Doni Flood: ಸಾತಿಹಾಳ ಬಳಿ ಪ್ರವಾಹದಲ್ಲಿಯೇ ಬಸ್ ಸಂಚಾರ- ನಡು ನೀರಿನಲ್ಲಿಯೇ ಶಾಲಾ ಮಕ್ಕಳನ್ನು ಹೊತ್ತೊಯ್ದ ಪೋಷಕರು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ಅಲ್ಪವಿರಾಮ ಸಿಕ್ಕಿದ್ದರೂ ಡೋಣಿ ನದಿಯಲ್ಲಿ ಪ್ರವಾಹ ಮುಂದುವರೆದಿದೆ.  ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಬಳಿ ಹುಟ್ಟುವ ಡೋಣಿ ನದಿ ಮಳೆ ಬಂದಾಗಲೆಲ್ಲ ಪ್ರವಾಹದ ನೀರಿನ ಜೊತೆಗೆ ಎರೆಮಣ್ಣನ್ನೂ ಜೊತೆಗೆ ತೆಗೆದುಕೊಂಡು ಹೋಗುವುದರಿಂದ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.  ಈ ನದಿ ಪ್ರತಿ ಬಾರಿ ತನ್ನ ಪಥವನ್ನು ಬದಲಿಸುತ್ತ ರೈತರ ಹೊಸ ಹೊಸ ಹೊಲಗಳಿಗೆ ನುಗ್ಗುತ್ತ ಬೆಳೆಯನ್ನೂ ಹಾಳು ಮಾಡುತ್ತಿದೆ. ಮುಳುಗಡೆಯಾದ ಸೇತುವೆ […]

Accreditation Committee: ವಿಜಯಪುರದ ಮೋಹನ ಕುಲಕರ್ಣಿ ಸೇರಿ 12 ಪತ್ರಕರ್ತರನ್ನು ಸೇರಿಸಿ ಮಾಧ್ಯಮ ಮಾನ್ಯತಾ ಸಮಿತಿ ರಚಿಸಿದ ಸರಕಾರ

ಬೆಂಗಳೂರು: ವಿಜಯಪುರದ ಸತ್ಯಕ್ರಾಂತಿ ದಿನಪತ್ರಿಕೆ ಸಂಪಾದಕ ಮತ್ತು ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಮುಖಂಡ ಹಾಗೂ ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ ಸೇರಿದಂತೆ 12 ಜನರನ್ನು ಮಾಧ್ಯಮ ಮಾನ್ಯತಾ ಸಮಿತಿ ಪದಾಧಿಕಾರಿಗಳಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.  ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಸ್ಥರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ಉಳಿದಂತೆ ಹನುಮಂತರಾವ ಬೈರಾಮಡಗಿ, ಉದಯವಾಣಿ ಹಿರಿಯ ವರದಿಗಾರ(ಕಲಬುರಗಿ), ರುದ್ರಣ್ಣ ಹರ್ತಿಕೋಟಿ, ಸುದ್ದಿ ವಿಭಾಗದ ಮುಖ್ಯಸ್ಥರು, ವಿಜಯವಾಣಿ(ಬೆಂಗಳೂರು), ಮೋಹನ ಕುಲಕರ್ಣ, ಸಂಪಾದಕರು, […]

Journalists Tagadur: ಕಾರ್ಯ ಮರೆತವರು ಪತ್ರಕರ್ತರ ಸಂಘಕ್ಕೆ ಬೇಕಾಗಿಲ್ಲಃ- ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯ ಮರೆತವರು ಬೇಕಾಗಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಸ್ಪಷ್ಟಪಡಿಸಿದ್ದಾರೆ.  ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಹೆಸರೇ ಸೂಚಿಸಿದಂತೆ ಸಂಘದಲ್ಲಿ ಕಾರ್ಯನಿರತರಿಗೆ ಅವಕಾಶವಿದೆ.  ಕಾರ್ಯ ಮರೆತವರು ನಮಗೆ ಬೇಕಾಗಿಲ್ಲ.  ಅಂಥವರ ಅವಶ್ಯಕತೆಯೂ ನಮಗಿಲ್ಲ ಎಂದು ಖಾರವಾಗಿ ಹೇಳಿದರು. ಕಾರ್ಯನಿರತ ಯಾವ ಪತ್ರಕರ್ತರಿಗೂ ಸಂಘದ ಸದಸ್ಯತ್ವ ಕಾರ್ಡ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ.  […]

CM Conscience: ಆತ್ಮಸಾಕ್ಷಿಯಾಗಿ ಒಂದು ವರ್ಷದ ಕಾರ್ಯಕ್ರಮ ರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಆದ ನಂತರ ಜನ ಹಾಗೂ ಕಾರ್ಯಕರ್ತರು ವ್ಯಕ್ತ ಮಾಡಿರುವ ಆಕ್ರೋಶದ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯಾಗಿ ನಿರ್ಣಯ ಕೈಗೊಂಡು ಬ್ಯಾಂಕ್ವೆಟ್ ಹಾಲಿನಲ್ಲಿ ಮತ್ತು ಪಕ್ಷದ ವತಿಯಿಂದ ದೊಡ್ಡಬಳ್ಲಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ನಿರ್ಣಯದ ಬಗ್ಗೆ ಹಲವಾರು ವ್ಯಾಖ್ಯಾನಗಳು ಆಗಿವೆ. ಆದರೆ. ಮೊನ್ನೆಯ […]

Govt Nomination: ಚಂದ್ರಶೇಖರ ಕವಟಗಿ ಸೇರಿದಂತೆ 25 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ ಸರಕಾರ

ಬೆಂಗಳೂರು: ರಾಜ್ಯ ಸರಕಾರ ಬಸವ ನಾಡು ವಿಜಯಪುರ ಜಿಲ್ಲೆಯ ಚಂದ್ರಶೇಖರ ಕವಟಗಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ನಾನಾ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಿ ಅದೇಶ ಹೊರಡಿಸಿದೆ.  ನಿಗಮಗಳು ಮತ್ತು ನೂತನ ಅಧ್ಯಕ್ಷರ ಹೆಸರುಗಳು ಇಂತಿವೆ. ಚಂದ್ರಶೇಖರ ಕವಟಗಿ- ಲಿಂಬೆ ಅಭಿವೃದ್ಧಿ ಮಂಡಳಿ, ದೇವೇಂದ್ರನಾಥ ಕೆ. ನಾದ, ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಚೆಂಗಾವರ ಮಾರಣ್ಣ- ಕಾಡುಗೊಲ್ಲ ಅಭಿವೃದ್ಧಿ ನಿಗಮ, ಎಂ. ಕೆ. ಶ್ರೀನಿವಾಸ(ಮಿರ್ಲೆ ಶ್ರೀನಿವಾಸಗೌಡ್ರು)- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು, […]

Alamatti Arrest: ಮಹಿಳಾ ವೇ಼ಷ ಧರಿಸಿ ಅಲಮಟ್ಟಿ ಡ್ಯಾಂ‌ ಪ್ರವೇಶಿಸಲು ಯತ್ನಿಸಿದ ಯುವಕ ಪೊಲೀಸರ ವಶ

ವಿಜಯಪುರ: ಮಹಿಳೆಯರ ವೇಷ ಧರಿಸಿ ಆಲಮಟ್ಟಿ ಜಲಾಶಯ ಪ್ರವೇಶಿಸಲು ಯತ್ನಿಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ಬೆಳಗಿನ ಜಾವ ಬುರ್ಖಾ ಧರಿಸಿದ ಮಹಿಳೆ ಒಬ್ಬರು ಜಲಾಶಯದ ಆವರಣ ಪ್ರವೇಶಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ನಿರತರಾಗಿರುವ ಪೊಲೀಸರು ಇಷ್ಟು ಬೇಗ ಡ್ಯಾಂ ಒಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅವನನ್ನು ವಾಪಸ್ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಧ್ವನಿಯನ್ನು ಕೇಳಿದ ಪೊಲೀಸರು ಇದು […]

Media Hugar: 4ನೇ ಅಂಗವಾಗಿ ಪತ್ರಿಕೋದ್ಯಮ ವಿಫಲವಾಗಿದೆ- 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ- ಸುಭಾಷ ಹೂಗಾರ

ವಿಜಯಪುರ: ಸಮಾಜದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಈಗ ವಿಫಲವಾಗಿದೆ. ವಿಶ್ವಾದ್ಯಂತ ಈಗ 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸುಭಾಷ ಹೂಗಾರ ತಿಳಿಸಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ವೃತ್ತಿಯ ಮೂಲ ಉದ್ದೇಶ ಮತ್ತು ಆಶಯ ಬದಲಾಗಬಾರದು. ಸಮಾಜದಲ್ಲಿ ತಾಯಿಯ ಪಾತ್ರವನ್ನು ಪತ್ರಿಕೋದ್ಯಮ ನಿರ್ವಹಿಸಬೇಕು. ಪತ್ರಕರ್ತರಲ್ಲಿ ಮತ್ತು ಮಾಧ್ಯಮ ಮುಖ್ಯಸ್ಥರಲ್ಲಿ […]

MLC Nominated: ಎಂಎಲ್ಸಿ ಸುನೀಲಗೌಡ ಪಾಟೀಲ ಅವರನ್ನು ಮಹಿಳಾ ವಿವಿ ವಿದ್ಯಾವಿಷಯಕ ಪರಿಷತ್ತಿಗೆ ನಾಮನಿರ್ದೇಶನ ಮಾಡಿದ ಸಭಾಪತಿ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರವರನ್ನು ನಾಮನಿರ್ದೇಶನಗೊಳಿಸಿ, ವಿಧಾನ ಪರಿಷತ್ ಸಭಾಪತಿ ಆದೇಶ ಹೊರಡಿಸಿದ್ದಾರೆ. ಸುನೀಲಗೌಡ ಪಾಟೀಲ ಅವರು ವಿಧಾನ ಪರಿಷತ್ ಸದಸ್ಯರಾಗಿರುವ ಚಾಲ್ತಿ ಅವಧಿ ದಿ. 05.01.2028 ವರೆಗೆ ಈ ನಾಮನಿರ್ದೇಶನ ಜಾರಿಯಲ್ಲಿ ಇರಲಿದೆ ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪುರ ಆದೇಶದಲ್ಲಿ ತಿಳಿಸಿದ್ದಾರೆ.

CM Bagina: ಕೆ ಅರ್ ಎಸ್ ಬಾಗೀನ ಅರ್ಪಿಸಿದ ಸಿಎಂ- ಬಸವ ನಾಡಿನ ಆಲಮಟ್ಟಿ ಯಾವಾಗ ಬರ್ತೀರಾ?

ಬೆಂಗಳೂರು: ಕಾವೇರಿ‌ ಜಲಾನಯನ ಪ್ರದೇಶದಲ್ಲಿ ಸುರಿದ ಉತ್ತಮ ಮಳೆ ಆ ಭಾಗದಲ್ಲಿ‌ ಬರುವ ಜಲಾಷಯಗಳು ಭರ್ತಿಯಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಂಪತಿ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಸೇರಿದಂತೆ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು. ಈಗ ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಾಗಿದ್ದು ಆಲಮಟ್ಟಿ‌ ಜಲಾಷಯಕ್ಕೂ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಒಂದು ವೇಳೆ ಕೆ ಬಿ ಜೆ […]

CPI Transfer: ರಾಜ್ಯದಲ್ಲಿ 92 ಸಿಪಿಐ ಗಳ ವರ್ಗಾವಣೆ- ವಿಜಯಪುರಕ್ಕೆ ಯಾರು ಬಂದ್ರು? ಯಾರು ವರ್ಗಾವಣೆಯಾದ್ರು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯ ಸರಕಾರ ವಿಧಾನ ಸಭೆ ಚುನಾವಣೆಗೆ ಇನ್ನೂ ಒಂದು ವರ್ಷಕ್ಕೂ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ 92 ಸಿಪಿಐಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.  ಈ ವರ್ಗಾವಣೆ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯ ಹಲವಾರು ಸಿಪಿಐಗಳನ್ನು ವರ್ಗಾವಣೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಿಂದ ವರ್ಗಾವಣೆಯಾದ ಮತ್ತು ಬೇರೆ ಜಿಲ್ಲೆಯಿಂದ ವಿಜಯಪುರಕ್ಕೆ ಬಂದವರ ಪಟ್ಟಿ ಇಲ್ಲಿದೆ.  ಸುರೇಶ ಬೆಂಡೆಗುಂಬಳ- ವಿಜಯಪುರ ಸಿಇಎನ್ ನಿಂದ- ಹುನಗುಂದ ಸರ್ಕಲ್ ಧೃವರಾಜ ಪಾಟೀಲ- ವಿಜಯಪುರ ರೇಲ್ವೆಯಿಂದ- ನವಲಗುಂದ ಸರ್ಕಲ್ ಶರಣಗೌಡ ಎಂ. ನ್ಯಾಮಣ್ಣವರ- ರಾಜ್ಯ […]