ಇಂಚಗೇರಿ ಮಠಕ್ಕೆ ತೆರಳಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಸುಕ್ಷೇತ್ರ ಇಂಚಗೇರಿ ಮಠಕ್ಕೆ ಭೇಟಿ ನೀಡಿ ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಪ್ರೊ. ರಾಜು ಆಲಗೂರ ಅವರಿಗೆ ಆಶೀರ್ವದಿಸಿದ ಶ್ರೀಗಳು, ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಇಂಚಗೇರಿ ಮಠಕ್ಕೆ ತೆರಳಿದ ಪ್ರೊ. ರಾಜು ಆಲಗೂರ ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಎಲ್. ಚವ್ಹಾಣ, ಜಿ. ಪಂ. ಮಾಜಿ ಸದಸ್ಯ ಕಾಳು ಬೆಳ್ಳುಂಡಗಿ, ಮುಖಂಡರಾದ ಅಶೋಕ ಬೆಳ್ಳುಂಡಗಿ, ಮಲ್ಲಣ್ಣ ಸಕ್ರಿ(ಸಾಲಿ), ಕೆ. ಎಂ. ಅರವತ್ತಿ, ರೇವಣಸಿದ್ದ ಬೂದಿಹಾಳ, ಡಾ. ರವಿದಾಸ ಜಾಧವ, ಶ್ರೀಮಠದ ಹಿರಿಯರಾದ ಶಂಕ್ರಪ್ಪ ಕೌಜಲಗಿ, ಮಹದೇವ ಮುರುಗೋಡ, ಗ್ರಾಮದ ಹಿರಿಯರಾದ ಭೀಮರಾಯಗೌಡ ಬಿರಾದಾರ, ಸಿದ್ದರಾಯಗೌಡ ಬಿರಾದಾರ, ಕಾಶಿನಾಥ ಗುಡ್ಡದ, ಮೌಲಾಲಿ ವಾಲಿಕಾರ, ಶಿವರಾಯ ಬೆಳ್ಳೆನವರ, ರೇವಣಸಿದ್ದ ಮಾನೆ, ರವಿ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌