Cheater Arrest: ಪೊಲೀಸರ ಭರ್ಜರಿ ಬೇಟೆ- ಓರ್ವ ಬಂಧನ, ಎಂಟು ಲಾರಿ ಸೇರಿ ರೂ. 2.20 ಮೌಲ್ಯದ ಒಣದ್ರಾಕ್ಷಿ ವಶ

ವಿಜಯಪುರ: ದ್ರಾಕ್ಷಿ ಕಣಜ ಬಸವ ನಾಡು ವಿಜಯಪುರ ಜಿಲ್ಲೆಯ ರೈತರಿಗೆ ಕೋಟ್ಯಂತರ ರೂಪಾಯಿ ಟೋಪಿ ಹಾಕಿದ್ದ ಗುಜರಾತ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ ಎಂಟು ಕಾರು ವಶಪಡಿಸಿಕೊಂಡಿದ್ದು, ಉಳಿದ ಆತೋಪಿಗಳಿಗೆ ಬಲೆ ಬೀಸಿದ್ದಾರೆ. ಗುಜರಾತ ಮೂಲದ ಕಮಲಕುಮಾರ ಸೋಹನಲಾಲ್, ಕೃನಾಲಕುಮಾರ ಉರ್ಫ್ ಸಚೀನ ಮಹೇಂದ್ರಕುಮಾರ ಪಟೇಲ, ಸುನೀಲ, ಜಯೇಶ, ಭರತ ಜೇಟಾಬಾಯಿ ಪಟೇಲ, ನೀಲ ದಿನೇಶಬಾಯಿ ಪಟೇಲ್, ರೋಣಿಕಕುಮಾರ ಪಟೇಲ ಮತ್ತು ಪಿಂಕೇಶ ಸುರೇಶ ಭಾಯಿ ಪಟೇಲ ಅವರು ಗುಮ್ಮಟ ನಗರಿಯಲ್ಲಿ ವ್ಯಾಪಾರ ಮಾಡುವ ವೇಷದಲ್ಲಿ ವಿಜಯಪುರ […]

Temple Clean: ಸ್ವಾಮೀಜಿ ನೇತೃತ್ವ, ಯುವಕರ, ಭಕ್ತರ ಸಹಭಾಗಿತ್ವ- ಸ್ವಚ್ಛವಾಯಿತು ಕೃಷ್ಣಾ ತೀರದ ಚಂದ್ರಭಾಗಾ ಗುಡಿಯ ಪರಿಸರ

ವಿಜಯಪುರ: ಮೈಲಿಗೆ ತೊಳೆಯುವ ಹೆಸರಿನಲ್ಲಿ ಭಕ್ತರು ನದಿ ತೀರಕ್ಕೆ ತೆರಳಿ, ತಾವು ಧರಿಸಿದ ಮತ್ತು ಈ ಹಿಂದೆ ತ್ಯಜಿಸಿದ ಬಟ್ಟೆ‌ ಮತ್ತೀತರ ವಸ್ತುಗಳನ್ನು ಹೊಳೆ ನೀರಿಗೆ ಎಸೆಯುವುದು ಹೆಚ್ಚಾಗುತ್ತಿದೆ. ತಾವು ಪವಿತ್ರರಾಗುವ ಹೆಸರಿನಲ್ಲಿ ಭಕ್ತರು ನದಿಗಳನ್ನು ಮಲೀನಗೊಳಸುವುದು ನದಿ ತೀರದ ಗ್ರಾಮಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲೂ ನದಿ ತೀರದಿಂದ ದೇವಸ್ಥಾನಗಳು ಅಣತಿ ದೂರದಲ್ಲಿದ್ದರೆ ಸಾಕು ತ್ಯಾಜ್ಯಗಳನ್ನು ನೀರಿಗೆ ಎಸೆಯುವ ಕಾರ್ಯ ಹೆಚ್ಚಾಗಿಯೇ ನಡೆಯುತ್ತದೆ. ಇದೇ ರೀತಿ ಉತ್ತರ ಕರ್ನಾಟಕದ ಜೀವ ನದಿ ಕೃಷ್ಣಾ ತೀರದಲ್ಲಿ ಹರಡಿದ್ದ […]

CM Timmakka Site: ಸಾಲುಮರದ ತಿಮಕ್ಕಳಿಗೆ ನಿವೇಶನ ಮಂಜೂರು: ಕ್ಸಿರಯ ಪತ್ರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ(Chief Minister) ಬಸವರಾಜ ಬೊಮ್ಮಾಯಿ(Basavaraj Bommayi) ಸಾಲುಮರದ ತಿಮ್ಮಕ್ಕಳಿಗೆ(Salumarada Timmakka) ಬಿಡಿಎ ನಿವೇಶನ(BDA Site) ಮಂಜೂರು(Sanction) ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿಎಂ ಅವರನ್ನು ಭೇಟಿ ಮಾಡಿದ್ದ ತಿಮ್ಮಕ್ಕ ಈ ನಿಟ್ಟಿನಲ್ಲಿ ಮನವಿ ಮಾಡಿದ್ದರು.   ಸಿಎಂ ಸೂಚನೆ ಮೇರೆಗೆ ಬಿಡಿಎ ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕನಿಗೆ ನೀಡಿದೆ. ಸಾಲುಮರದ ತಿಮ್ಮಕ್ಕನಿಗೆ ನಿವೇಶನ ಕ್ರಯ ಪತ್ರವನ್ನು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಹಸ್ತಾಂತರಿಸಿದ್ದಾರೆ. ಇಂದು ಮುಂಜಾನೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ […]

Lokayukta Case: ಬಸವ ನಾಡಿನಲ್ಲಿ ಹಸಿರು ಕೊರತೆ- ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೇಸ್- ಲೋಕಾಯುಕ್ತ ಬಿ. ಎಸ್. ಪಾಟೀಲ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ(Vijayapura District) ಅರಣ್ಯ ಪ್ರದೇಶ+Forest Kind) ನಿಗದಿಗಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ(Department Officers) ವಿರುದ್ಧ ಕೇಸ್(Case) ಹಾಕಲಾಗುವುದು ಎಂದು ಲೋಕಾಯುಕ್ತ ಬಿ..ಎಸ್. ಪಾಟೀಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ಸರಕಾರದ ನಾನಾ ಇಲಾಖೆಗಳಿಗೆ ಭೇಟಿ ನೀಡುತ್ತಿದ್ದಾರೆ. ‌ಈ ಸಂದರ್ಭದಲ್ಲಿ ಸಸಿ‌ನೆಡುವ ಮತ್ತೀತರ ಕಾರ್ಯಗಳ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಭೌಗೋಳಿಕವಾಗಿ ನಿಗದಿಗಿಂತ ಅತೀ ಕಡಿಮೆ ಅರಣ್ಯ‌ […]

MLC Sunilgouda: ಗ್ರಾ. ಪಂ. ಸದಸ್ಯರಿಗೆ ಸಿಹಿ ಸುದ್ದಿ ಸಿಎಂ‌‌ ಹೇಳಿಕೆ- ನನ್ನ ಹೋರಾಟ ಫಲ ನೀಡುತ್ತಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಹೆಚ್ಚಳ ಕುರಿತು ನಡೆಸುತ್ತಿರುವ ಹೋರಾಟಕ್ಕೆ ಈಗ ಫಲ ಸಿಗುತ್ತಿದೆ. ಗ್ರಾ. ಪಂ. ಸದಸ್ಯರ ಗೌರವ ಧನ ಹೆಚ್ಚಿಸುವಂತೆ ಮೊದಲು ಧ್ವನಿ ಎತ್ತಿರುವ ನಾನು ಈ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಸರಕಾರಕ್ಕೂ ಮನವರಿಕೆಯಾಗಿದೆ. ನಮ್ಮ ಬೇಡಿಕೆಯ ಫಲಶ್ರುತಿಗೆ ಎಂಬಂತೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಶೀಘ್ರದಲ್ಲಿ ಸಿಹಿ ಸುದ್ದಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಎಂದು ವಿಧಾನ ಪರಿಷತ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ […]

Times Rank: ಬಿ ಎಲ್ ಡಿ‌ ಇ‌ ಎಂಜಿನಿಯರಿಂಗ್ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ 41ನೇ ಸ್ಥಾನ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜು ದೆಹಲಿಯ ಟೈಮ್ಸ್ ಎಂಜಿನಿಯರಿಂಗ್ ಪತ್ರಿಕೆ ನಡೆಸಿದ 2022ನೇ ವರ್ಷದ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆಯಲ್ಲಿ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 41ನೇ ಹಾಗೂ ಕರ್ನಾಟಕದಲ್ಲಿ 6ನೇ ಸ್ಥಾನವನ್ನು ಪಡೆದಿದೆ ಎಂದು ಪ್ರಾಚಾರ್ಯ ಡಾ. ವಿ. ಜಿ. ಸಂಗಮ ತಿಳಿಸಿದ್ದಾರೆ‌. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿವರ್ಷ ಟೈಮ್ಸ್ ಎಂಜಿನಿಯರಿಂಗ್ ಪತ್ರಿಕೆ ನಡೆಸುವ ಸಮೀಕ್ಷೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಪ್ರವೇಶಾತಿ, […]

Lokayukta Yatnal: ನೂತನ‌ ಲೋಕಾಯುಕ್ತ ನ್ಯಾ. ಬಿ. ಎಸ್. ಪಾಟೀಲ ಅವರನ್ನು ಅಭಿನಂದಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬೆಂಗಳೂರು: ರಾಜ್ಯ ನೂತನ ಲೋಕಾಯುಕ್ತರಾಗಿ ನ್ಯಾ. ಬಿ. ಎಸ್. ಪಾಟೀಲ‌ ಪ್ರಮಾಣ ವಚನ‌ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು. ನೂತನ ಲೋಕಾಯುಕ್ತರನ್ನು ಭೇಟಿ ಮಾಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ನಾನಾ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ನ್ಯಾ. ಬಿ. ಎಸ್. ಪಾಟೀಲ‌ ಅವರು […]

Lokayukta Oath: ಕರ್ನಾಟಕ ನೂತನ‌ ಲೋಕಾಯುಕ್ತರಾಗಿ ಬಿ.‌ ಎಸ್. ಪಾಟೀಲ ಅಧಿಕಾರ ಸ್ವೀಕಾರ

ಬೆಂಗಳೂರು: ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ(Justice Bhermanagouda Sanganagouda Patil) ಅವರು ರಾಜ್ಯದ(State) ನೂತನ(New) ಲೋಕಾಯುಕ್ತರಾಗಿ(Lokayukta) ಪ್ರಮಾಣ ವಚನ(Oath) ಸ್ವೀಕರಿಸಿದರು ಬೆಂಗಳೂರಿನಲ್ಲಿ ರಾಜಭವನದಲ್ಲಿ ನಡೆದ ಕಾರ್ಯಕ್ರನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಲೋಕಾಯುಕ್ತರಿಗೆ ಹೂ ಗುಚ್ಛ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, […]

Folklore Vijugouda: ಜನಪದ ಕಲಾವಿದರು ನಾಡಿನ ಸಾಂಸ್ಕೃತಿಕ ಆಸ್ತಿ- ವಿಜುಗೌಡ ಪಾಟೀಲ

ವಿಜಯಪುರ: ಜನಪದ ಕಲೆ ಮತ್ತು ಸಾಹಿತ್ಯ ನಮ್ಮ ದೇಶದ ಬಹುದೊಡ್ಡ ಆಸ್ತಿ.  ಜನಪದ ಕಲಾವಿದರು ಕಲಾ ಪ್ರದರ್ಶನದ ಮೂಲಕ ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಹೊಸಜಗತ್ತಿಗೆ ಪರಿಚಯಿಸುತ್ತ ಆದರ್ಶರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾವಯವ ಬೀಜ ಮತ್ತು ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಹೇಳಿದ್ದಾರೆ.  ಕನ್ನಡ ಜಾನಪದ ಪರಿಷತ್ ಜಿಲ್ಲಾ, ತಾಲೂಕು, ವಲಯ ಘಟಕ ಆಶ್ರಯದಲ್ಲಿ ತಿಕೋಟಾ ತಾಲೂಕಿನ ಕನಮಡಿ ಅರಣ್ಯ ಸಿದ್ದೇಶ್ವರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. […]

CM Moovie: 777 ಚಾರ್ಲಿ ಚಿತ್ರ ವೀಕ್ಷಿಸಿ ಭಾವುಕರಾದ ಸಿಎಂ ಬೀದಿ ನಾಯಿಗಳ ದತ್ತು ಪಡೆಯಲು ಕರೆ

ಬೆಂಗಳೂರು: ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿರುವ 777 ಚಾರ್ಲಿ ಕನ್ನಡ ಚಲನ ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ಸನ್ನಿ ಯನ್ನು ನೆನಪಿಸಿಕೊಂಡು ಭಾವುಕರಾದರು. ಅಲ್ಲದೇ, ದುಃಖ ತಡೆಯಲಾಗದೇ ಕಣ್ಣೀರು ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆಯಿತು. ಈ ಚಿತ್ರ ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ (unconditional) ಪ್ರೀತಿಗೆ ಉತ್ತಮ ಉದಾಹರಣೆ. ಇದು ಅತ್ಯಂತ ಪರಿಶುದ್ಧ ಪ್ರೀತಿ ಇದು ಎಂದು ಮುಖ್ಯಮಂತ್ರಿಗಳು ಗದ್ಗದಿತರಾಗಿ ನುಡಿದರು. ನಾಯಕನಟ ರಕ್ಷಿತ […]