ಸೈಕಲ್ ಮೇಲೆ ಪ್ರಧಾನಿ ಮೋದಿ ಸಾಧನೆಗಳ ಪ್ರಚಾರ: ವಿದ್ಯಾಕಾಶಿಯಿಂದ ಬಸವನಾಡಿಗೆ ಬಂದ ಯುವಕನಿಗೆ ಸ್ವಾಗತಿಸಿ ಗೌರವಿಸಿದ ಉಮೇಶ ಕಾರಜೋಳ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ಸೈಕಲ್ ಮೇಲೆ ಸಂಚರಿಸುತ್ತ ಪ್ರಚಾರ ಮಾಡುತ್ತಿರುವ ಧಾರವಾಡದ ಭರತ ಜೈನ್ ವಿಜಯಪುರ ನಗರಕ್ಕೆ ಆಗಮಿಸಿದ್ದು, ಅವರನ್ನು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಸ್ವಾಗತಿಸಿ ಸನ್ಮಾನಿಸಿ ಗೌರವಿಸಿದರು.

ಸೈಕಲ್ ಮೇಲೆ ಹಳ್ಳಿಗಳಿಗೆ ತೆರಳು ಪ್ರಚಾರ ಮಾಡುತ್ತಿರುವ ಭರತ ಜೈನ ಧಾರವಾಡ ಜಿಲ್ಲೆಯ ಮಂಟೂರ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಅಟೋ ಚಾಲಕರಾಗಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿಯಾಗಿರುವ ಅವರು ಸ್ವಯಂ ಪ್ರೇರಣೆಯಿಂದ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಧಾನಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರಕ್ಕಾಗಿ ವಿಜಯಪುರಕ್ಕೆ ಆಗಮಿಸಿದ ಧಾರವಾಡ ಜಿಲ್ಲೆಯ ಭರತ ಜೈನ ಅವರಿಗೆ ಉಮೇಶ ಕಾರಜೋಳ ಸ್ವಾಗತಿಸಿ ಶುಭ ಕೋರಿದರು

ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪ್ರವಾಸ ಮುಗಿಸಿರುವ ಅವರು ಈಗ ಬಸವನಾಡು ವಿಜಯಪುರ ನಗರಕ್ಕೆ ಆಗಮಿಸಿದ್ದರು.  ಅವರನ್ನು ಉಮೇಶ ಕಾರಜೋಳ ಸ್ವಾಗತಿಸಿ ಶುಭ ಕೋರಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಶರಣು ಕುಂಬಾರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌