ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ 6ನೇ ನಗರ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ 6ನೇ ನಗರವಾಗಿರುವುದು ಹೆಮ್ಮೆಯ ವಿಷಯ.  ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಇದಕ್ಕೆ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ.

ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಒಳಚರಂಡಿ ನರ‍್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ ರಸ್ತೆಗಳನ್ನು ಮಾದರಿ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಈಗ ರೂ. 10 ಕೋಟಿ ಅನುದಾನದಲ್ಲಿ ರ‍್ಗಾ ರಸ್ತೆಯಿಂದ ಇಟ್ಟಂಗಿ ಕ್ರಾಸ್ ವರೆಗೆ ಅಗಲೀಕರಣಗೊಳಿಸಿ ಮಾದರಿ ರಸ್ತೆಯನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.

ವಿಜಯಪುರ ನಗರದ ನಗರದ ಜಿಲ್ಲಾ ಕಾರಾಗೃಹ ವಸತಿ ಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ, ಓಪನ್ ಜಿಮ್ ನ್ನು ಶಾಸಕ ಬಸನಗಡೌ ಪಾಟೀಲ ಯತ್ನಾಳ ಉದ್ಘಾಟಿಸಿದರು.

ನಗರದಲ್ಲಿರುವ ಪುರಾತನ ಬಾವಿಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಸ್ವಚ್ಛಗೊಳಿಸಲಾಗುವುದು. ಇದರಿಂದ ನಗರಕ್ಕೆ ಉಂಟಾಗುವ ನೀರಿನ ಸಮಸ್ಯೆ ನೀಗಿಸಬಹುದು. ಈಗಾಗಲೇ ನಿರಂತರ ಕುಡಿಯುವ ನೀರಿನ ಯೋಜನೆ ಪೈಪ್ ಅಳವಡಿಕೆ ಮುಗಿದಿದೆ. ಆದರೆ, ಸರ‍್ಪಕ ನೀರಿನ ಕೊರತೆಯಿದ್ದು, ಅದಕ್ಕೆ ಶಾಸ್ವತ ಪರಿಹಾರ ಒದಗಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ನಾನಾ ಬಡಾವಣೆ, ಕಾಲೊನಿಗಳಲ್ಲಿ ಓಪನ್ ಜಿಮ್ ಮಾಡಿದ್ದರಿಂದ ಕನಿಷ್ಠ 5-10 ರ‍್ಷ ಆಯುಷ್ಯ ಹೆಚ್ಚಿಗೆ ಮಾಡಿರುವ ತೃಪ್ತಿಯಿದೆ. ಯುವಕರು, ಮಹಿಳೆಯರು, ವೃದ್ಧರಿಗೆ ಉದ್ಯಾನ್, ಜಿಮ್ ಉಪಯೋಗ ಆಗಿದೆ.  ಕಾರಾಗೃಹ ಸಿಬ್ಬಂದಿಗಳಿಗೆ ಶುದ್ಧ ನೀರು, ಜಿಮ್ ವ್ಯವಸ್ಥೆ ಅವಶ್ಯಯಿತ್ತು. ಹೀಗಾಗಿ ನಮ್ಮ ಸಿದ್ಧಸಿರಿಯಿಂದ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌