ವಿಜಯಪುರ ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟದ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆ

ವಿಜಯಪುರ: ವಿಜಯಪುರ ಜಿಲ್ಲಾ ಕೃಷಿಯೆತರ ಪತ್ತಿನ ಸಹಕಾರಿ ಸಂಘದ ಒಕ್ಕೂಟದ ಚುನಾವಣೆಯಲ್ಲಿ ಎಲ್ಲ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರ.

ವಿಜಯಪುರ ನಗರ ಮತಕ್ಷೇತ್ರದಿಂದ ಪತ್ರಕರ್ತ ದೀಪಕ ಶಿಂತ್ರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯ ಗುರುಶಾಂತ ನಿಡೋಣಿ, ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಪರಶುರಾಮ ಚಿಂಚಲಿ, ಡಾ. ಸದಾಶಿವ ಪವಾರ, ನಬಿಸಾಬ್ ಕರ್ಜಗಿ, ಇಂಡಿ ತಾಲೂಕಾ ಮತಕ್ಷೇತ್ರದಿಂದ ರಾಜ್ಯ ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ವಿಜಯಪುರ ಗ್ರಾಮೀಣ ಕ್ಷೇತ್ರದ ಬಸವರಾಜ ಬಂಡಿ, ಮುದ್ದೇಬಿಹಾಳ ತಾಲೂಕಾ ಮತಕ್ಷೇತ್ರದಿಂದ ಬಸವರಾಜ ಇಸ್ಲಾಂಪುರ, ಬಸವಣ ಬಾಗೇವಾಡಿ ತಾಲೂಕು ಮತಕ್ಷೇ್ತರದಿಂದ ಸಿದ್ದಪ್ಪ ಬಾಳಗೊಂಡ, ಸಿಂದಗಿ ತಾಲೂಕು ಮತಕ್ಷೇತ್ರದಿಂದ ಡಾ. ರಾಮರಾವ ನಾಯಕ, ಚಡಚಣ ತಾಲೂಕು ಮತಕ್ಷೇತ್ರದಿಂದ ಬಸವರಾಜ ಸಾವಕಾರ ಅವಿರೋಧ ಆಯ್ಕೆಯಾಗಿದ್ದಾರೆ.

ಈ ಕುರಿತು ಚುನಾವಣಾಧಿಕಾರಿ ಮತ್ತು ಸಹಕಾರ ಸಂಘಗಳ  ಉಪನಿಬಂಧಕಿ ಎಸ್. ಕೆ.  ಭಾಗ್ಯಶ್ರೀ ಘೋಷಣೆ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌