Halakatti Jayanti: ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಂದ ಹಳಕಟ್ಟಿಯವರಿಗೆ ನಮನ

ವಿಜಯಪುರ ನಗರದ ಬಿ ಎಲ್ ಡಿ‌ ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ‌ ಸಂಶೋಧನ ಕೇಂದ್ರದಲ್ಲಿ ವಚಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ‌ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಅಂಗವಾಗಿ ಹಳಕಟ್ಟಿ ಪ್ರತಿಮೆಗೆ ಅಪರ ಜಿಲ್ಲಾಧಿಕಾರಿ‌ ರಮೇಶ ಕಳಸದ ಮಾಲಾರ್ಪಣೆ ಮಾಡಿದರು. ನಂತರ ಹಳಕಟ್ಟಿ‌ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಬಳಿಕ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸಂಶೋಧನ‌ ಕೇಂದ್ರದಲ್ಲಿರುವ ಹಳಕಟ್ಟಿ […]

Mannettina Amavasye: ಬಸವ ನಾಡಿನಲ್ಲಿ ಗಮನ ಸೆಳೆದ ಮಣ್ಣೆತ್ತಿನ ಅಮವಾಸ್ಯೆ- ಮಣ್ಣಿನ ಮಕ್ಕಳ ಮನೆಯ ಅಲಂಕರಿಸಿದ ಮಣ್ಣೆತ್ತಿನ ಮೂರ್ತಿಗಳು

ವಿಜಯಪುರ: ಉತ್ತರ ಕರ್ನಾಟಕ ಎಂದರೆ ಸಾಕು ತರಹೇವಾರಿ ಸಂಪ್ರದಾಯಗಳು ಮತ್ತು ಆಚರಣೆಗೆ ಹೆಸರುವಾಸಿ. ಅದರಲ್ಲೂ ರೈತರು ತಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವ ಹಾಗೂ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕೃಷಿಗೆ ಸಂಬಂಧಿಸಿದ ಸಲಕರಣೆಗಳು, ಸಾಕು ಪ್ರಾಣಿಗಳ ಬಗ್ಗೆ ಹೊಂದಿರುವ ಅನೂನ್ಯತೆ ಅಪರಿಮಿತವಾಗಿರುತ್ತದೆ‌.  ಅನ್ನದಾತರು ಕೈಗೊಳ್ಳುವ ಪ್ರಮುಖ ಕೃಷಿ ಚಟುವಟಿಕೆಗಳಿಗೆ ಎತ್ತುಗಳೇ ಆಧಾರ. ‌ತಮ್ಮ‌ ಬದುಕಿಗೆ ಆಸರೆಯಾಗುವ ಎತ್ತುಗಳನ್ನು ಪ್ರೀತಿಯಿಂದ ಪೂಜಿಸಿ ಸಂಭ್ರಮಿಸುವ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಇಂಥ ವಿಶಿಷ್ಠ ದ ಹಬ್ಬದ ಅಂಗವಾಗಿ ಮಣ್ಣಿನ ಎತ್ತುಗಳ ಮಾರಾಟ ಮತ್ತು […]

Amrut Bharati: ಹಲಸಂಗಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ- ಸಂಸದ ರಮೇಶ ಜಿಗಜಿಣಗಿ, ಶಾಸಕ ಡಾ. ದೇವಾನಂದ‌ ಚವ್ಹಾಣ ಭಾಗಿ

ವಿಜಯಪುರ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆಯಿತು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ರಮೇಶ ಜಿಗಜಿಣಗಿ‌ ಮತ್ತು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಉದ್ಘಾಟಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮ ಹಲಸಂಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ […]

Oxen Race: ಮೈ ನವಿರೇಳಿಸಿದ ಎತ್ತುಗಳ ಓಡಾಟ ಕಾರ ಹುಣ್ಣಿಮೆಯಾದ ಏಳನೇ ದಿನಕ್ಕೆ ಕಾಖಂಡಕಿಯಲ್ಲಿ ನಡೆದ ಆಚರಣೆ ಬಲು ರೋಚಕ

ವಿಜಯಪುರ: ರಸ್ತೆ ಪಕ್ಕದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ. ಬಹುತೇಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರೆ, ಹಲವರು ನಾನಾ ಅಂಗಡಿಗಳು ಮನೆಗಳ ಜಗುಲಿಗಳ ಮೇಲೆ ನಿಂತಿದ್ದರು. ಒಂದೊಂದಾಗಿ ಎತ್ತುಗಳು ಓಡಾಡುತ್ತಿದ್ದರೆ, ಕಟ್ಟಿರುವ ಹಗ್ಗಗಳದ ಅವುಗಳನ್ನು ಯಿವಕರು ನಿಭಾಯಿಸುತ್ತಿದ್ದರು. ಮೈ ನವಿರೇಳಿಸುವ ಈ ದೃಷ್ಯ ಕಂಡು ಬಂದದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ. ಕೇಕೆ ಹಾಕುತ್ತ ಶಿಳ್ಳೆಯ ಶಬ್ದ ಮಾಡುತ್ತ ಒಂದೆಡೆ ದಿಕ್ಕಾ ಪಾಲಾಗಿ ಜನರು ಓಡುತ್ತಿದ್ದರು. ಮತ್ತೊಂದೆಡೆ ಸುರಕ್ಷಿತ ಸ್ಥಳ ಹುಡುಕುತ್ತಾ ಕೆಲವರು ಪರದಾಡುತ್ತಿದ್ದರು. […]

Father’s Day: ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ತಂದೆಯ ಪಾದಪೂಜೆ ಮಾಡಿದ ಮಕ್ಕಳು

ವಿಜಯಪುರ: ವಿಶ್ವ ಅಪ್ಪಂದಿರ ದಿನಾಚರಣೆ ಅಂಗವಾಗಿ ಬಸವ ನಾಡು ವಿಜಯಪುರದ ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು.   ಗುರುಗಳ, ಮಾತೆ ಪಾದಪೂಜೆ ನಡೆಸುವುದು ಇತ್ತೀಚೆಗೆ ಮಾಮೂಲಾಗಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳು ಅಂದರೆ ಇಲ್ಲಿನ ವಿದ್ಯಾರ್ಥಿಗಳು ತಂತಮ್ನ‌ ಅಪ್ಪಂದಿರ ಪಾದಪೂಜೆ ಮಾಡುವ ಮೂಲಕ ಗಮನ ಸೆಳೆದರು. ತಂದೆಯ ಪಾದಗಳನ್ನು ಜಲದಿಂದ ಸ್ವಚ್ಛಗೊಳಿಸಿದ ಮಕ್ಕಳು‌ ನಂತರ ಆ ಪಾದಗಳಿಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಪುಷ್ಪ ಸಮರ್ಪಿಸಿ ಪೂಜೆ ಮಾಡುವ ಮೂಲಕ ಧನ್ಯತೆ ತೋರಿದರು. ಮಕ್ಕಳು […]

Governor Vachana Shila Mantap: ಬಸವ ನಾಡಿನಲ್ಲಿ ವಚನ ಶಿಲಾ ಮಂಟಪ ಲೋಕಾರ್ಪಣೆ ಮಾಡಿದ ರಾಜ್ಯಪಾಲ ಥಾವರ ಚಂದ ಗೆಲ್ಹೋಟ್

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಿರ್ಮಿಸಲಾಗಿರುವ ವಚನ ಶಿಲಾ ಮಂಟಪವನ್ನು ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಲೋಕಾರ್ಪಣೆ ಮಾಡಿದ್ದಾರೆ. ಇಂಗಳೇಶ್ವರ ಮಠದ ಹಿರಿಯ ಶ್ರೀಗಳಾದ, ಚನ್ನಬಸವ ಸ್ವಾಮೀಜಿ ಸೇರಿದಂತೆ ನಾನಾ ಮಠಾಧೀಶರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮಕ್ಕೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಬಳಿಕ ಮಾತನಾಡಿದ ಅವರು, ವಿಶ್ವಕ್ಕೆ ಸಮಾನತೆ ಸಾರಿದ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅಣ್ಣ ಬಸವಣ್ಣನವರ ವಚನಗಳು ಈ ವಚನ […]

Book Release: ಗ್ರಾಮ ಸ್ವರಾಜ್ಯ ಸಾಕಾರ ಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ ಗ್ರಂಥ ಲೋಕಾರ್ಪಣೆಗೆ ಸಜ್ಜು

ವಿಜಯಪುರ: ರಾಜ್ಯೋತ್ಸವ ಪ್ರಶಸ್ತಿ(Rajyotsava Awardee) ಪುರಸ್ಕೃತ ಹಿರಿಯ ಸಾಹಿತಿ(Senior Literaute) ಡಾ ಕೃಷ್ಣ ಕೊಲ್ಹಾರಕುಲಕರ್ಣಿ(Dr Krishna Kolhar Kulkarni) ರಚಿಸಿರುವ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ(Karnataka Sahitya Academy Award Win) ಪಾತ್ರವಾಗಿರುವ ‘ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ(Ramappa Balappa Bidari) ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಮೇ 5 ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಕ್ಕರೆ ಕಾರ್ಖಾನೆಯ ಕೆ. ಎಚ್. ಪಾಟೀಲ ಸಭಾ ಭವನದಲ್ಲಿ ಗ್ರಂಥ ಲೋಕಾರ್ಪಣೆ […]

Shivabasava Jayatni: ಶಿವಬಸವ ಜಯಂತಿ ಅಂಗವಾಗಿ ಬಸವ ನಾಡಿನಲ್ಲಿ ಶೋಭಾಯಾತ್ರೆ- ಬಿಜೆಪಿ ಸೇರಿ ನಾನಾ ಮುಖಂಡರು ಭಾಗಿ

ವಿಜಯಪುರ: ಶಿವಬಸವ ಜಯಂತಿ(Shiva Basava Jayanti) ಅಂಗವಾಗಿ ಬಸವ ನಾಡು(Basava Nadu) ವಿಜಯಪುರ ನಗರದಲ್ಲಿ(Vijayapura City) ಶೋಭಾಯಾತ್ರೆ(Shobha Yatre) ನಡೆಯಿತು.  ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ತಿಲಕ ಚೌಕಿನಿಂದ(Tilak Chowk) ಆರಂಭವಾದ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.  ಈ ಮೆರವಣಿಗೆಯಲ್ಲಿ ಬಸವೇಶ್ವರ ಮತ್ತು ಶಿವಾಜಿ ಮಹಾರಾಜರ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬೀಜ ಮತ್ತು ಸಾವಯುವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, […]

Bajava Jayanti: ಬಸವಣ್ಣನ ಜನ್ಮಸ್ಥಳದಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ- ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ ಹಿನ್ನೆಲೆ ಸಿಎಂ ಬಿಡಲಿ, ಸಚಿವರೂ ಬರದೆ ನಿರ್ಲಕ್ಷ್ಯ ಆರೋಪ

ವಿಜಯಪುರ: ಬಸವಣ್ಣನವರ(Anna Basaveshwar) ಜನ್ಮಸ್ಥಳ(Birth Place) ವಿಜಯಪುರ ಜಿಲ್ಲೆಯ(Vijayapura District) ಬಸವನ ಬಾಗೇವಾಡಿಯಲ್ಲಿ(Basavana Bagewadi) ನಡೆದ ರಾಜ್ಯ ಮಟ್ಟದ ಬಸವ ಜಯಂತಿ(Basava Jayanti)  ಆಚರಣೆ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಸಿದ ಆರೋಪ ಕೇಳಿ ಬಂದಿದೆ.   ಈ ಭಾಗದ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಸವಣ್ಣನವರ ಜನ್ಮಸ್ಥಳದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕರ್ಮ ಆಯೋಜನೆ ಮಾಡಲಾಗಿತ್ತು.  ಅಲ್ಲದೇ, ಈ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯೂ ನಡೆಸಲಾಗಿತ್ತು.  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು […]

MBP Kudalsangam: ಬಸವಣ್ಣನವರ ಐಕ್ಯಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಂ. ಬಿ. ಪಾಟೀಲ- ಬಸವಾದಿ ಶರಣರ ವಚನಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಬಾಗಲಕೋಟೆ: ವಿಶ್ವಗುರು(Vishwaguru) ಬಸವಣ್ಣನವರ ಜಯಂತಿ(Basaveshwar Jayatni) ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಬೆಳಿಗ್ಗೆ ಕೂಡಲ ಸಂಗಮದ(Kudal Sangam) ಬಸವಣ್ಣನವರು ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆದಿದ್ದಾರೆ.  ಈ ಸಂದರ್ಭದಲ್ಲಿ ಐಕ್ಯ ಮಂಟಪದಲ್ಲಿ ಕೆಲಕಾಲ ಧ್ಯಾನ ನಡೆಸಿದರು.  ಈ ಸಮಯದಲ್ಲಿ ಉಪಸ್ಥಿತರಿದ್ದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಚನಗಳನ್ನು ಪಠಿಸಿದರು. ಅಲ್ಲದೇ, ಎಂ. ಬಿ. ಪಾಟೀಲ ಅವರಿಗೆ […]