ನಿಂಬಾಳ ಕೆ. ಡಿ. ಗ್ರಾಮದಲ್ಲಿ ಒತ್ತುವರಿಯಾದ ರಸ್ತೆ, ದಾರಿ ಸಮಸ್ಯೆ ಸರಿಪಡಿಸಲು ಕ್ರಮ- ಡಿಸಿ ಪಿ. ಸುನೀಲ ಕುಮಾರ.

ವಿಜಯಪುರ:  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಕೆ. ಡಿ.(Nimbal K D) ಗ್ರಾಮದಲ್ಲಿ (Village) ಒತ್ತುವರಿಗಿರುವ ರಸ್ತೆ ಮತ್ತು ದಾರಿಗಳ ಸಮಸ್ಯೆಗಳನ್ನು(Roads Enchroachments and Problems) ಸರಿಪಡಿಸಲಾಗುವದು.  ರಸ್ತೆಗಳ ಕೊರತೆಗಳನ್ನು ಗ್ರಾಮ ಮಟ್ಟದಲ್ಲಿ ಬಗೆಹರಿಸುವದು ಸೂಕ್ತವಾಗಿದ್ದು, ಕುಡಿಯುವ ನೀರಿನ ಸಮಸ್ಯೆ(Drinking Water Problem) ನಿವಾರಣೆಗೆ ಪಂಚಾಯಿತಿ ವತಿಯಿಂದ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು.  ಬರ ಪೀಡಿತ ಎಂದು ಘೋಷಣೆಯಾದ ಮೇಲೆ ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. […]