ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ನನ್ನನ್ನು ಮತ್ತೊಮ್ಮೆ ಆಶೀರ್ವದಿಸಿ: ರಮೇಶ ಜಿಗಜಿಣಗಿ ಮನವಿ

ವಿಜಯಪುರ: ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಲು ನನ್ನನ್ನು ಮತ್ತೋಮ್ಮೆ ಲೋಕಸಭೆ ಸದಸ್ಯನಾಗಿ ಮತ್ತೊಮ್ಮೆ ಆಶೀರ್ವದಿಸಿ ಅವಕಾಶ ನೀಡಬೇಕು ಎಂದು ವಿಜಯಪುರ ಎನ್‌ಡಿಎ ಅಭ್ಯರ್ಥಿ ಮತ್ತು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿದ್ದಾರೆ.

ದೇವರ ಹಿಪ್ಪರಗಿ ಕ್ಷೇತ್ರದ ಮುಳಸಾವಳಗಿ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜಿ. ಎಚ್. ಪಟೇಲ ಅವರ ಜೊತೆಗೂಡಿ ಹೆಜ್ಜೆ ಹಾಕಿ ರಾಜಕಾರಣ ಮಾಡಿದ್ದೇನೆ.  12 ಚುನಾವಣೆಗಳಲ್ಲಿ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ.  ಅದೇ ರೀತಿ ಈ ಬಾರಿಯೂ ನರೇಂದ್ರ ಮೋದಿ ಅವರನ್ನು ಮತ್ತೋಮ್ಮೆ ಪ್ರಧಾನ ಮಂತ್ರಿಯಾಗಿ ಮಾಡಲು ನಾನು ಕೈ ಎತ್ತಲು ಅವಕಾಶ ನೀಡಬೇಕು ಎಂದು ವಿನಂತಿ ಮಾಡಿದರು.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಎನ್‌.ಡಿ.ಎ ಅಭ್ಯರ್ಥಿ ರಮೇಶ ಜಿಗಜಿಣಗಿ ಪ್ರಚಾರ ಕೈಗೊಂಡರು

 

 

ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಮಾತನಾಡಿ, ಜಗತ್ತಿಗೆ ಮೋದಿ ಅವರ ನಾಯಕತ್ವ ಬೇಕು ಎಂದು ಇಡೀ ವಿಶ್ವ ಹೇಳುತ್ತಿದೆ.  ಎಲ್ಲಿ ಮೋದಿ ಇರುತ್ತಾರೋ ಅಲ್ಲಿ ಶಾಂತಿ ಇರುತ್ತದೆ.  ಪ್ರತಿದಿನ 18 ರಿಂದ 20 ಗಂಟೆಗಳ ಕಾಲ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ.  ಎಂದೂ ತಮ್ಮ ಕುಟುಂಬದ ಬಗ್ಗೆ ಸ್ವಾರ್ಥ ಚಿಂತನೆ ಮಾಡದೇ ಸದಾಕಾಲ ದೇಶದ ಬಗ್ಗೆ ಯೋಚಿಸುತ್ತಾ, ದೇಶದ ಜನರೇ ತಮ್ಮ ಕುಟುಂಬದ ಸದಸ್ಯರು ಎಂದು ಪ್ರೀತಿಸುವ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ  ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಿಂಗರಾಜ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.  ಈರಣ್ಣ ರಾವೂರ,ಮುಳುನಗೌಡ ಪಾಟೀಲ, ಪ್ರಭುಗೌಡ ಬಿರಾದಾರ, ಶಿಲ್ಪಾ ಕುದರಗೊಂಡ,ಸಿದ್ದು ಬುಳ್ಳಾ, ರಮೇಶ ಮಸಬಿನಾಳ,ಪ್ರಕಾಶ ದೊಡಮನಿ, ಅವ್ವಣ್ಣ, ಸಾಬಣ್ಣ ಬಾಗೇವಡಿ,ರಾವುತಪ್ಪ ಸಾಹುಕಾರ ಮೂಲಿಮನಿ,ಭೀಮನಗೌಡ ಲಚ್ಯಾಣಿ,ಸಂಗನಗೌಡ ಬಿರಾದಾರ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌