Election: ಜಿಗಜಿಣಗಿ, ಆಲಗೂರ ಸೇರಿ 12 ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ- 9 ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ

ವಿಜಯಪುರ: ಲೋಕಸಭೆ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಸೇರಿ 12 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದ್ದು, ಒಂಬತ್ತು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. 

ಏ. 19 ರಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಒಟ್ಟು 21 ಅಭ್ಯರ್ಥಿಗಳು 35 ನಾಮಪತ್ರ ಸಲ್ಲಿಸಿದ್ದರು.  ಈ ನಾಮಪತ್ರಗಳ ಪರಿಶೀಲನೆ ನಡೆಯಿತು.  ಈ ಸಂದರ್ಭದಲ್ಲಿ 12 ಅಭ್ಯರ್ಥಿಗಳ ಅಭ್ಯರ್ಥಿಗಳ ನಾಮಪತ್ರ ಸ್ವೀಕಾರವಾಗಿದ್ದು, ಒಂಬತ್ತು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ.

ನಾಮಪತ್ರ ಸ್ವೀಕತವಾದ ಅಭ್ಯರ್ಥಿಗಳು, ಪಕ್ಷದ ಮಾಹಿತಿ.

  1. ಮಲ್ಲು ಹಾದಿಮನಿ- ಬಿಎಸ್ಪಿ
  2. ರಮೇಶ ಜಿಗಜಿಣಗಿ-ಬಿಜೆಪಿ
  3. ಹಣಮಂತರಾವ ಆಲಗೂರ- ಕಾಂಗ್ರೆಸ್
  4. ಕುಲಪ್ಪ ಭೀ ಚವ್ಹಾಣ- ಭಾರತೀಯ ಜವಾನ್ ಕಿಸಾನ ಪಕ್ಷ
  5. ಗಣಪತಿ ಲಾ ರಾಠೋಡ- ಕರ್ನಾಟಕ ರಾಷ್ಚ್ರ ಸಮಿತಿ
  6. ಜೀತೆಂದ್ರ ಅಶೋಕ ಕಾಂಬಳೆ- ಆರ್. ಪಿ. ಐ
  7. ನಾಗಜ್ಯೋತಿ ಬಿ. ಎನ್.- ಎಸ್. ಯು. ಸಿ. ಐ
  8. ರಾಜಕುಮಾರ ಅಪ್ಪಣ್ಣ ಹೊನ್ನಕಟ್ಟಿ- ಆರ್.ಎಸ್.ಪಿ
  9. ರಾಮಜಿ ಹರಿಜನ ಉರ್ಫ ಬುಧ್ಧಪ್ರೀಯ- ನಕಿ ಭಾರತೀಯ ಏಕತಾ ಪಾರ್ಟಿ
  10. ತಾರಾಬಾಯಿ ಭೋವಿ- ಪಕ್ಷೇತರ
  11. ಬಾಬು ರಾಜೇಂದ್ರ ನಾಯಕ- ಪಕ್ಷೇತರ
  12. ಸಂಗಪ್ಪ ಹುಣಶಿಕಟ್ಟಿ- ಪಕ್ಷೇತರ

ನಾಮಪತ್ರ ಹಿಂಪಡೆಯಲು ಏ. 22 ಕೊನೆಯ ದಿನವಾಗಿದ್ದು, ಮೇ.7 ರಂದು ಬೆ. 7 ರಿಂದ ಸಂ. 6ರ ವರೆಗೆ ಮತದಾನ ನಡೆಯಲಿದೆ.  ಜೂ. 4ರಂದು ಮತ ಎಣಿಕೆ ನಡೆಯಲಿದೆ.

Leave a Reply

ಹೊಸ ಪೋಸ್ಟ್‌