ವಿಜಯಪುರಕ್ಕೆ ಸರಕಾರ ಶಾಕ್- ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ರೂಪಿಸುವ ಉದ್ದೇಶವಿದೆ- ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರ ಉತ್ತರ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು(Women University) ಸಾಮಾನ್ಯ ವಿಶ್ವವಿದ್ಯಾಲಯವನ್ನಾಗಿ(Common University) ಪುನಾರಚಿಸಿ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ(Local Juridisdiction) ಸೀಮಿತಗೊಳಿಸಲು ಸರಕಾರ(Government) ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ(Higher Educaiton Minister) ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಕುರಿತು ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಕೇಳಿದ ಪ್ರಶ್ನೆಗೆ ವಿಧಾನ ಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. […]

ಭ್ರಷ್ಟ ಅಧಿಕಾರಿಯ ಅಸಮತೋಲಿತ ಆಸ್ತಿ ಆದಾಯಕ್ಕಿಂತ ಶೇ. 929 ಹೆಚ್ಚು- ಎಸಿಬಿ ಅಧಿಕಾರಿಗಳ ಲೆಕ್ಕಾಚಾರ- ಒಟ್ಟು ಆಸ್ತಿ ಎಷ್ಟು ಗೊತ್ತಾ?

ವಿಜಯಪುರ: ಭ್ರಷ್ಟ(Corrupt) ಅಧಿಕಾರಿ(Officer) ನಿವಾಸ(Residence), ಕಚೇರಿ(Office) ಮತ್ತೀತರ ಕಡೆ ಬೆಳಗಿನ(Morning) ಜಾವ ಧಾಳಿ(Raid) ನಡೆಸಿದ್ದ ಎಸಿಬಿ ಅಧಿಕಾರಿಗಳು ಆದಾಯಕ್ಕಿಂತ ಶೇ. 929 ರಷ್ಟು ಹೆಚ್ಚಿನ ಆಸ್ತಿಯನ್ನು ಪತ್ತೆ ಮಾಡಿದ್ದಾರೆ. ವಿಜಯಪುರ ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ನಾಗೇಂದ್ರಸಾ ಮಾಲಜಿ ಅವರಿಗೆ ಸೇರಿದ ವಿಜಯಪುರ ನಗರದ ಸೋಲಾಪುರ ರಸ್ತೆಯಲ್ಲಿರುವ ಶ್ರೀನಗರ ಕಾಲನಿ ಉತ್ತರದಲ್ಲಿ ಪ್ಲಾಟ್ ನಂ. 57ರ ಮೇಲೆ ಎಸಿಬಿ ಅಧಿಕಾರಿಗಗಳು ಬೆಳಿಗ್ಗೆ ಧಾಳಿ ನಡೆಸಿದ್ದರು.  ಇದರ ಜೊತೆಯಲ್ಲಿಯೇ ಐದು ಪ್ರತ್ಯೇಕ ಸ್ಥಳಗಳಲ್ಲಿ ಇವರಿಗೆ ಆಸ್ತಿಪಾಸ್ತಿ ಲೆಕ್ಕಾಚಾರ […]

ಗುಮ್ಮಟ ನಗರಿಯಲ್ಲಿ ಭ್ರಷ್ಟ ಅಧಿಕಾರಿ ಮನೆ ಮೇಲೆ ಎಸಿಬಿ ಧಾಳಿ- ಬಾತ್ ರೂಂ‌ ನೋಡಿ ಅಚ್ಚರಿಪಟ್ಟ ಅಧಿಕಾರಿಗಳು

ವಿಜಯಪುರ: ಗುಮ್ಮಟ ನಗರಿ)Gummata Nagari) ವಿಜಯಪುರದಲ್ಲಿ(Vijayapura) ಬೆಳ್ಳಂಬೆಳಿಗ್ಗೆ(Early Morning) ಎಸಿಬಿ(ACB) ಧಾಳಿ(Raid) ನಡೆದಿದೆ. ಭ್ರಷ್ಟ ಅಧಿಕಾರಿ(Corrupt Officer) ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು‌ ಧಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದ್ದಾರೆ. ವಿಜಯಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸಗಳ ಮೇಲೆ ಎಸಿಬಿ ಅಧಿಕಾರಿಗಳು ಧಾಳಿ ನಡೆಸಿದ್ದಾರೆ. ವಿಜಯಪುರ ‌ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥಸಾ ಮಳಜಿ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ಎಸಿಬಿ ಅಧಿಕಾರಗಳು ಧಾಳಿ ನಡೆಸಿದ್ದಾರೆ. […]

ಪಾದಯಾತ್ರೆಯಲ್ಲಿ ಬಂದ ಅನುದಾನ ರಹಿತ ಐಟಿಐ ಸಿಬ್ಬಂದಿ- ಸಚಿವರನ್ನು ಭೇಟಿ ಮಾಡಿಸಿದ ಅರುಣ ಶಹಾಪುರ

ಬೆಂಗಳೂರು: ಅನುದಾನಕ್ಕೆ(Grant) ಒಳಪಡಿಸುವಂತೆ ಆಗ್ರಹಿಸಿ‌(Demand) ಅನುದಾನ ರಹಿತ ಐಟಿಐ(Ungranted ITI) ಕಾಲೇಜುಗಳ ಸಿಬ್ಬಂದಿಗಳುCollage Staff) ಕೈಗೊಂಡಿರುವ ಪಾದಯಾತ್ರೆ(Padayatre) ಬೆಂಗಳೂರು(Bengaluru) ತಲುಪಿದೆ. ಹುಬ್ಬಳ್ಳಿಯಿಂದ ಆತಂಭವಾದ ಈ ಪಾದಯಾತ್ರೆ ಬೆಂಗಳೂರು ತಲುಪಿದ್ದು, ಈ ಸಿಬ್ಬಂದಿಯನ್ನು ಎಂ ಎಲ್ ಸಿ ಅರುಣ ಶಹಾಪುರ ಬರಮಾಡಿಕೊಂಡರು. ಅಲ್ಲದೇ, ಪಾದಯಾತ್ರೆಯಲ್ಲಿ ಬಂದ ಹೋರಾಟನಿರತ ಸಿಬ್ಬಂದಿಯ ಜೊತೆ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಕಛೇರಿಗೆ ತೆರಳಿ ಸಚಿವರನ್ನು ಭೇಟಿ ಮಾಡಿದರು. ಅಲ್ಲದೇ, ಅನುದಾನ ರಹಿತ ಐಟಿಐಗಳ ಸಮಸ್ಯೆ […]

ಬತ್ತಿದ ಭೀಮಾ ನದಿಯಲ್ಲಿ ಬಂತು ಮಹಾ ನೀರು- ಬಸವ ನಾಡು ವರದಿ ಫಲಶೃತಿ

ವಿಜಯಪುರ: ಕಳೆದ(Last) ಎರಡು(Two) ತಿಂಗಳಿಂದ(Months) ಬತ್ತಿ(Dry) ಹೋಗಿದ್ದ ಬೀಮೆ ನದಿಯಲ್ಲಿ(Bherma River) ಈಗ ನೀರುWater) ಬಂದಿದೆ. ಈ ಕುರಿತು ಬಸವ ನಾಡು ಫೆ. 21ರಂದು *ಬತ್ತಿದ ಭೀಮಾ ನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುಚಂತೆ ಭೀಮಾ ತೀರದ ರೈತರ ಒತ್ತಾಯ* ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಯನ್ನೂ ಓದಿ: ಬತ್ತಿರುವ ಭೀಮಾನದಿ- ಮಹಾರಾಷ್ಟ್ರದಿಂದ ನೀರು ಬಿಡಿಸುವಂತೆ ಭೀಮಾತೀರದ ರೈತರ ಒತ್ತಾಯ ಅಲ್ಲದೇ, ಬಸವ ನಾಡು ವಿಜಯಪುರ ಜಿಲ್ಲೆಯ ಭೀಮಾ ನದಿ ಬತ್ತಿರುವುದು ರೈತರು ಪಡುತ್ತಿರುವ ಸಂಕಷ್ಟಗಳ […]

10 ವರ್ಷಕ್ಕೊಮ್ಮೆ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ, ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಅರುಣ ಶಹಾಪುರ ಒತ್ತಾಯ

ಬೆಂಗಳೂರು: ಖಾಸಗಿ(Private) ಅನುದಾನ ರಹಿತ(Un Granted) ಶಿಕ್ಷಣ ಸಂಸ್ಥೆಗಳ(Education Institutions) ಮಾನ್ಯತೆ(Accreditation) ನವೀಕರಣವನ್ನು(Renewal) ಪ್ರತಿವರ್ಷ ಮಾಡಬಾರದು.  ಪ್ರತಿ 10 ವರ್ಷಗಳಿಗೊಮ್ಮೆ(Every 10 Years) ಮಾನ್ಯತೆ ನವೀಕರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆ ಕೂಡಲೇ ಸುತ್ತೋಲೆ ಹೊರಡಿಸುವಂತೆ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸರಕಾರವನ್ನು ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಶೂನ್ಯವೇಲೆಯಲ್ಲಿ ಅರುಣ ಶಹಾಪುರ ಈ ಒತ್ತಾಯ ಮಾಡಿದರು.  ಈ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ ಆಡಳಿತ ಪಕ್ಷದ ನಾಯಕ ಮತ್ತು […]

ವಿಜಯಪುರ ಜಿಲ್ಲಾಧಿಕಾರಿ ಮಾದರಿ ನಡೆ- ಉಕ್ರೇನಿನಿಂದ ಮರಳಿದ ವಿದ್ಯಾರ್ಥಿಗಳು, ಪೋಷಕರೊಂದಿಗೆ ಸಭೆ- ಹಿತ ಕಾಯಲು ಜಿಲ್ಲಾಡಳಿತ ಬದ್ಧ ಎಂದ ಡಿಸಿ

ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಮಾದರಿ ಕೆಲಸ(Model work) ಮಾಡಿದ್ದಾರೆ.  ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukrine) ಮರಳಿದ(Return) ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳು(Students) ಮತ್ತು ಪೋಷಕರೊಂದಿಗೆ(Parents) ಸಭೆ(Meeting) ನಡೆಸಿ ಧೈರ್ಯ ತುಂಬಿದ್ದಾರೆ. ವಿಜಯಪುರ ಜಿಲ್ಲೆಯ 16 ಜನ ವಿದ್ಯಾರ್ಥಿಗಳು ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾರೆ.  ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದ್ದರಿಂದ ಅತಂತ್ರರಾಗಿದ್ದ ಎಲ್ಲ ವಿದ್ಯಾರ್ಥಿಗಳು ಈಗ ಬಸವ ನಾಡಿಗೆ ಸುರಕ್ಷಿತವಾಗಿ ಪಾವಸ್ಸಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು […]

ಗ್ರಾ. ಪಂ. ಸದಸ್ಯರ ಗೌರವ ಧನ ಹೆಚ್ಚಳ ವಿಚಾರ- ಸಿಎಂ ಭೇಟಿಯಾಗಿ ಒತ್ತಾಯಿಸಿದ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರಿಗೆ ಕನಿಷ್ಠ ರೂ. 10 ಸಾವಿರ ಮಾಸಿಕ ಗೌರವ ಧನ ನೀಡಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ವಿನಂತಿಸಿದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯರುಗಳಿಗೆ ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವ ಧನವನ್ನು ಹೆಚ್ಚಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈ ಕುರಿತು ನಾನು ಸತತವಾಗಿ ಸಂಬಂಧಿಸಿದ ಸಚಿವರಿಗೆ ಮನವಿ ಮಾಡುತ್ತಾ […]

ಉಕ್ರೇನಿನಿಂದ ಮರಳಿದ ಅಮನ ಮಮದಾಪುರ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಯುದ್ಧ ಪೀಡಿತ(War Hit) ಉಕ್ರೇನಿನಿಂದ(Ukraine) ವಾಪಸ್ಸಾದ(Returned) ವಿಜಯಪುರ ನಗರದ ಆದರ್ಶ ನಗರದ(Adarsh Nagar) ಅಮನ ಮಮದಾಪುರ(Aman Mamadapur) ಮತ್ತು ಅವರ ಕುಟುಂಬ ಸದಸ್ಯರನ್ನು(Family Members) ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ(Appu Pattanashetty) ಭೇಟಿ ಮಾಡಿದರು. ರಾತ್ರಿ ವಿಜಯಪುರಕ್ಕೆ ಅಮನ ಮಮದಾಪುರ ತಮ್ಮ ತಂದೆ ಧರ್ಮರಾಯ ಮಮದಾಪುರ ಜೊತೆ ವಿಜಯಪುರಕ್ಕೆ ಮರಳಿದ್ದರು.  ಈ ವಿಷಯ ತಿಳಿದ ಅಪ್ಪು ಪಟ್ಟಣಶೆಟ್ಟಿ ತಮ್ಮ ಪುತ್ರ ಮಲ್ಲಿಕಾರ್ಜುನ ಮತ್ತು ಬೆಂಬಲಿಗರಾದ ಸನ್ನಿ ಗವಿಮಠ ಅವರೊಂದಿಗೆ ಆದರ್ಶ ನಗರಕ್ಕೆ ತೆರಳಿದರು.  ಅಲ್ಲದೇ, ಅಮನ […]

ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಸುನಿಲಗೌಡ ಪಾಟೀಲ ಬೇಡಿಕೆಗೆ ಸದನದಲ್ಲಿ ಪಕ್ಷಾತೀತ ಬೆಂಬಲ

ಬೆಂಗಳೂರು: ಗ್ರಾಮ ಪಂಚಾಯಿತಿ(Gram Panchayat) ಸದಸ್ಯರ(Members) ಗೌರವಧನ(Honourarium) ಹೆಚ್ಚಿಸುವಂತೆ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದವರು ವಿಧಾನ ಪರಿಷತ್ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda Patil) ಅವರು. ಈ ನಿಟ್ಟಿನಲ್ಲಿ ಈಗ ಸುನೀಲಗೌಡ ಪಾಟೀಲ ಅವರು 5ನೇ ಬಾರಿಗೆ ಮತ್ತೆ ಸದನದಲ್ಲಿ(Legislative Counsil) ಧ್ವನಿ ಎತ್ತಿದ್ದಾರೆ.  ಈ ಕುರಿತು ಸುನಿಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಮತ್ತೆ ಎತ್ತಿರುವ ಧ್ವನಿಗೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ.  ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ ಗ್ರಾ.ಪಂ ಸದಸ್ಯರ […]