ಬಜೆಟ್ ನಲ್ಲಿ ಬಸವನಾಡಿಗೂ ಭರಪೂರ ಕೊಡುಗೆ ನೀಡಿದ ಸಿಎಂ ಎಸ್. ಸಿದ್ಧರಾಮಯ್ಯ- ಏನೇನು ಗೋತ್ತಾ?

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಬಸವನಾಡು ವಿಜಯಪುರ ಜಿಲ್ಲೆಗೂ ಭರಪೂರ ಕೊಡುಗೆ ಸಿಕ್ಕಿದೆ. ವಿಜಯಪುರ ಜಿಲ್ಲೆಗೆ ಸಿಎಂ ನೀಡಿರುವ ಕೊಡುಗೆಗಳು ಏನು ಎಂಬುದರ ಕುರಿತg ಬಜೆಟ್ ನಲ್ಲಿ ನಮೂದಿಸಲಾಗಿರುವ ಅನುಕ್ರಮ ಸಂಖ್ಯೆ ಸಹಿತ ಮಾಹಿತಿ ಇಲ್ಲಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಇಟ್ಟಂಗಿಹಾಳ ಬಳಿ ಆಹಾರ ಪಾರ್ಕ್ ಸ್ಥಾಪನೆ.   ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. […]

ಕೆಯುಡಬ್ಲ್ಯೂಜೆ ಹೋರಾಟದ ಫಲ- ಗ್ರಾಮೀಣ ಪತ್ರಕರ್ತರಿಗೆ ಅವರ ಜಿಲ್ಲೆಗಳಲ್ಲಿ ಉಚಿತ ಬಸ್ ಪಾಸ್ ಘೋಷಿಸಿದ ಸಿಎಂ- ಶಿವಾನಂದ ತಗಡೂರ ಸ್ವಾಗತ

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಅವರ ಜಿಲ್ಲಾದ್ಯಂತ ಸರಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪಾಸ್ ಯೋಜನೆಯನ್ನು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.  ಇದರಿಂದಾಗಿ ಕೆಯುಡಬ್ಲ್ಯೂಜೆ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡನೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ)  38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದು, ಸರಕಾರದ ಈ ನಿರ್ಧಾರವನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ […]

ರೇಲ್ವೆ ಕೆಳಸೇತುವೆ ಬಳಿ ವಾಹನಗಳ ಎತ್ತರ ನಿಯಂತ್ರಣಕ್ಕೆ ಅಳವಡಿಸಲಾಗಿದ್ದ ಫ್ರೇಮ್ ತುಂಡಾಗಿ ಬಿದ್ದು ಅವಘಡ

ವಿಜಯಪುರ: ರೇಲ್ವೆ ಕೆಳಸೇತುವೆ ಬಳಿ ಎತ್ತರದ ವಾಹನಗಳು ಸಂಚರಿಸದಂತೆ ಹಾಕಲಾಗಿದ್ದ ಕಬ್ಬಿಣದ ಫ್ರೇಮ್ ತುಂಡಾಗಿ ಬಿದ್ದ ಘಟನೆ ಕೊಲ್ಹಾರ ತಾಲೂಕಿನ ತೆಲಗಿ ಬಳಿ ಸಂಭವಿಸಿದೆ. ಗ್ರಾಮದ ರೇಲ್ವೆ ಕೆಳಸೇತುವೆ ಬಳಿ ಬೃಹತ್ ಲಾರಿಗಳು ಮತ್ತು ಎತ್ತರದ ವಾಹನಗಳು ಸಂಚರಿಸುವುದನ್ನು ನಿಯಂತ್ರಿಸಲು ಫ್ರೇಮ್ ಹಾಕಲಾಗಿತ್ತು.  ಆದರೆ, ರಾತ್ರಿ ಕಬ್ಬು ಸಾಗಾಟ ಮಾಡುವ ವಾಹನಕ್ಕೆ ತಗುಲಿ ಮುರಿದು ಬಿದ್ದಿದೆ.  ಈ ರಸ್ತೆ ತೆಲಗಿಯಿಂದ ಕೊಲ್ಹಾರ ಮಾರ್ಗವಾಗಿ ಬಸವನ ಬಾಗೇವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ.  ವಾಹನಗಳ ಎತ್ತರ ನಿಯಂತ್ರಕ ಫ್ರೇಮ್ ಮೇಲೀನ […]

ಲಾರಿ ಟಾಯರ್ ನಲ್ಲಿ ಹೊತ್ತಿಕೊಂಡ ಬೆಂಕಿ- ಕ್ಷಣಾರ್ಧದಲ್ಲಿ ಇಡೀ ವಾಹನ ಸುಟ್ಟು ಭಸ್ಮ

ವಿಜಯಪುರ: ಚಲಿಸುತ್ತಿದ್ದ ಲಾರಿಯ ಟಾಯರ್ ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ವಾಹನವನ್ನು ಸುಟ್ಟು ಭಸ್ಮ ಮಾಡಿದ ಘಟನೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ಬಳಿ ನಡೆದಿದೆ. ಸೋಲಾಪುರ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ತಮಿಳುನಾಡಿಗೆ ಸೇರಿರುವ TN 29- CW 8877 ನಂಬರಿನ ಲಾರಿ ರಾಜಸ್ಥಾನದಿಂದ ಬೆಂಗಳೂರಿಗೆ ಗ್ರಾನೈಟ್ ಕಲ್ಲುಗಳನ್ನು ಸಾಗಿಸುತ್ತಿತ್ತು.  ತಡರಾತ್ರಿ ವೇಳೆ ಈ ಘಟನೆ ಸಂಭವಿಸಿದೆ.  ಬೆಂಕಿ ಇಡೀ ಲಾರಿಗೆ […]