ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷರಾಗಿ ವಿ. ಸಿ. ನಾಗಠಾಣ ಪುನರಾಯ್ಕೆ

ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭಾ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ವೀರಭದ್ರಪ್ಪ ಚನಬಸಪ್ಪ ನಾಗಠಾಣ ಪುನರಾಯ್ಕೆಯಾಗಿದ್ದಾರೆ. 

ಐದು ವರ್ಷಗಳ ಅವಧಿಗೆ ಅವರು ಜಿಲ್ಲಾಧ್ಯಕ್ಷರಾಗಿ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಸತತ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ.

ಈ ಮಧ್ಯೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೋಮನಗೌಡ ಪಾಟೀಲ, ಷಣ್ಮುಖಪ್ಪ ಕಸಬೇಗೌಡರ, ಅಪ್ಪಾಸಾಬ ಕೋರಿ, ಮಹಾದೇವ ಅವರಾದಿ, ರುದ್ರಪ್ಪ ತೋಟದ, ದೊಡ್ಡಣ್ಣ ಭಜಂತ್ರಿ, ಪರಶುರಾಮ ಪೋಳ, ಜಿ. ಬಿ. ಸಾಲಕ್ಕಿ, ವಿ. ಎಸ್. ತೇಲಿ, ಸಹದೇವ ನಾಡಗೌಡರ, ಮಲ್ಲಪ್ಪ ಯಾದವಾಡ, ಕಾಶೀನಾಥ ಆಣೆಪ್ಪನವರ, ಶ್ರೀಕಾಂತ ಶಿರಾಡೋಣ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಅಮರಣ್ಣವರ, ವಿವೇಕಾನಂದ ಹುಂಡೇಕಾರ, ಬಾಳಪ್ಪ ಈಶ್ವರಗೊಂಡ, ಎಂ. ಎಸ್. ಕರಡಿ, ಮಲ್ಲಿಕಾರ್ಜುನ ಭೃಂಗಿಮಠ, ಸಂಗಮೇಶ ಬಬಲೇಶ್ವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌