ವಿಜಯಪುರ: ಮುಲ್ಲಾ ಎಂಬುದೊಂದು ಶ್ರೇಷ್ಠ ಪದವಾಗಿದ್ದು, ಸಮಾಜದಲ್ಲಿ ಉನ್ನತ ಗೌರವ ಹೊಂದಿದವನಾಗಿದ್ದಾನೆ. ಸಾಮಾಜಿಕ, ಆರ್ಥಿಕವಾಗಿ ಸಬಲಗೊಳ್ಳಲು ಕರ್ನಾಟಕ ಮುಲ್ಲಾ ಅಸೋಷಿಯೇಶನ್ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಮುಲ್ಲಾ ಅಸೋಷಿಯೇಶನ್ (ಕೆಎಂಎ) ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಮುಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮಾಜದ ಜೊತೆಗೆ ಉತ್ತಮ ಒಡನಾಟ ಹೊಂದುವುದರ ಜೊತೆಗೆ ಸಮಾಜದ ಪ್ರಗತಿಗೆ ಒಕ್ಕಟ್ಟಾಗಬೇಕು ಸರಕಾರಿ ಸೌಲಭ್ಯ ಪಡೆಯಲು ಹಕ್ಕೋತ್ತಾಯ ಮಂಡಿಸಬೇಕು ಎಂದು ಹೇಳಿದರು.
ಲೋಗೋ ಬಿಡುಗಡೆ ಮಾಡಿದ ಶಾಸಕರಾದ ವಿಠ್ಠಲ ಕಟಕದೊಂಡ ಹಾಗೂ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮುಲ್ಲಾ ಸಮುದಾಯದವರಿಗೆ ಈಗಲು ಬಹಳಷ್ಟು ಗೌರವವಿದೆ. ಊರಿನ ಪ್ರತಿಯೊಂದು ಕಾರ್ಯದಲ್ಲಿ ಮುಂಚುಣಿಯಲ್ಲಿದ್ದುಕೊಂಡು ಸಮಾಜದಲ್ಲಿ ಸ್ವಾಸ್ಥö್ಯ ಕಾಪಾಡುತ್ತಿದ್ದಾರೆ. ಮುಲ್ಲಾ ಸಮುದಾಯದ ಪರವಾಗಿ ವಿಧಾನಸಭೆಯಲ್ಲಿ ದ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಕರ್ನಾಟಕ ಅಹ್ಲೇ ಸುನ್ನತ ಜಮಾತ ರಾಜ್ಯಾಧ್ಯಕ್ಷ ಹಜರತ್ ಸಯ್ಯದ ಮೊಹಮ್ಮದ ತನ್ವೀರಪೀರಾ ಹಾಶ್ಮಿ ಆಶೀರ್ವಚನ ನೀಡಿ ಮುಸ್ಲಿಂ ಸಮುದಾಯದಲ್ಲಿ ಮುಲ್ಲಾ ಸಮಾಜಕ್ಕೆ ಸಾಕಷ್ಟು ಗೌರವವಿದೆ. ಮುಲ್ಲಾ ಎಂದರೆ ಅದೊಂದು ಉತ್ಕೃಷ್ಟ ಪದವಾಗಿದ್ದು, ಉತ್ತಮ ನಾಗರೀಕ ಎಂಬದು ಸೂಚಿಸುತ್ತದೆ. ಸಮಾಜ ಸಂಘಟನೆಗೆ ಸದಾ ಬೆಂಬಲ ಇರುತ್ತದೆ. ಸಾಮಾಜಿಕ, ಆರ್ಥಿಕ ರಾಜಕೀಯ ಶಕ್ತಿಯಾಗಿ ಬೆಳೆಯಲು ಪ್ರತಿಯೊಬ್ಬರೂ ಒಕ್ಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ಬೆಳೆಸುವ ಗುಣ ಬೆಳೆಸಿಕೊಳ್ಳಬೇಕು. ಕುಹಕ ಮಾತುಗಳಿಗೆ ಕಿವಗೊಡದೆ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗುತ್ತ ಸಮಾಜಮುಖಿ ಬದುಕು ಸಾಗಿಸಬೇಕು ಎಂದು ಹೇಳಿದರು.
ಗುಳೆದಗುಡ್ಡ ಕಿಬ್ಲಾದ ಮುಫ್ತಿ ಮೊಹಮ್ಮದ ಅಬೂಬಕರ ಆಶ್ರಫಿ ಖಾದ್ರೀಸಾಹೇಬ್, ಮನಗೂಳಿಯ ಹಜರತ್ ಸೈಯ್ಯದಷಾ ಫೀರ ಖಾದ್ರಿ ಪೀಠಾಧೀಪತಿ ಡಾ. ಫೈರೋಜಹುಸೇನಿ ಆಶೀರ್ವಚನ ನೀಡಿದರು.
ರಾಜ್ಯ ಉಪಾಧ್ಯಕ್ಷ ಇಮ್ತಿಯಾಜ ಮುಲ್ಲಾ ಪ್ರಾಸ್ತಾವಿಕ ಮಾತನಾಡಿ ಮುಲ್ಲಾ ಅಸೋಷಿಯೇಶನ್ ನಡೆದು ಬಂದ ದಾರಿ ಕುರಿತು ವಿವರಿಸಿದರು.
ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಕಾಂಗ್ರೆಸ್ ವಕ್ತಾರ ಎಸ್ ಎಂ ಪಾಟೀಲ ಗಣಿಹಾರ, ಕರವೇ ರಾಜ್ಯ ಉಪಾಧ್ಯಕ್ಷ ಎಂ ಸಿ ಮುಲ್ಲಾ, ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿದರು.
ಕೆ.ಎಂ .ಎ ರಾಜ್ಯಾಧ್ಯಕ್ಷ ಮಹಿಬೂಬ ಮುಲ್ಲಾ ಬಳಬಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯದ ವಿವಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಮುಲ್ಲಾ ಬಂಧುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಹಾಜನ್ ಮುಲ್ಲಾ, ಚಪ್ಪರಬಂದ ಸಮಾಜದ ರಾಜ್ಯಾಧ್ಯಕ್ಷ ಸಲೀಮ ಫಿರಜಾದೆ, ಜಾಫರ್ ಅಂಗಡಿ, ಎಂ ಎ ಖತೀಬ, ಡಾ. ಶಮಶರಲಿ ಮುಲ್ಲಾ, ಖುದಾನಸಾಬ ಮುಲ್ಲಾ, ಮೀರಾಸಾಬ ಮುಲ್ಲಾ, ಮುಸ್ತಾಕ ಮುಲ್ಲಾ, ರಸೂಲ್ ಮುಲ್ಲಾ, ಮುಸ್ತಾಕಹಮ್ಮದ ಮುಲ್ಲಾ, ದಾವಲಸಾಬ ಮುಲ್ಲಾ, ಮುಬಾರಕ ಮುಲ್ಲಾ, ಎಸ್ ಎಂ ಮುಲ್ಲಾ, ಎಚ್ ಡಿ ಮುಲ್ಲಾ, ಎಂ ಆರ್ ಮುಲ್ಲಾ, ಇರ್ಷಾದ ಮುಲ್ಲಾ, ಅಮೀನಸಾಬ ಮುಲ್ಲಾ, ಎಂ ಐ ಮುಲ್ಲಾ, ಇಮಾಮಸಾಬ ಮುಲ್ಲಾ, ಬಂದೇನವಾಜ ಮುಲ್ಲಾ, ಎಚ್ ಕೆ ಮುಲ್ಲಾ, ಮುನಾಫ ಮುಲ್ಲಾ, ಡಾ. ಎಂ ಎಂ ಮುಲ್ಲಾ, ಜಾಫರ್ ಮುಲ್ಲಾ, ನಬಿರಸೂಲ ಮುಲ್ಲಾ, ಮಹಿಬೂಬ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.