ಬಸವನಾಡಿನ ಕಾಂತಾ ನಾಯಕ ಸೇರಿ 44 ಜನರಿಗೆ ನಿಗಮ, ಮಂಡಳಿ ಅಧ್ಯಕ್ಷರಾಗಿ ನೇಮಕ

ಬೆಂಗಳೂರು: ಬಸವನಾಡು ವಿಜಯಪುರ ಜಿಲ್ಲೆಯ ಬಂಜಾರಾ ಸಮುದಾಯದ ನಾಯಕಿ ಕಾಂತಾ ನಾಯಕ ಸೇರಿ ರಾಜ್ಯದ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 

ಎರಡು ವರ್ಷಗಳ ಅವಧಿಗೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಆಧ್ಯಕ್ಷ ಡಿ. ಕೆ. ಶಿವಕುಮಾರ ಅವರು ಈ ಕ್ರಮ ಕೈಗೊಂಡಿದ್ದಾರೆ.

ನಿಗಮ ಮಂಡಳಿಗೆ ನೂತನ ಅಧ್ಯಕ್ಷರಾದವರ ಹೆಸರು ಮತ್ತು ಅವರಿಗೆ ವಹಿಸಲಾದ ಜವಾಬ್ದಾರಿಯ ಮಾಹಿತಿ ಇಲ್ಲಿದೆ.

  1. ಕಾಂತಾ ನಾಯಕ- ಅಧ್ಯಕ್ಷರು, ಕೌಶಲ್ಯಾಭಿವೃದ್ಧಿ ನಿಗಮ
  2. ಮುಂಡರಗಿ ನಾಗರಾಜು- ಅಧ್ಯಕ್ಷರು ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ
  3. ವಿನೋದ್ ಕೆ. ಅಸೂಟಿ, ಉಪಾಧ್ಯಕ್ಷರು, ಕರ್ನಾಟಕ ಕ್ರೀಡಾ ಪ್ರಾಧಿಕಾರ
  4. ಬಿ. ಎಚ್. ಹರೀಶ- ಅಧ್ಯಕ್ಷರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
  5. ಡಾ. ಅಂಶುಮಂತ್- ಅಧ್ಕಕ್ಷರು, ಭದ್ರಾ ಕಾಡಾ, ಶಿವಮೊಗ್ಗ
  6. ಆಂಜನೇಯಲು ಜೆ. ಎಸ್. ಅಧ್ಯಕ್ಷರು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
  7. ಡಾ. ಬಿ. ಯೋಗೇಶ್ ಬಾಬು- ಅಧ್ಯಕ್ಷರು ಕರ್ನಾಟಕ ದ್ರಾಕ್ಷಾರಸ ಮಂಡಳಿ
  8. ಮರೀಗೌಡ ಯಾದಗಿರಿ, ಅಧ್ಯಕ್ಷರು, ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ
  9. ದೇವೇಂದ್ರಪ್ಪ ವರ್ತೂರು- ಅಧ್ಯಕ್ಷರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
  10. ರಾಜಶೇಖರ ರಾಮಸ್ವರಂ- ಅಧ್ಯಕ್ಷರು, ಕರ್ನಾಟಕ ಜೈವಿಕ ಇಂಧನ ಮಂಡಳಿ
  11. ಕೆ. ಮರೀಗೌಡ, ಅಧ್ಯಕ್ಷರು, ಮೈಸುರು ನಗರಾಭಿವೃದ್ಧಿ ಪ್ರಾಧಿಕಾರ
  12. ಎಸ್. ಮನೋಹರ- ಅಧ್ಯಕ್ಷರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
  13. ಅಯೂಬ್ ಖಾನ್- ಅಧ್ಯಕ್ಷರು, ಬಣ್ಣ ಮತ್ತು ಅರಗು ಕಾರ್ಖಾನೆ, ಮೈಸೂರು
  14. ಮಮತಾ ಗಟ್ಟಿ, ಅಧ್ಯಕ್ಷರು, ಗೇರು ಅಭಿವೃದ್ಧಿ ನಿಗಮ
  15. ಪಲ್ಲವಿ ಜಿ. ಅಧ್ಯಕ್ಷರು, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ
  16. ಎಚ್. ಸಿ. ಸುಧೀಂದ್ರ, ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ
  17. ಡಾ. ನಾಗಲಕ್ಷ್ಮಿ ಚೌಧರಿ- ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ
  18. ಎಚ್. ಎಸ್. ಸುಂದರೇಶ- ಅಧ್ಯಕ್ಷರು, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
  19. ಆರ್. ಎಂ. ಮಂಜುನಾಥ- ಅಧ್ಯಕ್ಷರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ
  20. ಜಯಣ್ಣ- ಅಧ್ಯಕ್ಷರು, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ
  21. ಆರ್. ಸಂಪತ್ ರಾಜ್- ಅಧ್ಯಕ್ಷರು, ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
  22. ಪದ್ಮಾವತಿ- ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ
  23. ಶ್ರೀನಿವಾಸ, ವಿ.ಪ. ಮಾಜಿ ಸದಸ್ಯ- ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  24. ಶಾಕೀರ ಸನದಿ- ಅಧ್ಯಕ್ಷರು, ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
  25. ಸೋಮಣ್ಣ ಬೇವನಮರದ- ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ
  26. ಮೆಹಬೂಬ್ ಪಾಷಾ- ಅಧ್ಯಕ್ಷರು, ಕಂಠೀರವ ಸ್ಟುಡಿಯೋ
  27. ಕೀರ್ತಿ ಗಣೇಶ- ಅಧ್ಯಕ್ಷರು, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  28. ಮಜರ್ ಖಾನ್- ಅಧ್ಯಕ್ಷರು, ದೇವರಾಜು ಅರಸು ಟ್ರಕ್ ಟರ್ಮಿನಲ್
  29. ಸವಿತಾ ರಘು- ಅಧ್ಯಕ್ಷರು, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ
  30. ಲಲಿತ್ ರಾಘವ- ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ
  31. ಜಿ. ಎಸ್. ಮಂಜುನಾಥ- ಉಪಾಧ್ಯಕ್ಷರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
  32. ಮಾಲಾ ನಾರಾಯಣರಾವ್- ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ
  33. ರಿಜ್ವಾನ್, ಜಯನಗರ- ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿ.
  34. ಕೇಶವ ರೆಡ್ಡಿ- ಅಧ್ಯಕ್ಷರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ
  35. ತಾಜ್ ಪೀರ್- ಅಧ್ಯಕ್ಷರು, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ
  36. ಗಂಗಾಧರ್- ಅಧ್ಯಕ್ಷರು, ಮೈಸೂರು ಸಕ್ಕರೆ ಕಾರ್ಖಾನೆ
  37. ಅಲ್ತಾಫ್- ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  38. ಜಯಸಿಂಹ- ಅಧ್ಯಕ್ಷರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  39. ವಿಜಯ ಕೆ. ಮುಳಗುಂದ- ಅಧ್ಯಕ್ಷರು, ಉಪನಗರ ವರ್ತುಲ ರಸ್ತೆ ಯೋಜನೆ ಪ್ರಾಧಿಕಾರ
  40. ಮರಿಸ್ವಾಮಿ, ಚಾಮರಾಜನಗರ- ಅಧ್ಯಕ್ಷರು, ಕಾಡಾ, ಮೈಸೂರು
  41. ಸದಾಶಿವ ಉಲ್ಲಾಳ್- ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
  42. ರಘುನಂದನ್ ರಾಮಣ್ಣ- ಅಧ್ಯಕ್ಷರು, ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ(BMICAPA)
  43. ಬಸವರಾಜ ಜಾಬಶೆಟ್ಟಿ- ಅಧ್ಯಕ್ಷರು, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ
  44. ಸಾಧು ಕೋಕಿಲ- ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ.

Leave a Reply

ಹೊಸ ಪೋಸ್ಟ್‌