ಮಗು ಸಾತ್ವಿಕ ಜಿಲ್ಲಾಸ್ಪತ್ರೆಯಿಂದ ಡಿಶ್ಚಾರ್ಜ್- ಮಗುವನ್ನು ಭೇಟಿ ಮಾಡಿದ ಸಂಸದ ರಮೇಶ ಜಿಗಜಿಣಗಿ- ಲಚ್ಯಾಣದಲ್ಲಿ ಮಗುವಿಗೆ ಹೃದಯಸ್ಪರ್ಷಿ ಸ್ವಾಗತ

ವಿಜಯಪುರ: ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿ ಸಾವನ್ನು ಗೆದ್ದು ಬಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಗು ಸಾತ್ವಿಕ ಮುಜಗೊಂಡ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾನೆ. ಕಳೆದ ಮೂರು ದಿನಗಳಿಂದ ಎಲ್ಲ ಪರೀಕ್ಷೆಗಳನ್ನು ನಡೆಸಿದ ಮಕ್ಕಳ ವೈದ್ಯರು ಮಗುು ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ಸಮಸ್ಯೆ ಕಾಣಿಸದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದರು.  ತಮ್ಮ ಪುತ್ರನೊಂದಿಗೆ ನಗು ನಗುತ್ತಲೆ ತಾಯಿ ಪೂಜಾ ಮತ್ತು ಸಂದೆ ಸತೀಶ ಆ್ಯಂಬ್ಯೂಲನ್ಸ್ ಮತ್ತು ಪೊಲೀಸರ ಭದ್ರತೆಯಲ್ಲಿ ತಮ್ಮ ಸ್ವಗ್ರಾಮ ಲಚ್ಯಾಣಕ್ಕೆ ತೆರಳಿದರು. […]

ದಿನೇಶ ಗುಂಡೂರಾವ ವಿರುದ್ಧ ಯತ್ನಾಳ ವಾಗ್ದಾಳಿ- ಮೋದಿ ಪ್ರಧಾನಿ ಮಾಡಲು ಭಿನ್ನಮತ ಮರೆತು ಪ್ರಚಾರ ಮಾಡುತ್ತೇವೆ ಎಂದ ಶಾಸಕ

ವಿಜಯಪುರ: ಶಾಸಕ ದಿನೇಶ ಗುಂಡೂರಾವ ಅವರ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿರುವ ವಿಚಾರದ ಕುರಿತು ದಿನೇಶ ಗುಂಡೂರಾವ ಮಾಡಿರುವ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ನಮ್ಮ ಪದಾಧಿಕಾರಿ ಮೊಬೈಲ್ ಸಿಮ್ ವ್ಯಾಪಾರಿಗಳಿದ್ದಾರೆ.  ಅವರ ಬಳಿ ಯಾರು ಬಂದಿರುತ್ತಾರೆ ಎಂಬುದು ಹೇಗೆ […]