ಅಗರಖೇಡದಲ್ಲಿ 49 ಮಿಮಿ, ಇಂಡಿಯಲ್ಲಿ 35 ಮಿಮಿ ಮಳೆ- ಬಸವನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆ, ಆಸ್ತಿಹಾನಿ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಮೂರು ಮನೆಗಳು ಹಾನಿಗೀಡಾಗಿವೆ.   ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.  ವಿಜಯಪುರ ತಾಲೂಕು ವಿಜಯಪುರ ನಗರ- 16.6 ಮಿಮಿ ನಾಗಠಾಣ- 0.16 ಮಿಮಿ ಭೂತ್ನಾಳ- 1.2 ಮಿಮಿ ಹಿಟ್ನಳ್ಳಿ- 5.0 ಮಿಮಿ ಕುಮಟಗಿ- 0.4 ಮಿಮಿ ಬಬಲೇಶ್ವರ ತಾಲೂಕು ಮಮದಾಪುರ- 6.0 ಮಿಮಿ ಬಬಲೇಶ್ವರ- 3.8 ಮಿಮಿ ತಿಕೋಟಾ ತಾಲೂಕು ತಿಕೋಟಾ- 4.2 ಮಿಮಿ ಕನ್ನೂರ- 00 ಮಿಮಿ […]

ಡಾ. ದೀಪಕಕುಮಾರ ಆರ್. ಚವ್ಹಾಣ ಸಂಶೋಧನೆಗೆ ಭಾರತ ಸರಕಾರದಿಂದ 2ನೇ ಬಾರಿ ಮಾನ್ಯತೆ- ಬಿ.ಎಲ್.ಡಿ.ಇ ಡೀಮ್ಡ್ ವಿವಿಗೆ ಮತ್ತೋಂದು ಗರಿ

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸರ್ಜರಿ ವಿಭಾಗದ ಸಹಪ್ರಾಧ್ಯಾಪಕ ಮತ್ತು ಐಟಿ ವಿಭಾಗದ ಮುಖ್ಯಸ್ಥ ಡಾ. ದೀಪಕಕುಮಾರ ಆರ್. ಚವ್ಹಾಣ ಅವರ ಹೊಸ ಅನ್ವೇಷಣೆಗೆ ಭಾರತ ಸರಕಾರ ಸರ್ಟಿಫಿಕೇಟ್ ಆಪ್ ರೆಜಿಸ್ಟ್ರೇಷನ್ ಆಫ್ ಡಿಸೈನ್ ನೀಡಿದೆ.  ಈ ಮೂಲಕ ಡಾ. ದೀಪಕಕುಮಾರ ಚವ್ಹಾಣ ಎರಡನೇ ಬಾರಿಗೆ ಭಾರತ ಸರಕಾರದ ಪೇಟೆಂಟ್ ಪಡೆದ ಹೆಮ್ಮೆಗೆ ಪಾತ್ರರಾಗಿದ್ದಾರೆ. ಅವರು ಮಂಡಿಸಿದ ಕಾರ್ಡಲೆಸ್ ಮೊಬೈಲ್ ಕ್ರಿಟಿಕಲ್ ಕೇರ್ ಮಾನಿಟರಿಂಗ್ ಇಂಟರಆಕ್ಟಿವ್ ಡಿವೈಸ್(Cordless mobile critical care monitoring interactive device) ಸಂಶೋಧನೆಗೆ […]

ತರಕಾರಿ ಬೆಲೆ ಗಗನಕ್ಕೆ: ಸಹಪಾಠಿಗಳಿಗೆ ಬೀಜ ನೀಡಿ ವಿನೂತನವಾಗಿ ಜನ್ಮದಿನ ಆಚರಿಸಿಕೊಂಡ ಬಾಲಕ

ವಿಜಯಪುರ: ಇತ್ತೀಚೆಗೆ ತರಕಾರಿ ಬೆಲೆ ಗಗನಮುಖಿಯಾಗಿದೆ.  ಅದರಲ್ಲೂ ಕೆಂಪು ಬಂಗಾರ ಎಂದೇ ಈಗ ಕರೆಯಲಾಗುತ್ತಿರುವ ಟೊಮೆಟೊ ಬೆಲೆಯಂತೂ ಬಡವರಷ್ಟೇ ಯಾಕೆ, ಮಧ್ಯಮ ವರ್ಗದವರಿಗೂ ಕೈಗೆಟುಕದಂತಾಗಿದೆ.  ಮಕ್ಕಳಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಸಾಮಾನ್ಯ ಜ್ಞಾನ ಒದಗಿಸುವ ನಿಟ್ಟನಲ್ಲಿ ಮತ್ತು ಹಣದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಅರವಿಂದ ಪಾಟೀಲ ವಿನೂತನ ಜ್ಞಾನಹಂಚಿಕೆ ಮಾಡುತ್ತಲೇ ಇರುತ್ತಾರೆ. ಈಗ ಗಗನಕ್ಕೇರಿರುವ ತರಕಾರಿ ಬೆಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಮತ್ತು ಅದಕ್ಕೆ ಪರಿಹಾರವಾಗಿ […]

ರಾಜನಾಳ ತಾಂಡಾದಲ್ಲಿ ಶಾಲೆಯಲ್ಲಿ ಪಾಠದ ಬದಲು ಮೈದಾನದಲ್ಲಿ ಆಟವಾಡುತ್ತಿರುವ ಮಕ್ಕಳು- ಯಾಕೆ ಗೊತ್ತಾ

ವಿಜಯಪುರ: ಎಸ್. ಡಿ. ಎಂ. ಸಿ ಅಂದರೆ ಶಾಲಾ ಅಭಿವೃದ್ಧಿ ನಿರ್ವಹಣೆ ಸಮಿತಿ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟದ ಶಿಕ್ಷಣದ ಪರಿಶೀಲನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವುದು ಸಾಮಾನ್ಯ. ಆದರೆ, ಇಂಥ ಎಸ್. ಡಿ. ಎಂ. ಸಿ ಅಧ್ಯಕ್ಷರು ಮಕ್ಕಳಿಗೆ ಪಾಠ ಮಾಡಿಸುವ ಬದಲು ಆಟಕ್ಕೆ ಬಿಟ್ಟರೆ ಹೇಗಿರಬೇಡ? ಆಟವಾಡುವುದೆಂದರೆ ಮಕ್ಕಳಿಗೆ ಸಿಗುವ ಮಜವೇ ಬೇರೆ.  ಆದರೆ, ಪಾಠ ಬೇಡ ಎಂದು ಆಟಕ್ಕೆ ಕಳುಹಿಸಿದರೆ ಪೋಷಕರೂ ತಕರಾರು ಮಾಡುವುದುಂಟು.  ಆದರೆ, ಇಲ್ಲಿ ಯಾರೂ ಈ ಬಗ್ಗೆ ತಕರಾರು […]

ಗ್ರಾಮ ಪಂಚಾಯಿತಿ ಚುನಾವಣೆ: ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ ಡಿಸಿ ಟಿ. ಭೂಬಾಲನ

ವಿಜಯಪುರ: ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿಗಳಿಗೆ ಜು. 23 ರಂದು ಸಾರ್ವತ್ರಿಕ ಹಾಗೂ ಉಪ ಚುನಾವಣೆ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಟಿ. ಭೂಬಾಲನ ಆದೇಶ ಹೊರಡಿಸಿದ್ದಾರೆ. ಮತದಾನ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು 144ರನ್ವಯ ಪ್ರತಿಬಂಧಕಾಜ್ಞೆಯನ್ನು ವಿಧಿಸಿರುವ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಟಿ. ಭೂಬಾಲನ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ, ಬಳಬಟ್ಟಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ […]

ಹೊನವಾಡ ಗ್ರಾ. ಪಂ. ಗೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ: ನಾನಾ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ತಿಕೋಟಾ ತಾಲೂಕಿನ ಹೊನವಾಡ ಗ್ರಾ.  ಪಂ. ಗೆ ಭೇಟಿ ನೀಡಿ ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಹೊನವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಈ ಅಮೃತ ಸರೋವರ ಕಾಮಗಾರಿಯನ್ನು ಹಸಿರು ಸರೋವರ ಅಂತಾ ಆಯ್ಕೆ ಮಾಡಿದ್ದು, ಸರೋವರದ ದಡದಲ್ಲಿ ವಿವಿಧ ರೀತಿಯ ಉತ್ತಮ ಗುಣಮಟ್ಟದ ಸಸಿಗಳನ್ನು ನಾಟಿ ಮಾಡಬೇಕು. ಸರೋವರದ ಸುತ್ತಲೂ ಸ್ಥಳೀಯವಾಗಿ […]

ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ನೇತೃತ್ವದ ವಿಜ್ಞಾನಿಗಳ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಮತ್ತು ಔಷಧ ವಿಜ್ಞಾನಿಗಳು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ. ಫಾರ್ಮಾಸ್ಯೂಟಿಕಲ್ ಪಾರ್ಮುಲೇಶನ್ಸ್ ಆಫ್ ಎಲೆಕ್ಟ್ರೊ- ರಿಸ್ಪಾನ್ಸಿವ್ ಸ್ಮಾರ್ಟ್ ಹೈಡ್ರೊಜೆಲ್ ಫಾರ್ ಟ್ರಾನ್ಸಡರ್ಮಲ್ ಡ್ರಗ್ ಡೆಲಿವರಿ(Pharmaceutical Formulations of Electro-Responsive Smart Hydrogel For Transdermal Drug Delivery) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ ಲಭ್ಯವಾಗಿದೆ. ಬಿ.ಎಲ್.ಡಿ.ಇ ಸಂಸ್ಥೆ ಮತ್ತು ರಾಜ್ಯಕ್ಕೆ ಕೀರ್ತಿ […]

ಎನ್.ಎಸ್.ಎಸ್. ಶಿಬಿರಗಳು ಸಹಬಾಳ್ವೆ, ಸೇವಾಭಾವ ಬೆಳೆಸುತ್ತವೆ- ರಿಯಾಜ್ ಫಾರೂಖಿ

ವಿಜಯಪುರ: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಕಲಿಸುವದರೊಂದಿಗೆ ಸೇವಾ ಮನೋಭಾವ, ಸಹಬಾಳ್ವೆಯ ಬದುಕನ್ನು ಬೆಳೆಸುತ್ತವೆ ಎಂದು ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಪದವಿ ಮಹಿಳಾ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಚೇರಮನ್‌ ರಿಯಾಜ್ ಫಾರೂಖಿ ಹೇಳಿದರು.  ನಗರದ ಸಿಕ್ಯಾಬ್ ಪದವಿ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಎನ್. ಎಸ್. ಎಸ್. ಘಟಕ ಸುಹಾಗ ಕಾಲನಿಯಲ್ಲಿ ಆಯೋಜಿಸಿದ್ದ ವಿಶೇಷ ಶಿಬಿರ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಉದ್ಘಾಟಿಸಿದ ವಿಜಯಪುರ ಮಹಾನಗರ ಪಾಲಿಕೆಯ […]

ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಏಳು ದಿನಗಳ ವೈದ್ಯಕೀಯ ತಪಾಸಣೆ, ಭೌತಿಕ ಚಿಕಿತ್ಸೆ ಉಚಿತ ಕಾರ್ಯಾಗಾರ

ವಿಜಯಪುರ: ಬೆನ್ನುಹುರಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಏಳು ದಿನಗಳ ವೈದ್ಯಕೀಯ ತಪಾಸಣೆ ಮತ್ತು ಭೌತಿಕ ಚಿಕಿತ್ಸೆಯ ಉಚಿತ ಕಾರ್ಯಾಗಾರ ನಗರದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆಯಿತು. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪರ‍್ನವಸತಿ ಕೇಂದ್ರ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆರಂಭವಾದ ಈ ಶಿಬಿರವನ್ನು ಬಿ.ಎಲ್.ಡಿ.ಇ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚರ‍್ಯ ಡಾ. ಬಿ.ಎಂ.ಪಾಟೀಲ […]

ಬ್ಯಾಡ್ಮಿಂಟನ್ ಆಡುವಾಗ ಅಸ್ವಸ್ಥರಾಗಿದ್ದ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಯಕ ನಿಧನ

ವಿಜಯಪುರ: ಬ್ಯಾಡ್ಮಿಂಟನ್ ಆಡುವಾಗ ಅಸ್ವಸ್ಥರಾಗಿದ್ದ ವಿಜಯಪುರ ಲೋಕಾಯುಕ್ತ ಎಸ್ಪಿ ಅರುಣ ನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣದ ಬಳಿ‌‌ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ಅರುಣ ನಾಯಕ ಅವರು ರಾತ್ರಿ 8.30ರ ಸುಮಾರಿಗೆ ಇತರ ಆಟಗಾರರೊಂದಿಗೆ ಆಟವಾಡುತ್ತಿದ್ದರು.  ಸುಮಾರು‌ ಆರು ಗೇಮ್ ಆಟವಾಡಿದ ಮೇಲೆ ಸುಸ್ತಾದವರಂತೆ ಕಂಡು ಬಂದ ಅವರು ಪಕ್ಕದ ಬೆಂಚ್ ಮೇಲೆ ಹೋಗಿ ಕುಳಿತರು.  ಅಷ್ಟರಲ್ಲಿ ಉಸಿರಾಟವೂ ಹೆಚ್ಚಾಗಿದ್ದ ಶಬ್ದ ಬಂದ ಹಿನ್ನೆಲೆಯಲ್ಲಿ ಅವರ ಜೊತೆ ಆಟವಾಡುತ್ತಿದ್ದ ಸಗರ ಅಬೂಬಕರ, ಅಜೀಂ, […]