ಮಾರ್ಚ್ 27ರಂದು ಬಸವ ನಾಡಿನಲ್ಲಿ ಶ್ರೀ ಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮ

ವಿಜಯಪುರ: ಶ್ರೀಹಲಗಣೇಶ ಪ್ರಕಾಶನದ ಹೆಮ್ಮೆಯ ಪ್ರಕಟಣೆ ಶ್ರೀಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ನಗರದಲ್ಲಿ ಮಾರ್ಚ್ 27ರಂದು ನಡೆಯಲಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಮತ್ತು‌‌ ಪಂಚಾಂಗಕರ್ತ ಗುರುರಾಜ ಆಚಾರ್ಯ ಹೆರಕಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಂದು ರವಿವಾರ ಬೆ. 10ಕ್ಕೆ ವಿಜಯಪುರ ನಗರದ ಪಿಡಿಜೆ ಹೈಸ್ಕೂಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪಾಂಡುರಂಗ ಆಚಾರ್ಯ ಜಾಲಿಹಾಳ, ಮಧ್ವಾಚಾರ್ಯ ಮೊಕಾಶಿ, ಭೀಮಾಚಾರ್ಯ ಗೋಠೆ, ಕನ್ನೂರು […]