ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪಾದಯಾತ್ರೆ ಮೂಲಕ ಮತಯಾಚನೆ

ವಿಜಯಪುರ: ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ಗುಮ್ಮಟ ನಗರಿ ವಿಜಯಪುರದಲ್ಲಿ ಪಾದಯಾತ್ರೆ, ಮೂಲಕ ಬಿರುಸಿನ ಪ್ರಚಾರ ನಡೆಸಿದರು. 

ನಗರದ ವಾರ್ಡ್ ಸಂಖ್ಯೆ 32, 33 ಮತ್ತು 34ರಲ್ಲಿ ಪಾದಯಾತ್ರೆನಡೆಸಿದ ಅವರು, ನಗರದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.  ಈ ಸಲ ಮತದಾರರು ಬದಲಾವಣೆ ಬಯಸಿರುವುದು ನಿಚ್ಚಳವಾಗಿದೆ.  ರಾಜ್ಯದಲ್ಲಿ ಎಸ್. ಸಿದ್ದರಾಮಯ್ಯ ಅವರ ಸರಕಾರದ ಸಾಧನೆ ಮನೆ ಮತ್ತು ಮನ ಮುಟ್ಟಿದೆ.  ಜಿಲ್ಲೆಯೊಂದರಲ್ಲಿಯೇ ನಾಲ್ಕು ಲಕ್ಷದಷ್ಟು ಮಹಿಳೆಯರು ಸರಕಾರ ನೀಡಿದ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಹೇಳಿದರು.

ರಾಜ್ಯ ಸರಕಾರದ ಯೋಜನೆಗಳಿಂದಾಗಿ ಜನಸಾಮಾನ್ಯರ ಬದುಕು ಸಹ್ಯವಾಗಿದೆ.  ಗ್ಯಾರಂಟಿ ಯೋಜನೆಗಳು ಎಲ್ಲರ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ತಂದಿದೆ.  ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಯರಿಗೆ ತಿಂಗಳಿಗೆ ರೂ. 1 ಲಕ್ಷ ಹಣ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿ ಮಾಡಲಾಗುವುದು.  ಇದರಿಂದ ಬಡವರ ಜೀವನ ಮಟ್ಟ ಸುಧಾರಿಸಲಿದೆ ಎಂದು ಹೇಳಿದರು.

ಬಬಲೇಶ್ವರ ನಾಕಾದಿಂದ ಪ್ರಾರಂಭವಾದ ಪಾದಯಾತ್ರೆ ಜೋರಾಪುರ ಪೇಠ, ದುರ್ಗಾದೇವಿ ದೇವಸ್ಥಾನ, ಶಂಕರಲಿಂಗ ದೇವಸ್ಥಾನ, ಸೆಟಲೈಟ್ ಬಸ್ ನಿಲ್ದಾಣ, ಇಬ್ರಾಹಿಂ ರೋಜಾ ಪ್ರದೇಶದಲ್ಲಿ ನಡೆಯಿತು.

ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ ಹಮೀದ ಮುಶ್ರೀಫ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಟಪಾಲ್ ಎಂಜಿನಿಯರ್, ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ, ನಗರಸಭೆ ಮಾಜಿ ಸದಸ್ಯ ಅಬ್ದುಲ್‌ ರಜಾಕ ಹೊರ್ತಿ, ವಿಡಿಎ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಡಾ. ಗಂಗಾಧರ ಸಂಬಣ್ಣಿ ಮುಖಂಡರಾದ ಚಂದ್ರಕಾಂತ ಶೆಟ್ಟಿ, ಆಜಾದ ಪಟೇಲ, ಸಂಗನಗೌಡ ಹರನಾಳ, ಮಹಾದೇವಿ ಗೋಕಾಕ, ಅಫ್ಜಲ ಜಾನವೆಕರ, ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಕೆಪಿಸಿಸಿ ಸಂಯೋಜಕ ವಿನೋದ ವ್ಯಾಸ, ಉಪಮೇಯರ್ ದಿನೇಶ ಹಳ್ಳಿ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಅಲ್ತಾಫ್ ಇಟಗಿ, ಅಪ್ಪು ಪೂಜಾರಿ, ಸದ್ದಾಂ ನಾಡೆವಾಲೆ, ಆಸೀಫ್ ಶಾನವಾಲೆ, ಇದ್ರೂಷ್ ಬಕ್ಷಿ, ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರಾದ ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ಬಾಪುಗೌಡ ಪಾಟೀಲ, ಅಮಿತ ಚವ್ಹಾಣ, ಆನಂದ ಜಾಧವ, ಮೆಂಡೆಗಾರ, ಲಾಲಸಾಬ ಕೊರಬು, ವಿಜಯಕುಮಾರ ಘಾಟಗೆ, ವಸಂತ ಹೊನಮೊಡೆ, ಅಷ್ಫಾಕ ಮನಗೂಳಿ, ಐ. ಎಂ. ಇಂಡಿಕರ, ಫಿರೋಜ ಶೇಖ್, ಫಯಾಜ್ ಕಲಾದಗಿ, ಅಬ್ದುಲಪೀರಾ ಜಮಖಂಡಿ, ಸಂತೋಷ ಬಾಲಗಾಂವಿ, ಹಾಜಿಲಾಲ ದಳವಾಯಿ, ಗಣೇಶ ಕಬಾಡೆ, ಪರಶುರಾಮ ಹೊಸಮನಿ, ಇಲಿಯಾಸಅಹ್ಮದ ಸಿದ್ದಿಕಿ, ಜಾಫರ ಸುತಾರ, ಅಕ್ರಮ ಮಾಶ್ಯಾಳಕರ, ಗಂಗೂಬಾಯಿ ಧುಮಾಳೆ, ದೀಪಾ ಕುಂಬಾರ, ಭಾರತಿ ಹೊಸಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಸಮಿಮಾ ಅಕ್ಕಲಕೋಟ, ಲಕ್ಷ್ಮಿ ಕ್ಷೀರಸಾಗರ, ಸವಿತಾ ಧನರಾಜ, ಕಾಶಿಬಾಯಿ ಹಡಪದ, ಅವಿನಾಶ ಹೇರಲಗಿ, ವಿಜಯಕುಮಾರ ಕಾಳೆ, ಪ್ರದೀಪ ಸೂರ್ಯವಂಶಿ, ತಾಜುದ್ದೀನ ಖಲೀಫಾ, ಅಡಿವೆಪ್ಪ ಸಾಲಗಲ, ಸದಾಶಿವ ಹಟಗಾರ, ಸಿದ್ದು ತೊರವಿ, ಅಶೋಕ ನಾಯ್ಕೋಡಿ, ಕುಲದೀಪಸಿಂಗ ಪೋತಿವಾಲಾ, ವರ್ಷಾ ಭೋವಿ, ಅನಿಲ ಸೂರ್ಯವಂಶಿ, ರಮೇಶ ಕೊಕಟನೂರ, ಹಾಜಿ ಪಿಂಜಾರ, ಶಕೀರ ಖಾಜಿ, ಭಡೇಗರ, ಇಸಾಕ ಗುಲಬರ್ಗಾ, ಸುಂದರಪಾಲ ರಾಠೋಡ, ರೋಜೆವಾಲೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌