UPSC Rank: ಎರಡನೇ ಬಾರಿಗೆ ಯುಪಿಎಸ್‍ಸಿ ಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಬಸವ ನಾಡಿನ ಸವಿತಾ ಗೋಟ್ಯಾಳ

ವಿಜಯಪುರ: ಬಸವ ನಾಡಿನ(Basava Nadu) ಯುವತಿ(Youth) ಸವಿತಾ ಗೋಟ್ಯಾಳ(Savita Gotyal) ಎರಡನೇ(Second) ಬಾರಿಗೆ ಯುಪಿಎಸ್‍ಸಿ ಪಾಸು(UPSC Pass) ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ವಿಜಯಪುರ ನಗರದ ಸಿದ್ದಾರೂಢ ನಗರದ ನಿವಾಸಿಯಾಗಿರುವ ಬಿಎಸ್‍ಎನ್‍ಎಲ್ ನಿವೃತ್ತ ನೌಕರ ಸಿದ್ದಪ್ಪ ಹಣಮಂತಪ್ಪ ಗೋಟ್ಯಾಳ ಮತ್ತು ಜಯಶ್ರೀ ಸಿದ್ದಪ್ಪ ಗೋಟ್ಯಾಳ ಅವರ ಎರಡನೇ ಪುತ್ರಿ ಸವಿತಾ ಗೋಟ್ಯಾಳ ಈ ಬಾರಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 479 ನೇ ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. 2019 ರಲ್ಲಿ ನಡೆದ ಪರೀಕ್ಷೆಯಲ್ಲಿ 626 ನೇ […]

SSLC Results: ಬಸವ ನಾಡಿನ ಬಂಪರ್ ಸಾಧನೆ- ಜಿಲ್ಲೆ, 7 ಜನ ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್- ಜಿಲ್ಲಾಡಳಿತದ ಪ್ರಯತ್ನಕ್ಕೆ ಸಂದ ಫಲ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ಮತ್ತು ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಂಪರ್ ಸಾಧನೆ ಮಾಡಿದ್ದಾರೆ. ರಾಜ್ಯಕ್ಕೆ ವಿಜಯಪುರ ಜಿಲ್ಲೆ ಮೊದಲು ಸ್ಥಾನ ಪಡೆದಿದ್ದು, ಪರೀಕ್ಷೆಗೆ ಹಾಜರಾದ ಶೇ. 87.57 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಲ್ಲದೇ, ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.     […]

Achievers Award: ಬಸವ ನಾಡಿನ ಶಿವಾಜಿಗೆ ದಿನಪತ್ರಿಕೆಯ ವತಿಯಿಂದ ಸಾಧಕರ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬಸವ ನಾಡಿನ(Basava Nadu) ಸಾಧಕ(Achiever) ಶೈಕ್ಷಣಿಕ ರಂಗದಲ್ಲಿ(Education Section) ಅವರದೇ ಆದ ಸಾಧನೆ ಮಾಡಿರುವ ವಿಜಯಪುರ(Vijayapura) ನಗರದ ಶಿವಾಜಿ ಗಾಯಕವಾಡ(Shivaji Gayakawad) ಅವರಿಗೆ ದೈನಿಕವೊಂದು ಸಾಧಕರ ಪ್ರಶಸ್ತಿ ನೀಡಿ ಗೌರವಿಸಿದೆ.  ರಾಜ್ಯದ ಕನ್ನಡ ದೈನಿಕ ವಿಜಯ ಕರ್ನಾಟಕ ದಿನಪತ್ರಿಕೆಯ ಉತ್ತರ ಕರ್ನಾಟಕದ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ನಡೆಯಿತು.  ಪಂಚತಾರಾ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ ಈ ಪ್ರಶಸ್ತಿ ಪ್ರಧಾನ ಮಾಡಿದರು. ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ […]

Summer Hot: ಬಸವ ನಾಡಿನಲ್ಲಿ ಮುಂದಿನ ಐದು ದಿನ ಬಿಸಿಲಿನ ಝಳ ಹೆಚ್ಚಳ- ಉಷ್ಣಾಂಶ ಸುಮಾರು 44 ° ಸೆಲ್ಸಿಯಸ್ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪುರ: ಈಗಾಗಲೇ ಬಿಸಿಲಿನ(Heat) ಬೇಗೆಯಿಂದ(Sweating) ತತ್ತರಿಸಿರುವ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ(Vijayapura District) ಜನತೆಗೆ ಮುಂದಿನ ಐದು ದಿನಗಳಲ್ಲಿ(Next Five Days) ಸೆಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಮುಂದಿನ ಐದು ದಿನಗಳಲ್ಲಿ ಬಿಸಿ ವಾತಾವರಣದೊಂದಿಗೆ ಉತ್ತರ ಕರ್ನಾಟಕದಾದ್ಯಂತ ಬೇಸಿಗೆಯ ಕಾವು ಹೆಚ್ಚಾಗಲಿದೆ.  ಆಕಾಶವೂ ಕೂಡ ಸ್ಪಷ್ಟವಾಗಿರಲಿದೆ.  ಯಾವುದೇ ಮೋಡ ಕವಿಯುವ ಸಾಧ್ಯತೆಗಳೂ ಇಲ್ಲ.  ಮಳೆಯೂ ಸುರಿಯುವ ಲಕ್ಷಣಗಳಿಲ್ಲ. ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 41 °ಸೆ. ನಿಂದ 43 […]

Dual Party System: ದ್ವಿಪಕ್ಷ ಪದ್ಧತಿ ಜಾರಿಗೆ ಆಗ್ರಹ: 42 ದಿನ 1500 ಕಿ. ಮೀ. ದೆಹಲಿಗೆ ಪಾದಯಾತ್ರೆ ಕೈಗೊಂಡು ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ ಬಸವ ನಾಡಿನ ಹಿರಿಯ ಮುತ್ಸದ್ದಿ

ವಿಜಯಪುರ: ದೇಶದಲ್ಲಿ ದ್ವಿಪಕ್ಷ ಪದ್ಧತಿ(Dual Party System) ಜಾರಿಯಾಗಬೇಕು.  ಮತ್ತು ಚಲಾವಣೆಯಾದ ಮತಗಳಲ್ಲಿ(Casted Votes) ಶೇ. 50ಕ್ಕಿಂತಲೂ ಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು(Candidate) ಮಾತ್ರ ವಿಜಯಿ(Winner) ಎಂದು ಘೋಷಿಸುವಂತೆ ಆಗ್ರಹಿಸಿ ಬಸವ ನಾಡಿನ(ಬಸವ ನಾಡು) ಹಿರಿಯ ಮುತ್ಸದ್ದಿಯೊಬ್ಬರು 1500 ಕಿ. ಮೀ. ಪಾದಯಾತ್ರೆ ನಡೆಸಿ ಸಂಸದ ರಮೇಶ ಜಿಗಜಿಣಗಿ ಸಮ್ಮುಖದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ 62 ವರ್ಷದ […]

Lemon Festival-2022:ಬಸವ ನಾಡಿನಲ್ಲಿ ಭರದಿಂದ ಸಾಗಿದ ಲಿಂಬೆ ಉತ್ಸವ- ಗಮನ ಸೆಳೆಯುತ್ತಿರುವ ಸಿರಿಧಾನ್ಯ ಸೇರಿದಂತೆ ನಾನಾ ವಸ್ತುಗಳ ಪ್ರದರ್ಶನ

ವಿಜಯಪುರ: ಬಸವ ನಾಡು(Basava Nadu) ವಿಜಯಪುರದಲ್ಲಿ(Vijayapura) ಇದೇ ಮೊದಲ(First) ಬಾರಿಗೆ(Time) ರಾಜ್ಯಮಟ್ಟದ ಲಿಂಬೆ ಉತ್ಸವ-2022(State Level Lemon Fest-2022) ಭರದಿಂದ ಸಾಗಿದೆ.    ವಿಜಯಪುರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆರಂಭವಾಗಿರುವ ಈ ಉತ್ಸವದಲ್ಲಿ ಕೇಂದ್ರ ಸರಕಾರದ ಮಹಾತ್ಮಕಾಂಕ್ಷಿ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ-ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ವಿಜಯಪೂರ ಜಿಲ್ಲೆಗೆ ಲಿಂಬೆ ಬೆಳೆ ಆಯ್ಕೆಯಾದ ಹಿನ್ನೆಲೆಯಲ್ಲಿ ಏಪ್ರೀಲ್ 23 ಮತ್ತು ಏಪ್ರೀಲ್ 24ರಂದು ಎರಡು ದಿನಗಳ ಕಾಲ  ನಗರದಲ್ಲಿ […]

ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಪರೀಕ್ಷೆ ಬರೆದ ಮಹಿಳೆ- ಎಲ್ಲಿ ಗೊತ್ತಾ?

ವಿಜಯಪುರ: ತಾಯಿಯೊಬ್ಬಳು ನಾಲ್ಕು ತಿಂಗಳ ಕರುಳ ಕುಡಿಯೊಂದಿಗೆ ಬಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಅಪರೂಪದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾನದಾರ ಎಂಬ ಮಹಿಳಡ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಮುಂಚೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಎಸ್ ಎಸ್ ಎಲ್ ಸಿ ಖಾಸಗಿ ಪರೀಕ್ಷೆಗಳನ್ಬು ಈ ಬಾರಿ ತಾಲೂಕು ಕೇಂದ್ರದಲ್ಲಿ ಬರೆಯಲು […]

ಬಸವ ನಾಡಿನಲ್ಲಿ ಮತ್ತೆ ಕಂಪಿಸಿದ ಭೂಮಿ- ಎಲ್ಲಿ? ಎಷ್ಟು ತೀವ್ರತೆ? ಯಾವಾಗ ಗೊತ್ತಾ?

ವಿಜಯಪುರ: ಬಸವ(Basava) (ನಾಡು) ವಿಜಯಪುರ(vijayapura) ಜಿಲ್ಲೆಯಲ್ಲಿ(District) ಮತ್ತೆ ಲಘು(Mild) ಭೂಕಂಪದ(Earthquake) ಅನುಭವವಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದರ ಅನುಭವವಾಗಿದೆ. ಉಕ್ಕಲಿ ಗ್ರಾಮದ ಬಸವೇಶ್ವರ ನಗರದ ಉತ್ತರಪೂರ್ವ ಭಾಗದಲ್ಲಿ 1.3 ಕಿ. ಮೀ. ದೂರದಲ್ಲಿ ಈ ಭೂಕಂಪದ ಕೇಂದ್ರ ದಾಖಲಾಗಿದೆ.  ರಿಕ್ಚರ್ ಮಾಪಕದಲ್ಲಿ 2.8 ತೀವ್ರತೆ ದಾಖಲಾಗಿದೆ. ಶನಿವಾರ ರಾತ್ರಿ 7.50 ನಿಮಷಕ್ಕೆ ಲಘು ಭೂಕಂಪವಾಗಿದ್ದು, ಭೂಮಯಿ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ಅದರ ಅನುಭವ ಉಕ್ಕಲಿ ಮತ್ತು ಇತರ […]

ಮೊಸರ ನಾಡಿನಲ್ಲಿ ಹೋಳಿ ಆಚರಣೆಯಲ್ಲಿ ಬಣ್ಣದಲ್ಲಿ ಮಿಂದೆದ್ದು ಕುಣಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ

ವಿಜಯಪುರ: ಜನರ ಮನಸ್ಸನ್ನು ರಂಗು ರಂಗೀನವಾಗಿಸುವ ಹಬ್ಬ ಹೋಳಿ ಹುಣ್ಣಿಮೆ.  ಈ ಹುಣ್ಣಿಮೆಯಾದ ಎರಡು ದಿನಗಳ ನಂತರ ಬಸವ ನಾಡು ವಿಜಯಪುರ ಜಿಲ್ಲೆಯ ಮೊಸರ ನಾಡು ಕೊಲ್ಹಾರದಲ್ಲಿ ಈ ಬಾರಿ ನಡೆದ ಬಣ್ಣದಾಟ ಗಮನ ಸೆಳೆಯಿತು. ಆಲಮಟ್ಟಿ ಜಲಾಷಯ ನಿರ್ಮಾಣದಿಂದ ಮುಳುಗಡೆಯಾಗಿರುವ ಹಳೆಯ ಕೊಲ್ಹಾರದಲ್ಲಿ ಈ ಹಿಂದೆ ಪರಂಪರಾಗತವಾಗಿ ಯಾವುದೇ ಭೇದ ಭಾವವಿಲ್ಲದೇ ಎಲ್ಲರೂ ಕೂಡಿಕೊಂಡು ಸಂಭ್ರಮದಿಂದ ಹೋಳಿ ಹಬ್ಬದ ಬಣ್ಣದಾಟ ಆಡುತ್ತಿದ್ದರು.  ಆದರೆ, ಕಳೆದ ಹಲವು ವರ್ಷಗಳಿಂದ ಸಾಮೂಹಿಕವಾಗಿ ನಡೆಯುವ ಈ ಆಚರಣೆಗೆ ಮರೆಯಾಗಿತ್ತು. ಈ […]

ಉಕ್ರೇನಿನಿಂದ ಬೆಂಗಳೂರಿಗೆ ಬಂದ ಬಸವ ನಾಡಿನ ವಿವಿಧಾ ಮಲ್ಲಿಕಾರ್ಜುನಮಠ

ಬೆಂಗಳೂರು: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡು ವಿಜಯಪುರದ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬೆಂಗಳೂರು ತಲುಪಿದ್ದಾರೆ. ಯುದ್ಧ ಪೀಡಿತ ಪೂರ್ವ ಉಕ್ರೇನಿನ ಖಾರ್ಕಿವನಲ್ಲಿ ಬಂಕರ್ ನಲ್ಲಿ ರಕ್ಷಣೆ ಪಡೆದಿದ್ದ ವಿವಿಧಾ ಮಲ್ಲಿಕಾರ್ಜುನಮಠ ಪೊಲಂಡ ಮೂಲಕ ರವಿವಾರ ನವದೆಹಲಿಗೆ ಆಗಮಿಸಿದ್ದರು. ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ತಂದೆ ಅಲ್ಲನಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರಿ, ತಮ್ಮ ಜೈವಿಹಾನ, ಸೋದರ ಮಾವ ಬಸವರಾಜ ಮೇಲಿನಮಠ ಮುಂತಾದವರು ಸ್ವಾಗತಿಸಿ ಬರಮಾಡಿಕೊಂಡರು. ಮಗಳ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮನದಿಂದ ತಾಯಿ ಭುವನೇಶ್ವರಿ […]