ಡಾ. ಪ್ರಭುಗೌಡ ಲಿಂಗದಳ್ಳಿ ಮಾನವೀಯತೆ- ಮಧ್ಯರಾತ್ರಿ ಬೈಕ್ ಜೊತೆ ರಸ್ತೆಬದಿ ಕಂದಕಕ್ಕೆ ಬಿದ್ದಿದ್ದ ಯುವಕನ ರಕ್ಷಿಸಿ ಚಿಕಿತ್ಸೆ

ವಿಜಯಪುರ: ಬೈಕ್ ಜೊತೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವಕನೊಬ್ಬನನ್ನು ಖ್ಯಾತ ನೇತ್ರತಜ್ಞ ಮತ್ತು ಕಾಂಗ್ರೆಸ್ ಮುಖಂಡ ಡಾ. ಪ್ರಭುಗೌಡ ಲಿಂಗದಳ್ಳಿ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ದೇವರ ಹಿಪ್ಪರಗಿ ಮತಕ್ಷೇತ್ರದ ನಾವದಗಿಯಲ್ಲಿ ಪ್ರವಚನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಡಾ. ಪ್ರಭುಗೌಡ ಲಿಂಗದಳ್ಳಿ ವಣಕ್ಯಾಳ ಗ್ರಾಮಕ್ಕೆ ನಾಟಕ ಉದ್ಘಾಟನೆಗೆ ತೆರಳುತ್ತಿದ್ದರು.  ಆಗ ಮಾರ್ಗ ಮಧ್ಯೆ ಬೆಕಿನಾಳ ಕ್ರಾಸ್ ಬಳಿ ಬೈಕ್ ಅಪಘಾತವಾಗಿ ಯುವಕನೋರ್ವ ರಸ್ತೆ ಬದಿಯಲ್ಲಿ ಬಿದ್ದಿದ್ದನ್ನು ಗಮನಿಸಿದರು.  ಕೂಡಲೇ ಕಾರು ನಿಲ್ಲಿಸಿ ಕೆಳಗಿಳಿದು ಬಂದ ಅವರು, ಗಾಯಾಳುವನ್ನು ಸ್ವತಃ ಪರೀಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಅಲ್ಲದೇ, ಯುವಕನ ಮಾಹಿತಿ ಪಡೆದು ಆತನ ಗ್ರಾಮಸ್ಥರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.  ನಿಮ್ಮೂರಿನ ಅಶ್ಪಾಕ್ ಸೌದಾಗರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.  ಈಗ ಹೆಚ್ಚಿನ ಚಿಕಿತ್ಸೆಗಾಗಿ ತಾಳಿಕೋಟೆಗೆ ಕಳುಹಿಸಿ ಕೊಡಲಾಗುತ್ತಿದೆ.  ಅಲ್ಲಿ ಈಗಾಗಲೇ ವೈದ್ಯರೊಂದಿಗೆ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.  ಅಲ್ಲದೇ, ತಮ್ಮದೇ ತಮ್ಮ ಆಪ್ತ ಸಹಾಯಕರ ಮೂಲಕ ಯುವಕನನ್ನು ತಾಳಿಕೋಟೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ.

 

ವಿಜಯಪುರ ಜಿಲ್ಲೆಯ ಬೆಕಿನಾಳ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಬೈಕ್ ಜೊತೆ ಬಿದಿರುವ ಯುವಕ

 

 

ಈಗಾಗಲೇ ವಿಜಯಪುರ ಮಾತ್ರವಲ್ಲ ನೆರೆಯ ಕಲಬುರಗಿ ಸೇರಿದಂತೆ ನಾನಾ ಜಿಲ್ಲೆಗಳ ಸಾರ್ವಜನಿಕರ ನೇತ್ರಚಿಕಿತ್ಸೆ ನೀಡುವ ಮೂಲಕ ಆಪದ್ಭಾಂಧವನಾಗಿರುವ ಡಾ. ಪ್ರಭುಗೌಡ ಲಿಂಗದಳ್ಳಿ ಈಗ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಯುವಕನನ್ನು ರಕ್ಷಿಸಿ ವೈದ್ಯೋ ನಾರಾಯಣ ಹರಿ ಎಂಬ ಮಾತಿಗೆ ತಕ್ಕಂತೆ ಮಾದರಿಯಾ ಕಾರ್ಯ ಮಾಡಿದ್ದಾರೆ.

 

Leave a Reply

ಹೊಸ ಪೋಸ್ಟ್‌