ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ: ಮಹಾನಗರ ಪಾಲಿಕೆ ಆಯಕ್ತ ಬದ್ರೂದ್ದೀನ್ ಸೌದಾಗರ

ವಿಜಯಪುರ: ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ.  ಎಲ್ಲ ಕಡೆ ಶಿಕ್ಷಣವಂತರಿಗೆ ಮಾತ್ರ ಬೆಲೆಯಿದ್ದು, ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಜೀವನ ರೂಪಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಬಿ. ಎಯ ಸೌದಾಗರ ಹೇಳಿದ್ದಾರೆ.

ನಗರದ ಮನಗೂಳಿ ಅಗಸಿ ಹತ್ತಿರದ ಫತ್ಹೇ ದರವಾಜಾ ಮಸೀದಿ ಜಮಾತ್ ವತಿಯಿಂದ ವಕ್ಫ ಸಲಹಾ ಸಮಿತಿ ಪದಾಧಿಕಾರಿಗಳು ಮತ್ತು ಚಿನ್ನದ ಪದಕ ಪಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉತ್ತಮ ಶಿಕ್ಷಣದಿಂದಲೇ ನಮ್ಮ ಜೀವನ ರೂಪಗೊಳ್ಳುತ್ತದೆ.  ಸಮಾಜದಲ್ಲಿ ಹುದ್ದೆಗಳು ಸಿಗಬೇಕೆಂದರೆ ಜ್ಞಾನವಂತರಾಗಿರಬೇಕು ಎೞದು ಅವರು ಹೇಳಿದರು.

ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್ ಮತ್ತು ಜಿಲ್ಲಾ ವಕ್ಫ ಕಮೀಟಿಯ ಉಪಾಧ್ಯಕ್ಷ ಅಲ್ತಾಪ್ ಲಕ್ಕುಂಡಿ ಮಾತನಾಡಿ, ನಮ್ಮ ಸಮಾಜದಲ್ಲಿ ಶಿಕ್ಷಣದ ಕೊರತೆಯಿದೆ.  ಒಂದೊತ್ತಿನ ಊಟ ಕಡಿಮೆ ಮಾಡಿಯಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಸಬೇಕು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವಕ್ಫ ಕಮೀಟಿ ನೂತನ್ ಚೇರಮನ್ ನಿಯಾಜ ಕೌಸರ್ ಇನಾಮದಾರ, ನನ್ನ ಅಧಿಕಾರವಧಿಯಲ್ಲಿ ಜಿಲ್ಲಾ ವಕ್ಫ ಕಮೀಟಿ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ.  ಸರಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.  ವಕ್ಫ್ ಆಸ್ತಿ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಹೇಳಿದರು.

ಖ್ಯಾತ ನ್ಯಾಯವಾದಿ ಎ. ಎಂ. ತಾಂಬೋಳಿ ಮಾತನಾಡಿ, ವಕ್ಫ ಆಸ್ತಿ ದೇವರ ಆಸ್ತಿಯಾಗಿದೆ.  ಅದನ್ನು ಯಾರೂ ದುರುಪಯೋಗ ಪಡಸಿಕೊಳ್ಳಬಾರದು.  ಅದರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಸಂಘಟಕ ಮತ್ತು ದಿನಪತ್ರಿಕೆಗಳ ಸಂಪಾದಕರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಇರಫಾನ್ ಶೇಖ ಪ್ರಾಸ್ತಾವಿಕವಾಗಿ ಮಾತನಾಡಿ, ಇಂಥ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರಲ್ಲಿ ಸಾಧಿಸಬೇಕೆಂಬ ಛಲ ಮೂಡುತ್ತದೆ.  ಎಲ್ಲರಲ್ಲೂ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ ಕಬೂಲ್ ಕೊಕಟನೂರ, ಗಣ್ಯರಾದ ನೂರಹಮ್ಮದ ಅತ್ತಾರ, ನ್ಯಾಯವಾದಿ ಅಸ್ಲಾಂ ಅತ್ತಾರ, ರಾಜೀವ ಗಾಂದಿ ಆರೋಗ್ಯ ವಿವಿಯಿಂದ ಚಿನ್ನದ ಪದಕ ಪಡೆದ ದಿಲಶಾದ ಬಣಗಾರ ಮಾತನಾಡಿದರು.

ವಕ್ಫ ಮಂಡಳಿಯ ಜಿಲ್ಲಾಧ್ಯಕ್ಷ ನಿಯಾಜ್ ಕಸರ್ ಅತ್ತಾರ, ಉಪಾಧ್ಯಕ್ಷ ಅಲ್ತಾಫ್ ಲಕ್ಕುಂಡಿ ಹಾಗೂ ದಿಲಷಾದ್ ಬಣಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆಸೀಫ ಬಣಗಾರ, ಮುದಸ್ಸರ ಖುರೇಶಿ, ಆಬಿದ್ ಇಮಾರತವಾಲೆ, ಶೈಕತ್ ಇನಾಮದಾರ, ರಶೀದ ಇನಾಮದಾರ, ಸಲೀಮ್ ಇನಾಮದಾರ, ಗಫೂರ ಇಮಾರತವಾಲೆ, ಮುನ್ನಾ ಮುಲ್ಲಾ, ಇಸಾಕ್ ಲಕ್ಕುಂಡಿ, ಅಪ್ಪು ನಾಗಠಾಣ, ಮೊಮೀನ್ ಸರ್, ಸಮದ ಮದಭಾವಿ, ರಹಿಮಾ ಮೊಮೀನ್, ಹಾಜಿ ಪಿಂಜಾರ, ಆಶೀಪ್ ಕನ್ನೂರ, ಹನೀಪ ಕನ್ನೂರ, ಬಿಸ್ಮಿಲ್ಲಾ ಲಕ್ಕುಂಡಿ, ಚಾಂದ ಮುಲ್ಲಾ, ಗುಡುಲಾಲ ತುಬಾಕೆ ಸೇರಿದಂತೆ ವಾರ್ಡಿನ ಹಿರಿಯರು, ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌