200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಗಾಂಧಿಭವನ ವೀಕ್ಷಣೆ- ರಾಷ್ಟ್ರಪಿತನ ಕುರಿತು ಅರಿತುಕೊಳ್ಳಲು ಉಪಯುಕ್ತವಾದ ಭವನ- ಸುರೇಶ ಮುಂಜೆ

ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿಯವರ ಚಳುವಳಿಗೆ ಸತ್ಯ ಮತ್ತು ಅಹಿಂಸಾ ಅಸ್ತ್ರಗಳಾಗಿದ್ದವು.  ಇಂಥ ಸತ್ಯ, ಶಾಂತ, ತ್ಯಾಗಮೂರ್ತಿ ಮಹಾತ್ಮ ಗಾಂಧೀಜಿವರ ತತ್ವಾದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ ಕರೆ ನೀಡಿದರು. ನಗರದ ಇಟ್ಟಂಗಿಹಾಳದ ತುಂಗಳ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಜಿ. ಪಂ. ಬಳಿ ಇರುವ ಗಾಂಧಿಭವನಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಜ್ಞಾನ, ಉದ್ಯೋಗ, ಶಿಕ್ಷಣ ಅನಿವಾರ್ಯವಾಗಬೇಕು.  ಮಹಾನ್ […]

ಸವನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಗುಳ್ಳವನ ಪೂಜೆ

ವಿಜಯಪುರ: ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾಗಿದ್ದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಸವನಹಳ್ಳಿ ಗ್ರಾಮಸ್ಥರು ಗುಳ್ಳವನ ಅಂದರೆ ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿದ ರೈತರ ಮಕ್ಕಳು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಾಡಿ ಬಂದೆ ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ ಕಾರ ಮಳೆಯೇ ಕಪ್ಪತ ಮಳೆಯೇ ಹಳ್ಳಾ ಕೊಳ್ಳಾ ತುಂಬಿಸು ಮಳೆಯೇ ಸುಣ್ಣಾ ಕೊಡತೀನಿ ಸುರಿಯಲೆ ಮಳೆಯೇ ಬಣ್ಣಾ ಕೊಡತೀನಿ ಬಾರಲೆ ಮಳೆಯೇ ಸುರಿಮಳೆಯೇ ಸುರಿಮಳೆಯೇ ಕಾರ ಮಳೆಯೇ ಕಪ್ಪತ […]

ಜೈನ ಮುನಿ ಕೊಲೆ ಪ್ರಕರಣ- ಹಂತಕರನ್ನು ಗಲ್ಲಿಗೇರಿಸಬೇಕು- ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳ ಆಗ್ರಹ

ವಿಜಯಪುರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ಜೈನ ಮುನಿಗಳ ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಜೈನಮುನಿಗಳ ಕೊಲೆಯನ್ನು ಖಂಡಿಸುತ್ತೇನೆ.  ಇಂದು ರಾಜ್ಯದಲ್ಲಿ ಯಾವುದೇ ಧರ್ಮದ ಸ್ವಾಮೀಜಿಗಳು ತಮ್ಮ ಸ್ವಂತಕ್ಕಾಗಿ ಯಾವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.  ಈ ಸಮಾಜದ ಜನರೇ ತಂದೆ-ತಾಯಿ, ಈ ಸಮಾಜದ ಜನತೆಯೇ ನಮ್ಮ ಬಂಧು- ಬಳಗ ಎಂಬ […]

ಜ್ಞಾನಯೋಗಾಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನಗಳ ಧ್ವನಿಸುರುಳಿ ಪ್ರಸಾರ

ವಿಜಯಪುರ: ಪ್ರತಿವರ್ಷ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಮುಗಿದ ನಂತರ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನಡೆಯುತ್ತಿತ್ತು.  ಆದರೆ, ಶತಮಾನದ ಸಂತ ಈ ವರ್ಷಾರಂಭದಲ್ಲಿಯೇ ಪ್ರಕೃತಿಯಲ್ಲಿ ಲೀನರಾಗಿದ್ದಾರೆ.  ಶ್ರೀಗಳು ಈಗ ಇಲ್ಲವಾದರೂ, ಅವರು ಈ ಹಿಂದೆ ನೀಡಿದ ಪ್ರವಚನಗಳ ಧ್ವನಿಸುರುಳಿಗಳ ಪ್ರಸಾರಕ್ಕೆ ಚಾಲನೆ ನೀಡಲಾಗಿದೆ.  ನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನ ನೀಡುತ್ತಿದ್ದ ಸ್ಳಳದಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, […]

ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಗಳಿಗೆ ಸಿಎಂ ಘೋಷಣೆ ಮಾಡಿರುವ ಯೋಜನೆಗಳು

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಗಳಿಗೂ ಸಿಎಂ ಎಸ್. ಸಿದ್ಧರಾಮಯ್ಯ ಉತ್ತಮ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಒಂದೇ ಒಂದೇ ಒಂದೇ ಕರ್ನಾಟಕವೊಂದೇ, ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ, ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ. – ಡಾ. ದ.ರಾ. ಬೇಂದ್ರೆ 281. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಹೆಸರಿನಲ್ಲಿ ಇಡೀ […]

ಮಹಾತ್ಮಾ ಗಾಂಧೀಜಿಯವರ ವಿಚಾರ-ಧಾರೆಗಳ ಪ್ರಸಾರಕ್ಕೆ ಗಾಂಧಿಭವನ ಸದುಪಯೋಗವಾಗಬೇಕು- ಡಾ. ದಾನಮ್ಮನವರ

ವಿಜಯಪುರ: ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶ ವಿಚಾರ ಧಾರೆಗಳನ್ನು ಪ್ರಚುರ ಪಡಿಸಲು ಗಾಂಧಿಭವನದ ಸದುಪಯೋಗವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಗಾಂಧಿಭವನದಲ್ಲಿ ಗಾಂಧಿ ತತ್ವ, ವಿಚಾರಧಾರೆಯನ್ನೊಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೇ, ಗಾಂಧಿಭವನವನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ಹೇಳಿದರು. ಗಾಂಧೀಜಿಯವರ ವಿಚಾರಧಾರೆವುಳ್ಳ್ಳ ಸದಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗಾಂಧಿಜಿಯ ಜೀವನ ಸ್ವಾತಂತ್ರö್ಯ ಚಳುವಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಗಾಂಧಿಜೀವರ ಆಚಾರ-ವಿಚಾರ […]

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆ- ಹರಿದು ಬಂದ ಭಕ್ತಸಾಗರ

ವಿಜಯಪುರ: ಗುರು ಪೂರ್ಣಿಮೆ ಬಂದರೆ ಸಾಕು ನಡೆದಾಡುವ ದೇವರ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದರು.  ಆಶ್ರಮಕ್ಕೆ ಭೇಟಿ ನೀಡಿ ದೂರದಿಂದಲೇ ನಮಸ್ಕರಿಸಿ ಸಾಧ್ಯವಾದರೆ ಹತ್ತಿರದಿಂದ ದರ್ಶನ ಪಡೆದು ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು.  ಆದರೆ, ಈಗ ನಡೆದಾಡಿದ ದೇವರಿಲ್ಲ.  ಆದರೂ ಕಡೆಪಕ್ಷ ಅವರ ಭಾವಚಿತ್ರಕ್ಕೆ ನಮಸ್ಕರಿಸಿದರಾಯಿತು.  ನಡೆದಾಡಿದ ದೇವರ ಗುರುಗಳ ಗದ್ದುಗೆಯ ದರ್ಶನ ಪಡೆದರಾಯಿತು.  ಈಗ ಇರುವ ಶ್ರೀಗಳ ಆಶೀರ್ವಾದ ಪಡೆದರಾಯಿತು ಎಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಗುರುಪೂರ್ಣಿಮೆಗೆ ನಿಜವಾದ ಅರ್ಥ ನೀಡಿದರು. ಇದು ಇದೇ ವರ್ಷದ ಆರಂಭದಲ್ಲಿ […]

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಜಯಂತಿ ಆಚರಣೆ- ಹಳಕಟ್ಟಿ ಕುಟುಂಬಸ್ಥರು, ಅಪರ ಜಿಲ್ಲಾಧಿಕಾರಿ ಭಾಗಿ

ವಿಜಯಪುರ: ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಜಯಂತಿಯನ್ನು ನಗರದ ಬಿ.ಎಲ್.ಡಿ.ಇ. ಸಂಸ್ಥೆಯಲ್ಲಿ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿರುವ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಸಮಾಧಿಗೆ ಗಣ್ಯರು ನಮನ ಸಲ್ಲಿಸಿದರು. ಅಲ್ಲದೇ ಹಳಕಟ್ಟಿಯವರ ಭಾವಚಿತ್ರ ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಳಕಟ್ಟಿಯವರ ಮರಿಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಅವರು ಹಳಕಟ್ಟಿಯವರ ಕುಟುಂಬಸ್ಥರಿಗೆ ಗೌರವಧನದ ಚೆಕ್ ವಿತರಿಸಿದರು. ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ಅವರ ಪತ್ನಿ ಸುಜಾತಾ ಹಳಕಟ್ಟಿ […]

ಬಸವನಾಡಿನ ತಾಳಿಕೋಟೆಯಲ್ಲಿ ನಡೆದ ಶ್ರೀ ಖಾಸ್ಗತ ಮಹಾಶಿವಯೋಗಿಗಳ ಜಾತ್ರೋತ್ಸವ- ಭಾವೈಕ್ಯತೆಗೆ ಸಾಕ್ಷಿಯಾದ ಧಾರ್ಮಿಕ ಕಾರ್ಯಕ್ರಮಗಳು

ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ಅದ್ದೂರಿಯಾಗಿ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೆಳೆದಿವೆ.  ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಮತ್ತು ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮ ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.  ಭಾವೈಕ್ಯತೆಗೆ ಸಾಕ್ಷಿಯಾದ ಈ ಕಾರ್ಯಕ್ರಮ ಜನಮನಸೂರೆಗೊಂಡಿತು. ಬೆಳಿಗ್ಗೆ 9 ಘಂಟೆಗೆ ಶ್ರೀ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಶ್ರೀ […]

ಹಸುವಿನ ಅಂತ್ಯಕ್ರಿಯೆ ನೆರವೇರಿಸಿ ಗೋಭಕ್ತಿ ತೋರಿದ ಬಸವನಾಡಿನ ಮಾತೋಶ್ರೀ ಕಾಲನಿ ನಿವಾಸಿಗಳು

ವಿಜಯಪುರ: ಬೀಡಾಡಿ ದನಗಳೆಂದರೆ ಸಾಕು ಮಾಲಿಕರು ಗೊತ್ತಾಗದ ಕಾರಣ ಸಾರ್ವಜನಿಕರೂ ಅವುಗಳನ್ನು ನಿರ್ಲಕ್ಷ್ಯಿಸುವುದುಂಟು.  ಆದರೆ, ತಮ್ಮ ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಿರುಗಾಡಿಕೊಂಡಿದ್ದ ಹಸು ಅಸುನೀಗಿಡಾದ ಅದನ್ನು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಬಸವ ನಾಡಿನ ಜನ ಗಮನ ಸೆಳೆದಿದ್ದಾರೆ. ನಗರದ ವಾರ್ಡನಂ. 12ರಲ್ಲಿ ಬರುವ ಮಾತೋಶ್ರೀ ಕಾಲನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀಡಾಡಿ ಆಕಳೊಂದು ತಿರುಗಾಡಿಕೊಂಡಿತ್ತು.  ವಿಜಯ ಟಾಯರ್ ಹಿಂದುಗಡೆ ಬರುವ ಬಡಾವಣೆಯಲ್ಲಿ ಬರುವ ಈ ಪ್ರದೇಶದಲ್ಲಿನ ಈ ಹಸು ಸಾವನ್ನಪ್ಪಿದೆ.  ಈ ವಿಷಯ ತಿಳಿದ ಬಟಾವಣೆ […]