ಇಂಚಗೇರಿ ಮಠಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ- ವಿರೋಧಿಗಳಿಗಿಂತ ಹೆಚ್ಚಿನ ರಣತಂತ್ರ ಹೆಣೆದಿದ್ದೇವೆ ಎಂದ ಬಿಜೆಪಿ ಅಭ್ಯರ್ಥಿ

ವಿಜಯಪುರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ದಿಢೀರ್ ಭೇಟಿ ನೀಡಿ, ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.  ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮತ್ತು ಭೀಮಾ ಹೋರಾಟಗಾರ ಪಂಚಪ್ಪ ಕಲಬುರ್ಗಿ ಅವರು ಚಿಕ್ಕೋಡಿ ಸಂಸದರ ಜೊತೆಯಲ್ಲಿದ್ದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಇಂಚಗೇರಿ ಮಠದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಸೀರ್ವಾದ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಗಳೊಂದಿಗೆ ಮಾತನಾಡಿ ಆಶೀರ್ವಾದ ಪಡೆದ ಅವರು, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮಠದ  ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ.  ನಮ್ಮ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಇಂಚಗೇರಿ ಮಠಗಳಿವೆ.  ಬಹಳ ದಿನಗಳಿಂದ ಈ ಸಂಪ್ರದಾಯದ ಮಠಕ್ಕೆ ಭೇಟಿ ನೀಡಬೇಕು ಎನ್ನುವ ಬಯಕೆ ಇತ್ತು.  ಇವತ್ತು ಕಾಲ ಕೂಡಿ ಬಂದಿದೆ.  ನಾನು ನಾಮಿನೇಶನ್ ಸಲ್ಲಿಸುತ್ತಿದ್ದೇನೆ.  ಅದಕ್ಕೂ ಮುನ್ನ ಇಂಚಗೇರಿ ಮೂಲ ಮಠದ ಗುರುಗಳ ದರ್ಶನ ಪಡೆಯುತ್ತಿದ್ದೇನೆ.  ಇಲ್ಲಿ ದರ್ಶನ ಪಡೆದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಇಂಚಗೇರಿ ಮಠಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು.

ಚಿಕ್ಕೋಡಿಯಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣವಿದೆ

ಚಿಕ್ಕೋಡಿಯಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ.  ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ, ನಾನು ಕೊರೊನಾ ಸಂದರ್ಭದಲ್ಲಿ ಮಾಡಿದ ಜನಸೇವೆ ಈ ಬಾರಿ ನನ್ನ ಕೈ ಹಿಡಿಯಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ಮಗಳನ್ನು ಗೆಲ್ಲಿಸಲು ಸಚಿವ ಸತೀಶ ಜಾರಕಿಹೊಳಿ ಓಡಾಟ ವಿಚಾರ

ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದ್ದು, ಮಗಳನ್ನು ಗೆಲ್ಲಿಸಲು ಸಚಿವರು ಓಡಾಟ ಮಾಡುತ್ತಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಅದು ಸ್ವಾಭಾವಿಕ.  ತಮ್ಮ ತಮ್ಮವರನ್ನು ಗೆಲ್ಲಿಸಲು ಓಡಾಡುವುದು ಸಹಜ.  ನಮ್ಮ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

 

ಉತ್ತಮ ಪಾಟೀಲ- ಸತೀಶ ಜಾರಕಿಹೊಳಿ ಭೇಟಿ ವಿಚಾರ

ಚಿಕ್ಕೋಡಿ ಕ್ಷೇತ್ರದ ಮುಖಂಡ ಉತ್ತಮ ಪಾಟೀಲ ಮತ್ತು ಸಚಿವ ಸತೀಶ ಜಾರಕಿಹೊಳಿ ಭೇಟಿ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತಮ ಪಾಟೀಲ ಅವರು ಸತೀಶ ಜಾರಕಿಹೊಳಿ ಜೊತೆ ಹೊಂದಾಣಿಕೆಯಿಂದ ನಮಗೆ ಯಾವುದೇ ಎಫೆಕ್ಟ್ ಉಂಟಾಗುವುದಿಲ್ಲ.  ರಾಜಕೀಯದಲ್ಲಿ ಇಬ್ಬರು ಆ ಕಡೆಗೆ ಹೋಗುವುದು, ಈ ಕಡಗೇ ಬರುವುದು ಸಾಮಾನ್ಯ.  ಉತ್ತಮ ಪಾಟೀಲ ಈಗಾಗಲೇ ನಮ್ಮ ವಿರೋಧಿ ಪಾಳಯದಲ್ಲಿಯೇ ಇದ್ದಾರೆ.  ಅವರು ಮತ್ತು ಸತೀಶ ಜಾರಕಿಹೊಳಿ ಭೇಟಿಯಿಂದಾಗಿ ನಮಗೆ ಯಾವುದೇ ಎಫೆಕ್ಟ್ಸ್ ಆಗುವುದಿಲ್ಲ.  ಉತ್ತಮ ಪಾಟೀಲ ಅವರಿಂದ ನಮಗೆ ಲಾಭ ನಷ್ಟ ಎರಡು ಇಲ್ಲ ಎಂದು ಅಣ್ಣಾಸಾಹೇಬ ಜೊಲ್ಲೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸಚಿವರ ಮಕ್ಕಳನ್ನು ಕಣಕ್ಕಿಳಿಸಿರುವ ವಿಚಾರ

ಕಾಂಗ್ರೆಸ್ ಸಚಿವರು ಮಕ್ಕಳನ್ನು ಕಣಕ್ಕಿಳಿಸಿರುವ ಕುರಿತು ಕೇಳಲಾದ ಉತ್ತರಿಸಿದ ಸಂಸದರು, ಅವರಿಗೆ ಕ್ಯಾಂಡಿಡೆಟ್ ಸಿಕ್ಕಿಲ್ಲ.  ಅದಕ್ಕೆ ಮಕ್ಕಳನ್ನು ಕಣಕ್ಕಿಳಿಸಿದ್ದಾರೆ.  ಒತ್ತಾಯ ಪೂರ್ವಕವಾಗಿ ಮಕ್ಕಳನ್ನು ಕಣಕ್ಕೆ ಇಳಿಸಿದ್ದಾರೆ ಎನಿಸುತ್ತದೆ.  ಮಕ್ಕಳನ್ನು ಯಾಕೆ ಕಣಕ್ಕೆ ಇಳಿಸಿದ್ದಾರೆ ಎಂಬುದನ್ನು ಸಿಎಂ, ಡಿಸಿಎಂ ಬಳಿ ಕೇಳಿ ಎಂದು ಅವರು ಹೇಳಿದರು.

ಚಿಕ್ಕೋಡಿಯಲ್ಲಿ ಮೋದಿ ಅಲೆ ಇದೆ

ಚಿಕ್ಕೋಡಿಯಲ್ಲಿ ಮೋದಿ ಅಲೆ ಇದೆ.  ನಾನು ಮಾಡಿದ ಕೆಲಸ ಕಾರ್ಯಗಳು ಗೆಲುವು ತಂದು ಕೊಡಲಿದೆ.  ವಿರೋಧಿಗಳಿಗಿಂತ ಹೆಚ್ಚು ರಣತಂತ್ರ ಹೆಣೆಯುತ್ತಿದ್ದೇವೆ.  ಚಿಕ್ಕೋಡಿ ಲೋಕಸಭೆಯ ಎಂಟು ಮತಕ್ಷೇತ್ರಗಳಲ್ಲಿ ನಾವು ಲೀಡ್ ಆಗುತ್ತೇವೆ.  ವಿರೋಧಿಗಳಿಂದ ಹೆಚ್ಚಾಗಿಯೇ ನಾವು ರಣತಂತ್ರ ಹೆಣೆಯುತ್ತಿದ್ದೇವೆ.  ಈಗ ಹೇಳಲ್ಲ.  ನಾವು ರಣತಂತ್ರ ಹೂಡಿದ್ದೇವೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

Leave a Reply

ಹೊಸ ಪೋಸ್ಟ್‌