ಸಾಮರಸ್ಯ, ಸಹಬಾಳ್ವೆ ಸಾರುವ ಮಾನವ ಧರ್ಮಕ್ಕೆ ಜಯವಾಗಲಿ- ಸೋಮನಾಥ ಶಿವಾಚಾರ್ಯರು

ವಿಜಯಪುರ: ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆ, ಸರ್ವರಿಗೂ ಒಳಿತನ್ನು ಬಯಸುವ ಮಾನವ ಧರ್ಮಕ್ಕೆ ಜಯವಾಗಲಿ.  ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಜಗದ್ಗುರು ರೇಣುಕಾಚಾರ್ಯರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಕನ್ನೂರಿನ ಸೋಮನಾಥ ಶಿವಾಚಾರ್ಯರು ಹೇಳಿದ್ದಾರೆ.

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ನಡೆದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಬಳಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು, ಯುವ ಮುಖಂಡ ಗುರುಪಾದಯ್ಯ ಗಚ್ಚಿನಮಠ, ಸಂಜು ಹಿರೇಮಠ, ಚಿದಾನಂದ ಹಿರೇಮಠ, ಸಚೀನ ಬೂದಿಹಾಳಮಠ, ಅಭಿಷೇಕ ಪಾಟೀಲ, ಮಂಜುನಾಥ ಹಿರೇಮಠ, ಆನಂದ ಮದಭಾವಿ, ಸಚೀನ ಮಠಪತಿ, ಬಸವರಾಜ ಮೆಡ್ಲಿ, ಮಲ್ಲಯ್ಯ ಹಿರೇಮಠ, ಸದಾನಂದ ಪೂಜಾರಿ, ಸೋಮು ಅಂಗಡಿ, ರಾಜು ಶಟಗಾರ, ಪ್ರಸಾದ ಯಡಹಳ್ಳಿ, ಅಪ್ಪು ಸಿಂದಗಿ, ಸೋಮು ಅತನೂರು, ಕಂಠು ಬೂದಿಹಾಳ, ಶ್ರೀಶೈಲ ಲದ್ದಿಮಠ, ಅಜಯ ಮಠಪತಿ, ವಿಶ್ವನಾಥ ಹಿರೇಮಠ, ಕಿರಣ ಅಣ್ಮಪ್ಪನವರ, ಪಾಂಡು ರಜಪೂತ ಮುಂತಾದವರು ಉಪಸ್ಥಿತರಿದ್ದರು.

ಸಿದ್ಧರಾಮೇಶ್ವರ ಹಿರೇಮಠ ಸ್ವಾಗತಿಸಿದರು. ಅಶೋಕ ತಿಮಶೆಟ್ಟಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌