Person Worship: ವ್ಯಕ್ತಿಪೂಜೆ ಮಿತಿ ಮೀರಿದರೆ ವ್ಯಕ್ತಿ, ಆತನ ಸಂಘ, ಪಕ್ಷ ಹಾಳಾಗುತ್ತವೆ- ಸು. ರಾಮಣ್ಣ

ವಿಜಯಪುರ: ವ್ಯಕ್ತಿಪೂಜೆ ಮಿತಿ ಮೀರಿದರೇ ಆ ವ್ಯಕ್ತಿಯ ಜೊತೆಗೆ ಆತನ ಸಂಘ ಮತ್ತು ಪಕ್ಷವೂ ಹಾಳಾಗಿ ಹೋಗುತ್ತದೆ.  ಈ ಹಿನ್ನೆಲೆಯಲ್ಲಿಯೇ ಆರ್ ಎಸ್ ಎಸ್ ಮೊದಲ ಸರಸಂಘಚಾಲಕ ಡಾ. ಕೇಶವ ಬಲರಾಮ ಹೆಗಡೆವಾರ ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು ಎಂದು ಆರ್ ಎಸ್ ಎಸ್ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದ್ದಾರೆ. ವಿಜಯಪುರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ನಡೆದ ಮರಾಠಿ ಪುಸ್ತಕ ರಂಗಾ ಹರಿ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಸಿರುವ ಕೃತಿಯನ್ನು […]

Raksha Bandhan: ಪತ್ರಕರ್ತರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಸಹೋದರಿಯರು

ವಿಜಯಪುರ: ಒಡಹುಟ್ಟಿದವರು ಮಾತ್ರ ಸಹೋದರರು ಅಲ್ಲ. ರಕ್ಷಣೆ ಕೊಡುವವರೂ ಎಲ್ಲರೂ ಸಹೋದರ ಬಾಂಧವರೇ ಎಂದು ಬಿ. ಕೆ. ಸರೋಜಿನಿ ಹೇಳಿದರು. ವಿಜಯಪುರ ನಗರದ ಹುತಾತ್ಮ ವೃತ್ತದಲ್ಲಿ ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಪತ್ರಕರ್ತರಿಗೆ ಆಯೋಜಿಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ರಾಖಿ ಕಟ್ಟಿ ಅವರು ಮಾತನಾಡಿದರು. ಮಾತು ಎಲ್ಲರ ಜೀವನ ಪರಿವರ್ತನೆ ಮಾಡುವಂತಿರಬೇಕು. ಸಮಯದ ಜಾಗೃತೆ ಇರಬೇಕು. ಸಮಯ ಹೋದರೆ ಮರಳಿ ಬರುವುದಿಲ್ಲ. ಪಂಚಭೂತವಾದ ಕೆಟ್ಟಗುಣಗಳನ್ನು ದಾನವಾಗಿ ಭಗವಂತನಿಗೆ ಕೊಡಬೇಕು. ರಕ್ಷಾ ಬಂಧನ ಕೇವಲ […]

Nalatwad Moharrum: ಬಸವ ನಾಡಿನ ವೈಶಿಷ್ಠ್ಯ- ಅಗ್ನಿಯಲ್ಲಿ ಹಾಯ್ದು ಮೊಹಂ ಉತ್ಸವದಲ್ಲಿ ಪಾಲ್ಗೋಂಡ ಬಾಂಧವರು

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ತರಹೇವಾರಿ ಜಾತ್ರೆ, ಸಂಪ್ರದಾಯ, ಆಚರಣೆ, ಕೋಮು ಸೌಹಾರ್ದತೆಗೆ ಹೆಸರುವಾಸಿ.  ರಾಜ್ಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಹಬ್ಬಗಳು, ಆಚರಣೆಗಳು, ಜಾತ್ರೆಗಳು, ಉತ್ಸವಗಳು ಅತೀ ಹೆಚ್ಚು.  ಪ್ರತಿ ದಿನವೂ ಒಂದಿಲ್ಲೊಂದು ಗ್ರಾಮಗಳಲ್ಲಿ ಜಾತ್ರೆ, ಉತ್ಸವ, ಹಬ್ಬಗಳು, ಕಾರ್ಯಕ್ರಮಗಳ ನಡೆದೇ ಇರುತ್ತವೆ.  ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಾರ್ಜಜನಿಕವಾಗಿ ಆಚರಿಸಲಾಗುವು ಜಾತ್ರೆಗಳು, ಹಬ್ಬ, ಹರಿದಿನಗಳು, ಉತ್ಸವಗಳಿಗೆ ಮಂಕು ಕವಿದಿತ್ತು.  ಆದರೆ, ಈ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿದ್ದ ಆತಂಕ ಬಹುತೇಕ ಕಡಿಮೆಯಾಗಿರುವ […]

Moharrum Celebraton: ಬಸವ ನಾಡಿನಲ್ಲಿ ಮೊಹರಂ ಸಂಭ್ರಮ- ಗಮನ ಸೆಳೆಯುತ್ತಿದ್ದಾರೆ ಹುಲಿವೇಷಧಾರಿಗಳು

ವಿಜಯಪುರ: ಶರಣರ ನಾಡು.  ಸೂಫಿ ಸಂತರ ಬೀಡು.  ಬಸವ ನಾಡು ವಿಜಯಪುರ ಈಗ ಭಾವೈಕ್ಯತೆಗೆ ಪ್ರತೀಕವಾಗಿರುವ ಮೊಹರಂ ಸಂಭ್ರಮದಲ್ಲಿದೆ.  ಮೊಹರಂ ಅಂಗವಾಗಿ ಹಿಂದೂ ಮಕ್ಕಳು ಮತ್ತು ಯುವಕರೂ ಕೂಡ ಹುಲಿವೇಷ ಹಾಕುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಆಚರಣೆಗೆ ಈಗ ಗತವೈಭವಕ್ಕೆ ಮರಳುತ್ತಿದೆ. ಐತಿಹಾಸಿಕ ವಿಜಯಪುರ ನಗರದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹುಲಿ ವೇಷಧಾರಿಗಳಿಗೆ ಬಣ್ಣ ಹಚ್ಚುವ ಕೆಲಸವೂ ಜೋರಾಗಿತ್ತು.  ವಿಜಯಪುರ ನಗರದ ಉಪ್ಪಲಿ ಬುರುಜ್ ಹತ್ತಿರದ ಕಲಾವಿದ ನಾರಾಯಣ ಕಾಳೆ ಇವರ ನೇತೃತ್ವದಲ್ಲಿ […]

Har Ghar Tiranga: ಗ್ರಾ. ಪಂ. ಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿ. ಪಂ. ಸಿಇಓ ರಾಹುಲ್ ಶಿಂಧೆ ಚಾಲನೆ

ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕಣಾಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ನಾ‌ನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ತಿಡಗುಂದಿ ಗ್ರಾಮ ಪಂಚಾಯಿತಿ, ಇಂಡಿ ತಾಲೂಕಿನ ಹೊರ್ತಿ ಮತ್ತು ಝಳಕಿ ಗ್ರಾಮ ಪಂಚಾಯಿತಿ ಹಾಗೂ ಚಡಚಣ ತಾಲೂಕಿನ ಬರಡೋಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ರಾಷ್ಟ್ರಧ್ವಜ ವಿತರಣೆ ಮಾಡಿದರು. ಸರಕಾರದ ನಿಯಮದಂತೆ ಪ್ರತಿ ಮನೆ-ಮನೆಯಲ್ಲಿಯೂ […]

Kasapa Joshi: ಕಸಾಪ ರಾಜ್ಯಾಧ್ಯಕ್ಷ ನಾ. ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆಗೆ ಸಮನಾದ ಸ್ಥಾನಮಾನ- ಹಾಸಿಂಪೀರ ವಾಲಿಕಾರ ಅಭಿನಂದನೆ

ಬೆಂಗಳೂರು:  ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನ ನೀಡಿ ಸರಕಾರ ಆದೇಶ ನೀಡಿದೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತ ಸರಕಾರ ಈ ಆದೇಶ ಹೊರಡಿಸಿದೆ. ಹಾಸಿಂಪೀರ ವಾಲಿಕಾರ ಅಭಿನಂದನೆ ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ ಸರಕಾರ ಗೌರವಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿನಂದನೆ ಸಲ್ಲಿಸಿದ್ದಾರೆ.  

Panchami Poem: ಅಣ್ಣ-ತಂಗಿಯರ ಸಂಬಂಧ ಬೆಸೆಯುವ ನಾಗರ ಪಂಚಮಿ ಕುರಿತು ಖ್ಯಾತ ವೈದ್ಯ ಡಾ. ಅರುಣ ಇನಾಮದಾರ ರಚಿತ ಕವನ

ವಿಜಯಪುರ: ವಗರದ ಚರ್ಮರೋಗ ಖ್ಯಾತ ತಜ್ಞ ವೈದ್ಯ ಡಾ. ಅರುಣ ಇನಾಮದಾರ ಕೇವಲ ತಮ್ಮ ವೃತ್ತಿಯಲ್ಲಷ್ಟೇ ಶ್ರೇಷ್ಠರಾಗಿಲ್ಲ. ಸಾಹಿತ್ಯ ಅದರಲ್ಲೂ ವಚನ ಸಾಹಿತ್ಯದಲ್ಲಿಯೂ ಎತ್ತಿದ ಕೈ ಎನಿಸಿಕೊಂಡಿದ್ದಾರೆ. ನಾನಾ ಶರಣರ ವಚನಗಳನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡುವ ಮೂಲಕ ಈಗಾಗಲೇ ಗಮನ ಸೆಳೆದಿರುವ ಅವರು ಆಗಾಗ ಕವನಗಳನ್ನೂ ಬರೆಯುವ ಮೂಲಕ ಮೆಚ್ಚುಗೆ ಗಳಿಸುತ್ತಿದ್ದಾರೆ. ನಾಗರ ಪಂಚಮಿ ಅಂಗವಾಗಿ ಅಣ್ಣ-ತಂಗಿಯರ ಸಂಬಂಧ ಬೆಸೆಯುವ ಕವನವನ್ನು ವಿಶೇಷವಾಗಿ ಬಸವ ನಾಡು ವೆಬ್ ಗಾಗಿ ರಚಿಸಿದ್ದಾರೆ. ಅವರ ಕವನ ಇಲ್ಲಿದೆ. ಡಾ. […]

BLDEA Rameshkumar: ಬಿ ಎಲ್ ಡಿ ಇ ಸಂಸ್ಥೆಯ ಕಟ್ಟಿ ಬೆಳೆಸಿದ ಮಹನೀಯರ ಸ್ಮರಣೆ- ಜು. 27 ರಂದು ನಡೆಯುವ ಕಾರ್ಯಕ್ರಮದಲ್ಲಿ ರಮೇಶಕುಮಾರ ಭಾಗಿ

ವಿಜಯಪುರ: ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪೂಜ್ಯ ಡಾ.ಫ.ಗುಹಳಕಟ್ಟಿ, ಬಂಥನಾಳ ಶಿವಯೋಗಿಗಳ, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ. ಬಿ. ಎಂ. ಪಾಟೀಲ ಅವರ ಸ್ಮರಣೆ ಅಂಗವಾಗಿ ವರ್ತಮಾನದ ಬದುಕು ಎಂಬ ವಿಷಯದ ಕುರಿತು ಕರ್ನಾಟಕ ವಿಧಾನಸಭೆ ಮಾಜಿ ಅಧ್ಯಕ್ಷ, ಶಾಸಕ ಕೆ.ಆರ್.ರಮೇಶಕುಮಾರ ಅವರು ಮಾತನಾಡಲಿದ್ದಾರೆ. ದಿ.27 ಬುಧವಾರ ಬೆ.11ಗಂ. ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಧಾರವಾಡ […]

Jagadamba Jatre: ವಿಜಯಪುರದಲ್ಲಿ ಗಮನ ಸೆಳೆಯುತ್ತಿದೆ ಜೋರಾಪುರ ಪೇಟೆಯ ಅಂಬಾ ಭಾವಾನಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ

ವಿಜಯಪುರ: ಬಸವ ನಾಡು ವಿಜಯಪುರದಲ್ಲೋಂದು ಜಾಗೃತ ದೇವಸ್ಥಾನವಿದೆ.  ಇಲ್ಲಿ ನೆಲೆಸಿರುವ ಶಕ್ತಿದೇವತೆ, ಸರ್ವಶಕ್ತರೂಪಿಣಿ ಎಂದೆ ಹೆಸರಾಗಿರುವ ದೇವಿಯ ದರ್ಶನಕ್ಕೆ ಸಾವಿರಾರು ಜನ ಬರುವುದುಂಟು.  ಈಗ ಈ ಜಾಗೃತ ದೇವಸ್ಥಾನದಲ್ಲಿ ದಶಮಾನೋತ್ಸವ ಕಾರ್ಯಕರ್ಮ ನಡೆಯುತ್ತಿದೆ.  ಇದರ ಅಂಗವಾಗಿ ದೇವಸ್ಥಾನದ ಉಸ್ತುವಾರಿ ಸಮತಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.  ವಿಜಯಪುರ ನಗರದ ಜೊರಾಪುರ ಪೇಟೆಯಲ್ಲಿರುವ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ದಶಮಾನೋತ್ಸವ ಸಂಭ್ರಮ ಕಳೆಗಟ್ಟಿದೆ‌.  ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರದ ಜೊತೆಗೆ ತರಹೇವಾಹಿ ಬಣ್ಣಬಣ್ಣದ ಹೂವುಗಳಿಂದಲೂ ಅಲಂಕಾರ ಮಾಡಲಾಗಿದೆ.  ಈ ದೇವಸ್ಥಾನದಲ್ಲಿ […]

Journalists Siddheshwar Swamiji: ಪತ್ರಕರ್ತರು ಸಾರ್ವಜನಿಕ ಶಿಕ್ಷಕರು- ಶ್ರೀ ಸಿದ್ಧೇಶ್ವರ ಸ್ಚಾಮೀಜಿ

ವಿಜಯಪುರ: ಪ್ರತಿದಿನ ಹೊಸ ಹೊಸ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರು ಸಾರ್ವಜನಿಕರ ಶಿಕ್ಷಕರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾಡನಾಡಿದರು. ಪತ್ರಿಕೆಗಳಿಗೆ ಓದುಗರ ಮನಸ್ಸು ವಿಕಾಸಗೊಳಿಸುವ, ಮುಖವಿದೆ, ಸರಕಾರದ ನಡೆ, ನುಡಿ ತಿದ್ದುವ ಮುಖವಿದೆ. ‌ಈ ಮುಖದಲ್ಲಿ ಯಾವ ಮುಖವೂ ವಿಮುಖವಾಗಬಾರದು. ಪತ್ರಿಕೆಗಳಲ್ಲಿ ಕ್ರೀಡೆಗಳಿಗೂ ಒಂದು ಪುಟ ಮೀಸಲಿರುತ್ತದೆ. ಯುವಜನತೆಗೆ ಈ […]