ಗಡಿ ಜಿಲ್ಲೆಗಳ ಪತ್ರಿಕೆಗಳಿಗೆ ಜಾಹೀರಾತು ನೀಡಲು ಆಗ್ರಹ- ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಗಡಿ ಭಾಗದ ಜಿಲ್ಲೆಗಳ ಕನ್ನಡ ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ವಿಶೇಷ ಜಾಹೀರಾತು ನೀಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗ ಗಡಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಜಿಲ್ಲಾ ಪ್ರವಾಸದಲ್ಲಿರುವ ಸೋಮಣ್ಣ ಬೇವಿಜಮರದ ಅವರನ್ನು ಭೇಟಿ ಮಾಡಿದ ವಿಜಯಪುರ ಸ್ಥಳೀಯ ಪತ್ರಿಕೆಗಳ ಸಂಪಾದಕರು ಗಡಿ ಭಾಗದ ಜಿಲ್ಲೆಗಳ ಕನ್ನಡ ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ವಿಶೇಷ ಜಾಹೀರಾತು ನೀಡುವಂತೆ  ಕೋರ ಮನವಿ ಪತ್ರ ಸಲ್ಲಿಸಿದರು.

ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಲು ಎಲ್ಲಾ ಸರಕಾರಗಳು ಒಂದಿಲ್ಲೊಂದು ವಿಶೇಷ ಸೌಲಭ್ಯಗಳನ್ನು ನೀಡಿ ಪ್ರಯತ್ನಿಸುತ್ತಲೆ ಬಂದಿವೆ. ಆದರೆ ಕನ್ನಡ ದಿನಪತ್ರಿಕೆಗಳು ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನ ಉಳಿಸಿ ಬೆಳೆಸುತ್ತದ್ದರೂ ಸಹ ಗಡಿ ಭಾಗದ ಕನ್ನಡ ದಿನಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟದ ಜಾಹೀರಾತನ್ನು ನೀಡಿ ಗಡಿ ಅಭಿವೃದ್ದಿ ಪ್ರಾಧಿಕಾರ ಪತ್ರಿಕೆಗಳ ಅಭಿವೃದ್ದಿಗೆ ಮುಂದಾಗುತ್ತಿಲ್ಲ. ಕನ್ನಡ ಭಾಷೆ ಉಳುವಿಗೆ ಶ್ರಮಿಸುತ್ತಿರುವ ಗಡಿ ಜಿಲ್ಲೆಗಳ ಪತ್ರಿಕೆಗಳಿಗೆ ಜಾಹೀರಾತು ನೀಡಿ ಪ್ರೋತ್ಸಾಹ ನೀಡಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಜಿಲ್ಲಾ ಘಟಕದ ನಿಯೋಗ ಮನವರಿಕೆ ಮಾಡಿಕೊಟ್ಟಿತು.

ಗಡಿ ಭಾಗದಲ್ಲಿ ಕನ್ನಡ ದಿನಪತ್ರಿಕೆಗಳು ಕನ್ನಡ ಭಾಷಾ ಉಳಿವಿಗೆ ಕಟಿಬದ್ದವಾಗಿವೆ. ಎಂತಹ ಕ್ಷಿಷ್ಟ ಸಂದರ್ಭದಲ್ಲಿಯೂ ಕೂಡ ಪತ್ರಿಕೆ ಮುದ್ರಣ ಮಾಡಿ ಪತ್ರಿಕೆ ವಿತರಿಸುವ ಕಾರ್ಯ
ಮಾಡುತ್ತಿವೆ. ಅಲ್ಲದೆ ಗಡಿ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಸುದ್ದಿಯನ್ನು ವಿಸ್ತಾರವಾಗಿ ಕನ್ನಡ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ನಿಯೋಗ ಅಧ್ಯಕ್ಷರ ಗಮನ ಸೆಳೆಯಿತು.

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ಹಂತ-ಹಂತವಾಗಿ ಬರುತ್ತಲೇ ಇದೆ. ಆದರೆ, ಇದರ ಸದ್ಬಳಕೆ ಸರಿಯಾಗಿ ಆಗಬೇಕೆಂಬುದು ಪತ್ರಿಕೆಗಳ ಆಶಯವಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮದ ಜಾಹೀರಾತುಗಳನ್ನು ಕನ್ನಡ ಪತ್ರಿಕೆಗಳಿಗೆ ಒದಗಿಸಿಕೊಡಬೇಕು. ಗಡಿ ಶಾಲೆಗಳಲ್ಲಿ ಮತ್ತು ಗಡಿ ಭಾಗದ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಕ್ಕೆ ಕನ್ನಡ ಪತ್ರಿಕೆ ಖರೀದಿಸುವಂತೆ ನಿರ್ದೇಶನ ನೀಡುವಂತೆ ಸಹ ನಿಯೋಗ ಅಧ್ಯಕ್ಷರಿಗೆ ಮನವಿ ಮಾಡಿತು.

ಪ್ರತಿ ತಿಂಗಳು ಹೆಚ್ಚುವರಿ ಒಂದು ಪುಟದ ಜಾಹೀರಾತು ಒದಗಿಸಿಕೊಟ್ಟು ಕನ್ನಡ ಉಳಿಸುವದರ
ಜೊತೆಗೆ ಗಡಿ ಭಾಗದ ಪತ್ರಿಕೆಗಳಿಗೆ ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ, ಸಂಘದ ರಾಜ್ಯ ಕಾರ್ಯದರ್ಶಿ ರಶ್ಮಿ ಪಾಟೀಲ, ಕಾರ್ಯಕಾರಣಿ ಸದಸ್ಯ ಕೆ. ಕೆ. ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಅವಿನಾಶ ಬಿದರಿ, ಸದಸ್ಯರಾದ ವಿನೋದ ಸಾರವಾಡ, ಚಿದಂಬರ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌