ಈ ವರ್ಷ ನೇತ್ರಬಾಧೆ ಕಾಡಲಿದೆ- ಕೀಟಕಾಟ ಹೆಚ್ಚಾಗಲಿದೆ- ಜಾತಿಕಲಹ, ಯೋಧರಿಗೆ ನೋವು, ಉತ್ತಮರಿಗೆ ರಾಜಕೀಯ ಲಾಭವಿದೆ- ಹೊಳೆಬಬಲಾದಿ ಕಾರ್ಣಿಕರ ಭವಿಷ್ಯವಾಣಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಚಂದ್ರಗಿರಿ ಶ್ರೀ ಸದಾಶಿವ ಮುತ್ಯಾ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇವಸ್ಥಾನದ ಕಾರ್ಣಿಕ ಶ್ರೀ ಸಿದ್ಧಾರಮಯ್ಯ ಹೊಳಿಮಠ 2024 ನೇ ವರ್ಷದ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.  ಸದಾಶಿವ ಮುತ್ಯಾರ ಮಠದಲ್ಲಿ ನುಡಿಯಲಾಗುವ ಕಾಲಜ್ಞಾನ ಭವಿಷ್ಯ ನಿಜವಾಗುವುದರಿಂದ ಈ ಕಾರ್ಯಕ್ರಮ ವೀಕ್ಷಿಸಲು ಕರ್ನಾಟಕವಷ್ಟೇ ಅಲ್ಲ, ನೆರೆಯ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.  ಅದರಂತೆ ಈ ವರ್ಷದ ಕಾಲಜ್ಞಾನಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಶ್ರೀಮಠದ ಪೀಠಾಧಿಪತಿಗಳು ಮತ್ತು […]

ಲಿಂಗಾಯಿತ ವಿರೋಧಿ ಎಂದವರ ನಾಲಿಗೆಯನ್ನು ದೇವರ ಕತ್ತರಿಸಲಿ- ಇತಿಹಾಸ ನಿರ್ಮಿಸದೇ ಸಾಯಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ನಾನು ಲಿಂಗಾಯಿತ ವಿರೋಧಿ ಎಂದು ಹೇಳಿದವರ ನಾಲಿಗೆಯನ್ನು ದೇವರು ಕತ್ತರಿಸಲಿ.  ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿಯೇ ಸಾಯುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ, ಒಂದು ಉತ್ಪನ್ನ ಮಳಿಗೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೂರು ಬಾರಿ ವಿಜಯಪುರ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ.  ಪ್ರಧಾನಿ ಮೊದಿ ಅವರಿಗೆ ದೇಶದ ಚಿಂತನೆ ಅಭಿವೃದ್ದಿ ಬಿಟ್ಟು ಬೇರೆ ಕೆಲಸವಿಲ್ಲ.  ರಾಮಮಂದಿರ ನಿರ್ಮಾಣ ಮಾಡಿದರು.  ವಿಜಯಪುರ ಜಿಲ್ಲೆಗೆ ಏಳು […]