ನಿಂಬಾಳ ಕೆ. ಡಿ. ಗ್ರಾಮದಲ್ಲಿ ಒತ್ತುವರಿಯಾದ ರಸ್ತೆ, ದಾರಿ ಸಮಸ್ಯೆ ಸರಿಪಡಿಸಲು ಕ್ರಮ- ಡಿಸಿ ಪಿ. ಸುನೀಲ ಕುಮಾರ.

ವಿಜಯಪುರ:  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಕೆ. ಡಿ.(Nimbal K D) ಗ್ರಾಮದಲ್ಲಿ (Village) ಒತ್ತುವರಿಗಿರುವ ರಸ್ತೆ ಮತ್ತು ದಾರಿಗಳ ಸಮಸ್ಯೆಗಳನ್ನು(Roads Enchroachments and Problems) ಸರಿಪಡಿಸಲಾಗುವದು.  ರಸ್ತೆಗಳ ಕೊರತೆಗಳನ್ನು ಗ್ರಾಮ ಮಟ್ಟದಲ್ಲಿ ಬಗೆಹರಿಸುವದು ಸೂಕ್ತವಾಗಿದ್ದು, ಕುಡಿಯುವ ನೀರಿನ ಸಮಸ್ಯೆ(Drinking Water Problem) ನಿವಾರಣೆಗೆ ಪಂಚಾಯಿತಿ ವತಿಯಿಂದ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು.  ಬರ ಪೀಡಿತ ಎಂದು ಘೋಷಣೆಯಾದ ಮೇಲೆ ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. […]

ಡಿಸಿ ನಡೆ ಹಳ್ಳಿಗಳ ಕಡೆ- ಈ ಬಾರಿ ಉಪ್ಪಲದಿನ್ನಿ ಗ್ರಾಮದಲ್ಲಿ ಕಾರ್ಯಕ್ರಮ- ಪೂರ್ವಭಾವಿ ಸಭೆ ನಡೆಸಿದ ಜಿಲ್ಲಾಧಿಕಾರಿ

ವಿಜಯಪುರ: ಜಿಲ್ಲಾಧಿಕಾರಿಗಳ(Deputy Commissioner) ನಡೆ ಹಳ್ಳಿಗಳ ಕಡೆ(Nadige Halligala Kadege) ಕಾರ್ಯಕ್ರಮ(Programme) ಮಾ. 19 ರಂದು ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಉಪ್ಪಲದಿನ್ನಿಯಲ್ಲಿ(Uppaladinni) ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ವಿಜಯಪುರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಉಪ್ಪಲದಿನ್ನಿ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕ ಸ್ಮಶಾನ ಭೂಮಿ ಸಮಸ್ಯೆ, ಪಿಂಚಣಿ, ವೈಯಕ್ತಿಕ ಮತ್ತು ಸಮುದಾಯ ಶೌಚಾಲಯ ಸಮಸ್ಯೆ, ರಸ್ತೆ ಸಮಸ್ಯೆ, ಆಶ್ರಯ ಯೋಜನೆಗಳಡಿಯ ಮನೆಗಳ ಸಮಸ್ಯೆ ಸೇರಿದಂತೆ […]