ಪ್ರೊ. ರಾಜು ಆಲಗೂರ ಸೇರಿ ರಾಜ್ಯದ ಏಳು ಜನರಿಗೆ ಲೋಕಸಭೆ ಟಿಕೆಟ್ ಘೋಷಿಸಿದ ಕಾಂಗ್ರೆಸ್

ವಿಜಯಪುರ: ಮಾಜಿ ಶಾಸಕ ಪ್ರೊ. ರಾಜು ಆಲಗೂರ ಸೇರಿದಂತೆ ಏಳು ಜನ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.

ಒಟ್ಟು 28 ಕ್ಷೇತ್ರಗಳನ್ನು ಕರ್ನಾಟಕ ಹೊಂದಿದ್ದು, ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಏಳು ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದೆ.

ಎಂ. ಎಂ, ಎಂ. ಫಿಲ್ ಪದವೀಧರರಾಗಿರುವ ಪ್ರೊ. ರಾಜು ಆಲಗೂರ ಅವರು, ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.  ಅಲ್ಲದೇ, ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.  1999 ಬಳ್ಳೊಳ್ಳಿ ಮತ್ತು 2013ರಲ್ಲಿ ನಾಗಠಾಣ ಮೀಸ,ಲು ಕ್ಷೇತ್ರಗಳಿಂದ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.  2013-18ರ ಅವಧಿಯಲ್ಲಿ ಸಿಎಂ ಸಂಸದೀಯ ಕಾರ್ಯದರ್ಶಿ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.  ಸಧ್ಯಕ್ಕೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಈಗ ಪ್ರೊ. ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಬಿಜಾಪುರ ಮೀಸಲು ಕ್ಷೇತ್ರದ ಟಿಕೆಟ್ ನೀಡಿ ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುತ್ತಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್ ಗೋಷಿಸಿರುವ ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ಹೆಸರು ಇಲ್ಲಿವೆ.

  1. ಬಿಜಾಪುರ ಎಸ್.ಸಿ- ಎಚ್. ಆರ್. ಆಲಗೂರ(ರಾಜು)
  2. ಹಾವೇರಿ- ಆನಂದಸ್ವಾಮಿ ಗಡ್ಡದೇವರಮಠ
  3. ಶಿವಮೊಗ್ಗ- ಗೀತಾ ಶಿವರಾಜಕುಮಾರ
  4. ಹಾಸನ- ಎಂ. ಶ್ರೇಯಸ್ ಪಟೇಲ
  5. ತುಮಕೂರು- ಎಸ್. ಪಿ. ಮುದ್ದುಹನುಮೇಗೌಡ
  6. ಮಂಡ್ಯ- ವೆಂಕಟರಮಣಗೌಡ(ಸ್ಟಾರ್ ಚೆಂದ್ರು)
  7. ಬೆಂಗಳೂರು ಗ್ರಾಮಾಂತರ- ಡಿ. ಕೆ. ಸುರೇಶ

 

 

Leave a Reply

ಹೊಸ ಪೋಸ್ಟ್‌