ದ್ರಾಕ್ಷಿ ನಾಡಿನಲ್ಲಿ ಪ್ರಕೃತಿ ವಿಸ್ಮಯ- ಸೂರ್ಯನ ಸುತ್ತ ವರ್ತುಲ- ಕಣ್ತುಂಬಿಕೊಂಡ ಸಂತಸಪಟ್ಟ ವಿದ್ಯಾರ್ಥಿಗಳು

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಇಂದು ಮಧ್ಯಾಹ್ನ ಆಗಸದಲ್ಲಿ ಕಾಣಿಸಿದ ಪ್ರಕೃತಿಯ ವಿಸ್ಮಯ ಎಲ್ಲರನ್ನು ಕೌತುಕಗೊಳಿಸಿದೆ. ನಭೋ ಮಂಡಲದಲ್ಲಿ ಕಂಡು ಬಂದ ಈ ಖಗೋಳ ವಿಸ್ಮಯ ಜನರ ಅಚ್ಚರಿಗೆ ಕಾರಣವಾಗಿದೆ.  ಸೂರ್ಯನ ಸುತ್ತ ಕಂಡು ಬಂದ ಕಾಮನಬಿಲ್ಲು ಆಕಾರದ ಉಂಗುರ ಸೂರ್ಯನಿಗೆ ವರ್ತುಲ ಹಾಕಿದಂತಿತ್ತು. ಪ್ರಕಾಶಮಾನವಾದ ಈ ವಿಸ್ಮಯ ಕಂಡು ಜನ ಬೆರಗಾಗಿದ್ದಾರೆ. ಘೊಣಸಗಿ ಲಂಬಾಣಿ ತಾಂಡಾ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ಗದ್ಯಾಳ ಮಕ್ಕಳಿಗೆ ಈ ಕೌತುಕ ತೋರಿಸಿ ಅದರ ಬಗ್ಗೆ […]