ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ

ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ  ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]