UPSC Rank: ವಿಜಯಪುರ ಯುವಕ ಸಂತೋಷ ಶ್ರೀಕಾಂತ ಶಿರಾಡೋಣ ಗೆ 641ನೇ ರ್ಯಾಂಕ್

ವಿಜಯಪುರ: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಮತ್ತೋರ್ವ ಯುವಕ ಪಾಸ್ ಆಗುವ ಮೂಲಕ ಗಮನ ಸೆಳೆದಿದ್ದಾನೆ.

ಸಂತೋಷ ಶ್ರೀಕಾಂತ ಶಿರಾಡೋಣ ದೇಶಕ್ಕೆ 641ನೇ ರ್ಯಾಂಕ್ ಪಡೆದಿದ್ದು, ಶಿರಾಡೋಣ ಕುಟುಂಬದಲ್ಲಿ ಸಂತಸ ಮೂಡಿಸಿದೆ.

ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ 5ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಯುವಕ, 6 ರಿಂದ 7ನೇ ತರಗತಿವರೆಗೆ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆಯಲ್ಲಿ ಮತ್ತು 8 ರಿಂದ 10ನೇ ತರಗತಿಯನ್ನು ವಿಜಯಪುರ ತಾಲೂಕಿನ‌ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.

ಯುಪಿಎಸ್‌ಸಿಯಲ್ಲಿ ರ್ಯಾಂಕ್ ಪಡೆದ ಸಂತೋಷ ಶ್ರೀಕಾಂತ ಶಿರಾಡೋಣ ಕುಟುಂಬ ಸದಸ್ಯರೊಂದಿಗಿರುವ ತೆಗೆಸಿಕೊಂಡಿರುವ ಫೋಟೋ.

ಪಿಯುಸಿಯನ್ನು ಹೈದರಾಬಾದಿನ ವಿಚೇತನಾ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಆರ್ ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ‌ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಯುವಕ, 2019ರಿಂದ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಪ್ರಯತ್ನ ಮಾಡುತ್ತಿದ್ದರು.  2023 ರಲ್ಲಿ ಉತ್ತೀರ್ಣಪಾಗಿದ್ದಾರೆ.  ಇದಕ್ಕೂ ಮುಂಚೆ ದೆಹಲಿಯ ವಾದಿರಾಮ ಕೋಚಿಂಗ್ ಸೆಂಟರಿನಲ್ಲಿ ಸಂತೋಶ ಶ್ರೀಕಾಂಕ ಶಿರಾಡೋಣ ತರಬೇತಿ ಪಡೆದಿದ್ದಾರೆ.

Leave a Reply

ಹೊಸ ಪೋಸ್ಟ್‌