬೆಳೆಗೆರೆ ಅವರ ಎರಡು ಪುಸ್ತಕಗಳಾದ ರಜನೀಶನ ಹುಡುಗಿಯರು, ಅರ್ತಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಪುತ್ರಿ ಮತ್ತು ಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿರುವ ಭಾವನಾ ಬೆಳಗೆರೆ ಈ ಘೋಷಣೆ ಮಾಡಿದ್ದಾರೆ.

ಹಾಯ್ ಬೆಂಗಳೂರು ಮತ್ತು ಓ ಮನಸೆ ಪತ್ರಿಕೆಗಳನ್ನು ಪುನಾರಂಭಿಸುವಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಳೆದ ಅನೇಕ ದಿನಗಳಿಂದ ಓದುಗರು ಒತ್ತಾಯಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಈಗ ಬೆಳಗೆರೆ ಕುಟುಂಬ ಮತ್ತು ಪತ್ರಿಕೆಯ ವರದಿಗಾರರು ಸಿದ್ದರಾಗಿದ್ದು, ಶೀ ಘ್ರದಲ್ಲಿ ಪತ್ರಿಕೆ ಆರಂಭಿಸಿ ಓದುಗರ ಕೈಗೆ ನೀಡಲಾಗುವುದು ಎಂದು ಭಾವನಾ ಬೆಳಗೆರೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯಕುಮಾರಿ ಅವರು, ರವಿ ಬೆಳಗೆರೆ ಅವರ ಅಕ್ಷರ ಲೋಕದ ನಂಟು, ಅವರ ಬರಹದ ಬಗ್ಗೆ ವಿವರಿಸಿದರು.  ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಹಾಯ್ ಬೆಂಗಳೂರು ಪತ್ರಿಕೆ ಓದುಗರು ಮಾತನಾಡಿ, ಎರಡೂ ಪತ್ರಿಕೆ ಪುನಾರಂಭಿಸಬೇಕು ಎಂದು ಪ್ರೀತಿಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಲಿತಾ ರವಿ ಬೆಳಗೆರೆ ಅವರು ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ರವಿ ಬೆಳಗೆರೆ ಪುತ್ರ ಕರ್ಣ ರವಿ ಬೆಳಗೆರೆ, ಪುತ್ರಿ ಚೇತನಾ, ಅಳಿಯ ನಟ ಶ್ರೀನಗರ ಕಿಟ್ಟಿ, ಉಮೇಶ ಭಟ, ವಿದ್ಯಾ ಭಟ, ಹಿರಿಯ ಪತ್ರಕರ್ತರಾದ ರವಿ ಕುಲಕರ್ಣಿ, ಸತೀಶ ಬಿಲ್ಲಾಡಿ, ಕಾಂತರಾಜ್ ಅರಸ್, ಶ್ರೀನಿವಾಸ, ಶರಣು ಗೊಬ್ಬೂರ, ರವಿ ಬೆಳಗೆರೆ, ಅಭಿಮಾನಿಗಳು, ಓದುಗರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌