ವಿಜಯಪುರ: ದೆಹಲಿ ಭೇಟಿ ಫಲಪ್ರದವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತಾವು ದೆಹಲಿಗೆ ಭೇಟಿ ನೀಡಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.
ದೆಹಲಿಯಲ್ಲಿ ಯಾರೂ ನಮಗೆ ಭೇಟಿಯಾಗಿಲ್ಲ. ನಮ್ಮ ತಂಡಕ್ಕೆ ಭಯಂಕರ ಅವಮಾನ ಅಗಿದೆ ಎಂದು ಮಾದ್ಯಮಗಳ ವರದಿ ಕುರಿತು ವ್ಯಂಗ್ಯವಾಡಿದ ಅವರು, ದೆಹಲಿ ಭೇಟಿ ಫಲಪ್ರದವಾಗಿದೆ. ಏನು ಆಗಿಲ್ಲ ನಮ್ಮದು ಗಟ್ಟಿಯಾಗಿದೆ. ನಮಗೆ ಅಪಮಾನ ಆಗಿಲ್ಲ. ವಿಜಯದ ಬಂಗಾರ ಕೈಯ್ಯಲ್ಲಿ ಹಿಡಿದುಕೊಂಡು ಬಂದಿದ್ದೇವೆ. ವಿಜಯದ ಸಂಕೇತ ಹಿಡಿದುಕೊಂಡು ಬಂದಿದ್ದೇದೆ. ಕೇಂದ್ರ ನಾಯಕರು ನಮಗೆ ಸ್ಪಂಧಿಸಿದ್ದಾರೆ. ನಮ್ಮ ಭೇಟಿ ಕುರಿತು ಅಪಮಾನ ಮಾಡಿದರೆ ಖಂಡನೀಯ. ಯಾರ ಭೇಟಿ ಎಂಬುದು ಗುಪ್ತವಾಗಿಡುವಂತೆ ನಾಯಕರು ಹೇಳಿದ್ದಾರೆ ಎಂದು ತಿಳಿಸಿದತರು.
ವಿಜಯೇಂದ್ರ ವಿರೋಧಿ ಬಣ ದಿನದಿಂದ ದಿನ ಹೆಚ್ಚುತ್ತಿದೆ. ವಿಜಯೇಂದ್ರ ಅನನುಭವಿ. ತಂದೆ ಹೆಸರು ಹೇಳಿಕೊಂಡು ಬರುತ್ತಿದ್ದಾನೆ. ಆತನಿಗೆ ನಯ ವಿನಮ ಗೊತ್ತಿಲ್ಲ. ಪಕ್ಷ ಸಂಘಟನೆ ಬಗ್ಗೆ ಗೊತ್ತಿಲ್ಲ. ಯಡಿಯೂರಪ್ಪ ಸಿಎಂ ಇದ್ದಾಗ ವಸೂಲಿ ಮಾಡಿಕೊಂಡು ಬಂದಿದ್ದಾನೆ. ಯಡಿಯೂರಪ್ಪ ಸಿಎಂ ಇದ್ದಾರೆಂದು ಗೌರವ ಕೊಡುತ್ತಿದ್ದರು ಎಂದು ಅವರು ಹೇಳಿದರಪು.
ನಮ್ಮದು ಮೂರು ಬೇಡಿಕೆಗಳಿವೆ. ಬಿಜೆಪಿ ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾಗಬೇಕು. ಭ್ರಷ್ಟ ಕುಟುಂಬದಿಂದ ಬಿಜೆಪಿ ಮುಕ್ತವಾಗಬೇಕು ಹಾಗೂ ಹಿಂದುತ್ವ ಆಧಾರ ಮೇಲೆ ರಾಜ್ಯದಲ್ಲಿ ಬಿಜೆಪಿ ಬೆಳೆಯಬೇಕು. ಪ್ರಧಾನಿ ನರೇಂದ್ರ ಮೋದಿ, ಉಪ್ರ ಸಿಎಂ ಆದಿತ್ಯನಾಥ ಯೋಗಿ ಮಾದರಿ ಅಧಿಕಾರ ನೀಡಬೇಕು ಎಂದು ಶಾಸಕರು ತಿಳಿಸಿದರು.
ವಿಡಿಯೋ ಸುದ್ದಿ: https://youtu.be/Z7v_COUykx4?si=e13Bqt-JUhhc36KI
ನಾನು ವಿರೋಧಿಗಳ ಬಗ್ಗೆ ಮಾತನಾಡಿದರೆ ಅವರ ಆತ್ಮಸ್ಥೈರ್ಯ ಕುಗ್ಗುತ್ತದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅ;ರು, ವಿಜಯೇಂದ್ರ ನನ್ನ ಬಗ್ಗೆ ಮಾತನಾಡಿದರೆ ಬಂಡವಾಳ ಬಿಚ್ಚಿಡುವೆ. ಎಲ್ಲಿ ಏನೇನಾಗಿದೆ ಎಲ್ಲವೂ ಗೊತ್ತು. ವಿಜಯೇಂದ್ರ ಬಳಿ ಬ್ಲಾಕ್ ಮೇಲ್ ಮಾಡೋ ಟೀಂ ಇದೆ. ಇವೆಲ್ಲ ನಾಟಕ ಬ್ಲ್ಯಾಕ್ ಮೇಲ್ ಬಿಡಬೇಕು. ಹಾಗೇ ಮಾಡಿದರೆ ನಮ್ಮ ಬಳಿಯೂ ಇದೆ ಎಂದು ಹೇಳಿದರು.
ರಾಜ್ಯದ ಬೆಳವಣಿಗೆ ಕುರಿತು ಫೆಬ್ರವರಿ 10 ರಂದು ಕೇಂದ್ರ ನಾಯಕರು ಎಲ್ಲರನ್ನು ಕರೆಯುತ್ತಾರೆಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಗೊತ್ತಿಲ್ಲ. ರಾಜ್ಯ ಸಹ ಉಸ್ತುವಾರಿ ರಾಜ್ಯಕ್ಕೆ ಬಂದಿದ್ದಾರೆ. ಆರ್. ಅಶೋಕ ಮಾಹಿತಿ ಹೇಳಿದ್ದಾರೆ. ಎಲ್ಲರ ಪ್ರೀತಿ ಗಳಿಸಿದವರಿಗೆ ಅಧಿಕಾರ ನಿಡಬೇಕೆಂದು ಹೇಳಿದ್ದಾರೆ. ಇದೇ ವಿಚಾರ ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಹೊಸ ಪರ್ವ ಆರಂಭಕ್ಕೆ ಮಳೆ ಗಾಳಿ ಬೆಂಕಿ ಪ್ರವಾಹ ಬಿರುಗಾಳಿ ಬೀಸಿ ಹೊಸ ವಾತಾವರಣ ಬರುತ್ತದೆ. ಒಳ್ಳೆ ನಾಯಕ ಸಿಗುತ್ತಾನೆ. ನಾವೆಲ್ಲ ಒಂದು ಇದ್ದೇವೆ. ಯಾವುದೇ ಜನಾಂಗ ಕೊಟ್ಟರೂ ಸಮಾಧಾನ ಇದ್ದೇವೆ. ಎಲ್ಲ ಸಮಾಜದ ಮುಖಂಡರೂ ಸಮರ್ಥರಿದ್ದಾರೆ. ಬರೀ ಯತ್ನಾಳ ವಿಜಯೇಂದ್ರ ಇಲ್ಲ. ಹೆಚ್ಚು ಮತ ಸೆಳೆಯೋರನ್ನಾ ಮಾಡಬೇಕಿದೆ. ಎಲ್ಲ ಸಮಾಜದ ಮುಖಂಡರೂ ಸಮರ್ಥರಿದ್ದಾರೆ ಎಂದು ಅವರು ಹೇಳಿದರು.
ವಿಜಯೇಂದ್ರ ಲಿಂಗಾಯತ ಫೆಕ್ ಅಕೌಂಟ್ ತಗೆದು ಬಾಯಿಗೆ ಬಂದಂತೆ ಮಾತನಾಡಿಸಿದರೆ ನಾವೂ ಅದೇ ಮಾದರಿ ಉತ್ತರ ನೀಡುತ್ತೇವೆ. ಇಂಥ ಅಕೌಂಟಗೆ ನಿಮ್ಮಪ್ಪನಂತ ಅಕೌಂಟ್ ಮಾಡಿ ಉತ್ತರ ನೀಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಪಕ್ಷದ ನಾಯಕನಾಗಲು ಯತ್ನಾಳಗೆ ಆಫರ್ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಆಫರ್ ಇಲ್ಲ. ಎಲ್ಲ ಸಮೀಕರಣದ ಮಾಡಲಾಗುತ್ತದೆ ಎಂದು ಹೇಳಿದರು.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷದ ಸ್ಥಾನಗಳು ಬದಲಾಗುತ್ತವೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸವದಿ ಅವರು ಮೊದಲು ತಮ್ಮ ಪಕ್ಷದ್ದು ನೋಡಿಕೊಳ್ಳಲಿ. ಕಾಂಗ್ರೆಸ್ ನಲ್ಲಿ ದೊಡ್ಡ ಕತ್ತೆ ಬಿದ್ದಿದೆ. ನಮ್ಮ ತಟ್ಟೆಯಲ್ಲಿನ ನೊಣ ನೋಡುತ್ತಿದ್ದಾರೆ. ರಾಹುಲ್ ಹಿಂದೆ ಸಿಎಂ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಿಂದೆ ಡಿಕೆ ಶಿವಕುಮಾರ ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸದ್ಯ ಬಿಜೆಪಿ ಭ್ರಷ್ಟರ ಕೈಯ್ಯಿಂದ ಮುಕ್ತವಾಗಬೇಕಿದೆ. ವಿಜಯೇಂದ್ರ ವಿಜಯಪುರ ಮಹಾನಗರ ಪಾಲಿಕೆಗೆ ಬಂದಿದ್ದ ರೂ. 125 ಕೋ. ಹಣ ತೆಗೆದುಕೊಂಡ ಕಾರಣ ಜಗಳ ಆರಂಭವಾಗಿದೆ. ಆ ಜಗಳದಿಂದಲೇ ಇಂದು ವಿಜಯಪುರದಲ್ಲಿ ಅಭಿವೃದ್ಧಿಯಾಗಿದೆ. ಭಾರತದಲ್ಲಿ ಮೂರನೇ ಶುದ್ದ ಗಾಳಿ ಬೀಸೊ ನಗರವಾಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.