Bajava Jayanti: ಬಸವಣ್ಣನ ಜನ್ಮಸ್ಥಳದಲ್ಲಿ ಕಾಟಾಚಾರಕ್ಕೆ ಜಯಂತಿ ಆಚರಣೆ- ರಾಜ್ಯಕ್ಕೆ ಅಮಿತ್ ಶಾ ಆಗಮಿಸಿದ ಹಿನ್ನೆಲೆ ಸಿಎಂ ಬಿಡಲಿ, ಸಚಿವರೂ ಬರದೆ ನಿರ್ಲಕ್ಷ್ಯ ಆರೋಪ

ವಿಜಯಪುರ: ಬಸವಣ್ಣನವರ(Anna Basaveshwar) ಜನ್ಮಸ್ಥಳ(Birth Place) ವಿಜಯಪುರ ಜಿಲ್ಲೆಯ(Vijayapura District) ಬಸವನ ಬಾಗೇವಾಡಿಯಲ್ಲಿ(Basavana Bagewadi) ನಡೆದ ರಾಜ್ಯ ಮಟ್ಟದ ಬಸವ ಜಯಂತಿ(Basava Jayanti)  ಆಚರಣೆ ಕಾರ್ಯಕ್ರಮ ಕಾಟಾಚಾರಕ್ಕೆ ನಡೆಸಿದ ಆರೋಪ ಕೇಳಿ ಬಂದಿದೆ.   ಈ ಭಾಗದ ಜನ ಮತ್ತು ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬಸವಣ್ಣನವರ ಜನ್ಮಸ್ಥಳದಲ್ಲಿ ರಾಜ್ಯಮಟ್ಟದ ಬಸವ ಜಯಂತಿ ಕಾರ್ಯಕರ್ಮ ಆಯೋಜನೆ ಮಾಡಲಾಗಿತ್ತು.  ಅಲ್ಲದೇ, ಈ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿಯೂ ನಡೆಸಲಾಗಿತ್ತು.  ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು […]