ಮಗು ಸಾತ್ವಿಕ, ಪೋಷಕರು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೋಂಡವರಿಗೆ ಲಚ್ಚಾಣದಲ್ಲಿ ಸನ್ಮಾನ

ವಿಜಯಪುರ: ತೆರೆದ ಕೊಳವೆ ಭಾವಿಗೆ ತಲೆ ಕೆಳಗಾಗಿ ಬಿದ್ದು 20 ಗಂಟೆಗಳ ನಂತರ ಸಾವನ್ನು ಜಯಿಸಿ ಬಂದ 13 ತಿಂಗಳ ಮಗು ಸಾತ್ವಿಕ ಮುಜಗೊಂಡ ಮತ್ತು ಆತನ ಪೋಷಕರನ್ನು ಇಂಡಿ ತಾಲೂಕಿನ ಸುಕ್ಷೇತ್ರ ಲತ್ಚಾಣದಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆಶೀರ್ವದಿಸಲಾಯಿತು.

ಲಚ್ಯಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ರಾತ್ರಿ ನಡೆದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಹಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರವಚನಕಾರ ಮಹಾಂತೀಯ ಶಾಸ್ತ್ರಗಳು ಸನ್ಮಾನಿಸಿ ಗೌರವಿಸಿದರು.

ಈ ಇದೇ ಸಂದರ್ಭದಲ್ಲಿ ಮಗುವಿನ ರಕ್ಷಣೆಗಾಗಿ ಶ್ರಮಿಸಿದ ವೈದ್ಯರು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೋಂಡ ಹಿಟಾಚಿ ವಾಹನ ಚಾಲಕರನ್ನೂ ಕೂಡ ಸನ್ಮಾನಿಸಿ ಗೌರವಿಸಲಾಯಿತು.

ಪ್ರವಚನ ಆಲಿಸಿದ ಮಗು ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡ ಸಾತ್ವಿಕ್ ಪೂಜ್ಯರ ಪ್ರವಚನ ಆಲಿಸಿ ತಂದೆ ತಾಯಿಯೊಂದಿಗೆ ಆನಂದಿಸಿತು ಕೈಯಲ್ಲಿ ವಿಭೂತಿಯನ್ನು ಹಿಡಿದು ಆಟವಾಡಿದೆ.

Leave a Reply

ಹೊಸ ಪೋಸ್ಟ್‌