ಇಂಚಗೇರಿ ಮಠಕ್ಕೆ ತೆರಳಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಸುಕ್ಷೇತ್ರ ಇಂಚಗೇರಿ ಮಠಕ್ಕೆ ಭೇಟಿ ನೀಡಿ ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪ್ರೊ. ರಾಜು ಆಲಗೂರ ಅವರಿಗೆ ಆಶೀರ್ವದಿಸಿದ ಶ್ರೀಗಳು, ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಎಲ್. ಚವ್ಹಾಣ, ಜಿ. ಪಂ. ಮಾಜಿ ಸದಸ್ಯ ಕಾಳು ಬೆಳ್ಳುಂಡಗಿ, ಮುಖಂಡರಾದ ಅಶೋಕ ಬೆಳ್ಳುಂಡಗಿ, ಮಲ್ಲಣ್ಣ ಸಕ್ರಿ(ಸಾಲಿ), ಕೆ. ಎಂ. ಅರವತ್ತಿ, ರೇವಣಸಿದ್ದ […]

Candidates List:ವಿಜಯಪುರದಲ್ಲಿ ನಾಮಪತ್ರ ಸಲ್ಲಿಸಿದ 21 ಅಭ್ಯರ್ಥಿಗಳು, ಯಾವ ಪಕ್ಷ ಗೊತ್ತಾ?

ವಿಜಯಪುರ: ದೇಶದಲ್ಲಿ ಮೂರನೇ ಮತ್ತು ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ಏ. 12 ರಿಂದ ಏ. 19ರ ವರೆಗೆ 21 ಅಭ್ಯರ್ಥಿಗಳು ಒಟ್ಟು 35 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.  ಸಂಸದ ರಮೇಶ ಜಿಗಜಿಣಗಿ(ಬಿಜೆಪಿ), ಪ್ರೊ. ರಾಜು ಆಲಗೂರ(ಕಾಂಗ್ರೆಸ್) ಸೇರಿದಂತೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಮತ್ತು ಪಕ್ಷಗಳ ಮಾಹಿತಿ ಇಲ್ಲಿದೆ. ರಮೇಶ ಜಿಗಜಿಣಗಿ- ಬಿಜೆಪಿ ಹಣಮಂತರಾವ ಆಲಗೂರ- ಕಾಂಗ್ರೆಸ್ ಕಲ್ಲಪ್ಪ ತೊರವಿ- ಬಿ.ಎಸ್ಪಿ ನಾಗಜ್ಯೋತಿ ಬಿ. ಎನ್.- (ಎಸ್.ಯು.ಸಿಐ) […]

Lokasabhe Election: ನಾಮಪತ್ರ ಸಲ್ಲಿಕೆ ಮುಕ್ತಾಯ- ಈವರೆಗೆ 21 ಅಭ್ಯರ್ಥಿಗಳಿಂದ 35 ನಾಮಪತ್ರ ಸಲ್ಲಿಕೆ

ವಿಜಯಪುರ: ಮೂರನೇ ಹಂತದಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆಯಲಿರುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಬಿಜಾಪುರ(ಪ. ಜಾ) ಲೋಕಸಭೆ ಮತಕ್ಷೇತ್ರದಲ್ಲಿ ಕೊನೆಯ ದಿನ ಒಂಬತ್ತು ಅಭ್ಯರ್ಥಿಗಳು ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭವಾದ ಏಪ್ರಿಲ್ 12 ರಿಂದ ಕೊನೆಯ ದಿನ ಏಪ್ರಿಲ್ 19ರ ವರೆಗೆ ಒಟ್ಟು 21 ಅಭ್ಯರ್ಥಿಗಳು ಒಟ್ಟು 35 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಎರಡು, ಎಸ್ ಯು ಸಿ […]

ನಾಗರಭಾವಿ ಫೋರ್ಟಿಸ್‌ ಅತ್ಯಾಧುನಿಕ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಕೆ: ಆಸ್ಪತ್ರೆ ಉದ್ಘಾಟಿಸಿದ ನಟ ಉಪೇಂದ್ರ

ಬೆಂಗಳೂರು: ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ, ಬರೋಬ್ಬರಿ 80 ಹಾಸಿಗೆy ಸಾಮರ್ಥ್ಯಕ್ಕೆ ಹೆಚ್ಚಿಸುವ ಮೂಲಕ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದ್ದು, ಪಶ್ಚಿಮ ಬೆಂಗಳೂರಿನಲ್ಲಿ ಅತ್ಯುತ್ತಮ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ನಟ ಉಪೇಂದ್ರ ನಾಗರಭಾವಿಯ ಮಲ್ಟಿಸ್ಪೆಷಾಲಿಟಿ ಫೋರ್ಟಿಸ್‌ ಆಸ್ಪತ್ರೆಯನ್ನು ಉದ್ಘಾಟಿಸಿದರು, ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾಗರಭಾವಿ ಸಾಕಷ್ಟು ಬೆಳೆದಿದೆ, ಒಂದರ್ಥದಲ್ಲಿ ನಾಗರಭಾವಿ ಮಿನಿ ಗಾಂಧೀನಗರವಾಗಿದೆ, ಏಕೆಂದರೆ, ಶೇ.೯೦ರಷ್ಟು ಸಿನಿಮಾ ಮಂದಿ ಇದೇ ಸ್ಥಳದಲ್ಲಿ ವಾಸಿಸುತ್ತಿದ್ದಾರೆ, ಈ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಫೋರ್ಟಿಸ್‌ ಮೇಲ್ದರ್ಜೆಗೇರಿಸಿರುವುದು […]

Video News ಸಂಸದ ರಮೇಶ ಜಿಗಜಿಣಗಿ ಎರಡನೇ ಬಾರಿ ನಾಮಪತ್ರ ಸಲ್ಲಿಕೆ- ಎರಡು ಸೆಟ್ ಗಳಲ್ಲಿ ಉಮೇದುವಾರಿಕೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ 2ನೇ ಬಾರಿ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅವರು, ಜಿಲ್ಲಾ ಚುನಾವಣಾಧಿಕಾರಿ ಟಿ. ಭೂಬಾಲನ್ ಅವರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು. ಮೊದಲ ಸೆಟ್ ಸಲ್ಲಿಸುವಾಗ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ನ್ಯಾಯವಾದಿ ಸಂಗಮೇಶ ಹೌದೆ ಉಪಸ್ಥಿತರಿದ್ದರು. ವಿಡಿಯೋ ಸುದ್ದಿ ನೋಡಿ: ಎರಡನೇ ಸೆಟ್ ಸಲ್ಲಿಸುವಾಗ ಕಾರ್ಪೋರೇಟರ್ ರಾಜು ಮಗಿಮಠ, ಸುನಂದಾ ಕುಮಸಿ, […]