ಕನಿಷ್ಠ ಒಂದು ಮತದಿಂದಾದರೂ ಗೆಲ್ಲುವೆ- ಚುನಾವಣೆ ಬಳಿಕ ರಾಜ್ಯ ಸರಕಾರ ತಂತಾನೆ ಪತನವಾಗಲಿದೆ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಈ ಬಾರಿ ಚುನಾವಣೆಯಲ್ಲಿ ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆಲ್ಲುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ವಿಜಯಪುರದಲ್ಲಿ ಒನ್ ಸೈಡೆಡ್ ಚುನಾವಣೆ ನಡೆದಿದೆ ಎಂದು ತಿಳಿಸಿದರು. ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ಸಂಪೂರ್ಣ ವಿಶ್ವಾಸವಿದೆ.  ನನ್ನ ಜೀವನದಲ್ಲಿ ಇದು ಹೊಸ ಅನುಭವ.  ನಾನೇನು ಮೇಲಿನಿಂದ ಬಂದವನಲ್ಲ.  ನಾನು ಏಕಾಏಕೆ ಬಂದು ಎಂಎಲ್ಎ, ಮಂತ್ರಿಯಾದವನಲ್ಲ.  ಹಂತಹಂತವಾಗಿ ಪ್ರತಿಯೊಬ್ಬ ಕಾರ್ಯಕರ್ತರ ಭಾವನೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಿ ರಾಜಕಾರಣದಲ್ಲಿ ಬೆಳೆದು […]