ವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ಸುತ್ತಮುತ್ತ ಮತ್ತು ಬಿಡಿಎ ಗಾರ್ಡನ್ ನ ಮೂರು ಎಕರೆ ಪ್ರದೇಶದಲ್ಲಿ 900 ಎತ್ತರದ ಸಸಿಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಿದರು.
ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಡಿಸ್ಟ್ರಿಕ್ಟ್ ಮೀನಿರಲ್ ಫಂಡ್(DMF) ಯೋಜನೆಡಿ ಎತ್ತರದ ಸಸಿ ನೆಡಲಾಗುತ್ತಿದೆ.
![](https://basavanadu.com/wp-content/uploads/2024/05/WhatsApp-Image-2024-05-24-at-12.46.09-PM-e1716545736642-300x179.jpeg)
ಈ ಸಂದರ್ಭದಲ್ಲಿ ಡಿಎಫ್ಒ ಶಿವಶರಣ ಹಿರೇಮಠ ಸೇರಿದಂತೆ ಅರಣ್ಯ ಇಲಾಖೆಯ ನಾನಾ ಅಧಿಕಾರಿಗಳು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.