ನಿಮಗೆ ಭವಿಷ್ಯವಿದೆ ಎಂದು ಹೇಳಿ ತುಡುಗರಿಗೆ ಜವಾಬ್ದಾರಿ ಕೊಡುತ್ತಾರೆ- ನೋಡಿ ಸ್ವಾಮಿ ನಾವಿರೋದು ಹೀಗೆ- ಯತ್ನಾಳ

ವಿಜಯಪುರ: ಸತ್ಯವನ್ನು ಹೇಳಿ ದಕ್ಕಿಸಿಕೊಳ್ಳುವ ಶಕ್ತಿ ನನಗಿದೆ.  ನಿಜ ಹೇಳಿದಾಗ ನನನ್ನು ಕರೆಯಿಸಿ ನಿಮಗೆ ಉತ್ತಮ ಭವಿಷ್ಯವಿದೆ ಸುಮ್ಮನಿರಿ ಎಂದು ಹೇಳುವ ಹೈಕಮಾಂಡ್ ನಂತರ ಮತ್ತೆ ತುಡುಗರ(ಕಳ್ಳರ) ಕೈಗೆ ಜವಾಬ್ದಾರಿ ನೀಡುತ್ತಾರೆ.  ಇದು ಇಷ್ಟೇ.  ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. […]