ಹಾಸಿಂಪೀರ ವಾಲಿಕಾರ ಗೆಲ್ಲಿಸಿ ಎಲ್ಲ ವಾದಗಳಿಗೆ ಕಸಾಪ ಚುನಾವಣೆ ಮೂಲಕ ಉತ್ತರ ನೀಡಿದ ಮತದಾರರು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಎಲ್ಲಾ ವಾದಿಗಳ ತರ್ಕವನ್ನು ತಲೆಕೆಳಗು ಮಾಡಿದೆ. ಈ ಚುನಾವಣೆಯಲ್ಲಿ ಮತದಾರರು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಹಾಸಿಂಪೀರ ವಾಲಿಕಾರ ಅವರನ್ನು ಮತ ಹಾಕಿ ಗೆಲ್ಲಿಸುವ ಮೂಲಕ ವಾದಿಗಳಿಗೆ ವ್ಯಾದಿಗೆ ಪರೋಕ್ಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಯಾರಾರು, ಯಾವ್ಯಾವ ಲೆಕ್ಕಾಚಾರ ಹಾಕಿದ್ದರೋ ಅದನ್ನೆಲ್ಲ ಉಲ್ಟಾಪಲ್ಟಾ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಹಾಸಿಂಪೀರ ವಾಲಿಕಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ನಿಕಟಪೂರ್ವ ಅಧ್ಯಕ್ಷ ಹಾಗೂ […]

ಕನಕದಾಸ ಜಯಂತಿ ಆಚರಣೆ: ಭಕ್ತಶ್ರೇಷ್ಠರ ಪುತ್ಥಳಿಗೆ ಸಿಎಂ ಪುಷ್ಪನಮನ

ಬೆಂಗಳೂರು: ಕನಕದಾಸ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಕನಕದಾಸರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪುತ್ಥಳಿಗೆ ಸಿಎಂ‌ಪುಷ್ಪನಮನ ಸಲ್ಲಿಸಿದರು.   ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ, ಸುನೀಲಕುಮಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು.  

ಹಿರಿಯರು ದಶಕಗಳ ಹಿಂದೆ ಹಿಂದೆ ಹೊತ್ತಿದ್ದ ಹಳೆಯ ಹರಕೆಯನ್ನು ತೀರಿಸಿದ ಮುಸ್ಲಿಂ ಕುಟುಂಬ

ವಿಜಯಪುರ: ಇದು ಕೋಮು ಸಾಮರಸ್ಯಕ್ಕೆ ಹೆಸರಾಗಿರುವ ಬಸವನಾಡಿನಲ್ಲಿ ನಡೆದ ಮನಮುಟ್ಟುವ ಸ್ಟೋರಿ.  ಶರಣರ ನಾಡು.  ಸೂಫಿ ಸಂತರ ಬೀಡು ಎಂದೇ ಹೆಸರಾಗಿರುವ ಜಿಲ್ಲೆಯಲ್ಲಿ ನಡೆದ ಭಾವೈಕ್ಯೆತೆಗೆ ಸಾಕ್ಷಿಯಾದ ಕಾರ್ಯಕ್ರಮ.  ವಿಶೇಷ ಕಾರ್ಯಕ್ರಮ ಎಂದರೂ ತಪ್ಪಲ್ಲ.   ಈ ಕಾರ್ಯಕ್ರಮದಲ್ಲಿ ಇಡೀ ಊರಿಗೆ ಊರೇ ಪಾಲ್ಗೋಂಡು ಸಂಭ್ರಮಿಸಿದ್ದು ಈ ಸಮಾರಂಭದ ಮತ್ತೋಂದು ವಿಶೇಷ.  ಇಲ್ಲಿ ಮುಸ್ಲಿಂ ಭಕ್ತರು ತಮ್ಮ ಹಿರಿಯರು 50 ವರ್ಷಗಳ ಹಿಂದೆ ಹಿಂದೂ ದೇವರಿಗೆ ಹೊತ್ತಿದ್ದ ಹರಕೆಯನ್ನು ತೀರಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ.  ಈ ಕುಟುಂಬದ […]

ನಮ್ಮ ಮನೆಯಲ್ಲಿ 40 ಆಕಳುಗಳಿವೆ- ಗೋ ಪೂಜೆ ನಮ್ಮ ಸಂಪ್ರದಾಯ- ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಜಲಂಸಪನ್ಮೂಲ ಸಚಿವ ಗೋವಿಂದ ಕಾರಜೋಳ ದೀಪಾವಳಿ ಬಲಿಪಾಡ್ಯದ ಅಂಗವಾಗಿ ಗೋವಿಗೆ ಪೂಜೆ ಮಾಡಿ ಆಹಾರ ಹಾಕುವ ಮೂಲಕ ಸಂಪ್ರದಾಯ ನೆರವೇರಿಸಿದ್ದಾರೆ. ಬೆಂಗಳೂರು ನಗರದ ಮಲ್ಲೇಶ್ವರ(ಮಲ್ಲೇಶ್ವರಂ) ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಗೋ ಪೂಜೆ ಸಲ್ಲಿಸಿದ ಅವರು, ಗೋವಿಗೆ ಕರ್ಪೂರ ಬೆಳಗಿ ಬಾಳೆಹಣ್ಣು ಮತ್ತು ಇತರ ಆಹಾರ ಧಾನ್ಯಗಳನ್ನು ತಿನ್ನಿಸುವ ಮೂಲಕ ದೀಪಾವಳಿ ಬಲಿಪಾಡ್ಯವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಬಳಿಕ ಮಾತನಾಡಿದ ಅವರು, ದೀಪಾವಳಿ ಬಲಿಪಾಡ್ಯ ದಿನ ಸರಕಾರ ಆದೇಶ ಮಾಡಿದೆ ಎಂಬ ಕಾರಣಕ್ಕೆ ತಾವು ಗೋವು ಪೂಜೆ ಮಾಡಿಲ್ಲ.  […]

ದೀಪಾವಳಿ ಅಂಗವಾಗಿ ಬಿಡದಿ ತೋಟದಲ್ಲಿ ಗೋವಿನ ಪೂಜೆ ನೆರವೇರಿಸಿದ ಎಚ್. ಡಿ. ಕುಮಾರಸ್ವಾಮಿ ದಂಪತಿ

ರಾಮನಗರ: ದೀಪಾವಳಿ ಹಬ್ಬದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಪತ್ನಿ ಮತ್ತು  ಶಾಸಕಿ ಅನಿತಾ ಕುಮಾರಸ್ವಾಮಿ ಜೊತೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ತಮ್ಮ ತೋಟದಲ್ಲಿ ಗೋವಿನ ಪೂಜೆ ನೆರವೇರಿಸಿದರು. ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿ ದಿನ ಶ್ರೀಕೃಷ್ಣ ಪರಮಾತ್ಮನು ಇಂದ್ರನನ್ನು ಸೋಲಿಸಿದ ದಿನವೂ ಹೌದು.  ಇಂದ್ರನ ದಾಳಿಯಿಂದ ತನ್ನ ಗೋವು ಸಮೂಹವನ್ನು ರಕ್ಷಿಸಲು ಗೋಪಾಲನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು.  ಆದ್ದರಿಂದಲೇ ಗೋವು ಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ.  […]

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ.  ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿ,ಸಿದ್ದಾರೆ.  ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು […]

ಮಾಜಿ ಸಿಎಂ ಬಿ ಎಸ್ ವೈ ಭೇಟಿಯಾಗಿ ದಸರಾ ಶುಭಾಷಯ ಕೋರಿದ ಸಿಎಂ ಬೊಮ್ಮಾಯಿ

ವಿಜಯಪುರ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದಸರಾ ಮತ್ತು ವಿಜಯ ದಶಮಿ ಶುಭಾಷಯ ಕೋರಿದ್ದಾರೆ.   ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ದಿನ ತಮಗೆ ಶುಭ ತರಲಿ ದಸರಾ ಮತ್ತು ವಿಜಯ ದಶಮಿ ಶುಭಾಷಯ ಕೋರಿದರು.

ಮುಜರಾಯಿ ಇಲಾಖೆ ಅರ್ಚಕರು, ದೇವಾಲಯ ನೌಕರರಿಗೆ ದಸರಾ ಬಂಪರ್ ಕೊಡುಗೆ ಘೋಷಿಸಿದ ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ನೌಕರರಿಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮೆ ಯೋಜನೆ ಮತ್ತು ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿ ಮಾಡುವಂತೆ ಆದೇಶ ಹೊರಡಿಸಿರುವುದಾಗಿ ತಿಳಿಸಿದರು. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ನೌಕರರು ಆರೋಗ್ಯ […]

ಬಸವ ನಾಡಿನಲ್ಲಿ 45 ವರ್ಷಗಳಿಂದ ಆದಿಶಕ್ತಿ ತರುಣ ಮಂಡಳಿ ಆಶ್ರಯದಲ್ಲಿ ನಡೆಯುತ್ತಿದೆ ನವರಾತ್ರಿ ಆಚರಣೆ

ವಿಜಯಪುರ: ನಾಡಹಬ್ಬ ದಸರಾ ಬಂದರೆ ಸಾಕು ನಾಡಿನೆಲ್ಲೆಡೆ ಜನರ ಮನೆಮನಗಳಲ್ಲಿ ನಾಡದೇವಿಯ ಆರಾಧನೆ ನಡೆಯುತ್ತದೆ. ಅದರಲ್ಲೂ ಬಸವ ನಾಡು ವಿಜಯಪುರ ಜಿಲ್ಲೆಯ ಗುಮ್ಮಟ ನಗರಿ ವಿಜಯಪುರದಲ್ಲಿ ನಾಡದೇವಿ ಉತ್ಸವಕ್ಕೆ ದಶಕಗಳ ಇತಿಹಾಸವಿದೆ.  ಇಲ್ಲಿನ ಸಾರ್ವಜನಿಕ ನಾಡದೇವಿ ಉತ್ಸವಗಳೂ ಕೂಡ ಸಾಕಷ್ಟು ಗಮನ ಸೆಳೆಯುತ್ತವೆ.  ಬಹುತೇಕ ಕಡೆ ಒಂಬತ್ತು ದಿನಗಳವರೆಗೆ ನಾಡದೇವಿಯನ್ನು ಪ್ರತಿಷ್ಠಾಪಿಸಿದರೆ ಕೆಲವು ಕಡೆಗಳಲ್ಲಿ ಐದು ದಿನಗಳವರೆಗೆ ನಾಡದೇವಿಯನ್ನು ಕೂಡಿಸಿ ಪೂಜಿಸುವುದು ವಾಡಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಿಓಪಿ ಮೂರ್ತಿಗಳನ್ನು ಸರಕಾರಗಳು ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ ಎಂಬ […]

ಕೆ ಆರ್ ಎಸ್ ಬಳಿ ಕಾವೇರಿ ತಾಯಿಗೆ ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷ್ಣರಾಜ ಸಾಗರ ಡ್ಯಾಮ್ ಬಳಿ ಕಾವೇರಿ ತಾಯಿಗೆ ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದರು.     ಪತ್ನಿ ಚನ್ನಮ್ಮ ಜೊತೆ ಸಾಂಪ್ರದಾಯಿಕ ಉಡುಗೆಯಾದ ರೇಷ್ಮೆ ಪಂಚೆ ಹಾಗೂ ಶರ್ಟ್ ತೊಟ್ಟು ಪೂಜೆ ಸಲ್ಲಿಸಿದರು. ಸಕಲ ಧಾರ್ಮಿಕ ಸಂಪ್ರದಾಯದೊಂದಿಗೆ ದಂಪತಿಗಳು ಪೂಜೆ ಸಲ್ಲಿಸಿದರು. ನಂತರ ದಸರಾ ಉದ್ಘಾಟನೆಗಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ ಬೈರತಿ ಬಸವರಾಜ, ಸುನಿಲಕುಮಾರ, ಶಾಸಕ ಅರವಿಂದ ಬೆಲ್ಲದ ಮತ್ತು ಇತರರು ಉಪಸ್ಥಿತರಿದ್ದರು.