ಬಾಹುಬಲಿಗೆ ನೈವೇದ್ಯ ಕಟಂಬಲಿ- ಬಸವ ನಾಡಿನಲ್ಲಿ ವಿಶಿಷ್ಠ ಜಾತ್ರೆಗೆ ಸಾಕ್ಷಿಯಾದ ರಂಭಾಪುರ ಜನತೆ

ವಿಜಯಪುರ:  ದೇಶದಲ್ಲಿಯೇ ಅತೀ ಹೆಚ್ಚು ಜಾತ್ರೆ ನಡೆಯುವ ಜಿಲ್ಲೆ ಬಸವನಾಡಿನ ವಿಜಯಪುರ.  ಈ ಲ್ಲೆಯಲ್ಲಿ ಪ್ರತಿದಿನ ಒಂದಿಲ್ಲೋಂದು ಊರಿನಲ್ಲಿ ಒಂದಿಲ್ಲೋಂದು ಜಾತ್ರೆಗಳು, ದೇವಸ್ಥಾನದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.  ಅದರಲ್ಲೂ ಒಂದೊಂದು ಊರಿನಲ್ಲಿ ಒಂದು ವಿಶೇಷ ಜಾತ್ರೆಗಳು ನಡೆಯುತ್ತವೆ.  ಕೆಲವು ಜಾತ್ರೆಗಳನ್ನು ಊರಿನ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದರೆ, ಮತ್ತೆ ಹಲವು ಜಾತ್ರೆಗಳನ್ನು ಒಂದೊಂದು ಕುಟುಂಬಗಳು ಕಾರ್ಯಕ್ರಮದ ರೂಪದಲ್ಲಿ ಆಚರಿಸುತ್ತವೆ. ಇಂಥ ವಿಶೇಷ ಜಾತ್ರೆಯೊಂದು ಗುಮ್ಮಟ ನಗರಿ ವಿಜಯಪುರದ ಹೊರಭಾಗದಲ್ಲಿರುವ ರಂಭಾಪುರ ಗ್ರಾಮದಲ್ಲಿ ನಡೆಯಿತು.  […]