ಭೂತನಾಳ ಕೆರೆ ಸುತ್ತಮುತ್ತ 900 ಎತ್ತರ ಸಸಿ ನೆಡುವ ಯೋಜನೆಗೆ ಡಿಸಿ ಟಿ. ಭೂಬಾಲನ್ ಚಾಲನೆ

ವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ಸುತ್ತಮುತ್ತ ಮತ್ತು ಬಿಡಿಎ ಗಾರ್ಡನ್ ನ ಮೂರು ಎಕರೆ ಪ್ರದೇಶದಲ್ಲಿ 900 ಎತ್ತರದ ಸಸಿಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ನೀಡಿದರು.

ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಡಿಸ್ಟ್ರಿಕ್ಟ್ ಮೀನಿರಲ್ ಫಂಡ್(DMF) ಯೋಜನೆಡಿ ಎತ್ತರದ ಸಸಿ ನೆಡಲಾಗುತ್ತಿದೆ.

ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆ ಸುತ್ತಮುತ್ತ 900 ಅತೀ ಎತ್ತರದ ಸಸಿ ನೆಡುವ ಸ್ಥಳದಲ್ಲಿ ಡಿಸಿ ಟಿ. ಭೂಬಾಲನ್ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.

ಈ ಸಂದರ್ಭದಲ್ಲಿ ಡಿಎಫ್ಒ ಶಿವಶರಣ ಹಿರೇಮಠ ಸೇರಿದಂತೆ ಅರಣ್ಯ ಇಲಾಖೆಯ ನಾನಾ ಅಧಿಕಾರಿಗಳು ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌