ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ವತಿಯಿಂದ ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ

ವಿಜಯಪುರ: ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಯಿಂದಾಗಿ ಜನತೆ ರೋಸಿ ಹೋಗಿದ್ದು, ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ಜಿಲ್ಲಾದ್ಯಂತ ಅಲ್ಲಲ್ಲಿ ಬೆಲೆ ಏರಿಕೆ ಮುಕ್ತ ಭಾರತ ಅಭಿಯಾನ ನಡೆಸಲಾಯಿತು. ವಿಜಯಪುರ ನಗರದ ಖಾದಿ ಗ್ರಾಮೋದ್ಯೋಗ ವೃತ್ತದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಖಾಲಿ ಗ್ಯಾಸ್ ಸಿಲೆಂಡರ್‍ಗಳು ಮತ್ತು ಮೋಟರ ಸೈಕಲ್‍ಗಳನ್ನು ಅಡ್ಡ ಮಲಗಿಸಿ ಅವುಗಳಿಗೆ ಹಾರ ಹಾಕಿ ಹಲಿಗೆಯನ್ನು ಬಾರಿಸುತ್ತ ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹನ […]

ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸುತ್ತಿರುವ ಸುನಿಲಗೌಡ ಪಾಟೀಲ ಬೇಡಿಕೆಗೆ ಸದನದಲ್ಲಿ ಪಕ್ಷಾತೀತ ಬೆಂಬಲ

ಬೆಂಗಳೂರು: ಗ್ರಾಮ ಪಂಚಾಯಿತಿ(Gram Panchayat) ಸದಸ್ಯರ(Members) ಗೌರವಧನ(Honourarium) ಹೆಚ್ಚಿಸುವಂತೆ ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದವರು ವಿಧಾನ ಪರಿಷತ್ ಸದಸ್ಯ(MLC) ಸುನೀಲಗೌಡ ಪಾಟೀಲ(Sunilgouda Patil) ಅವರು. ಈ ನಿಟ್ಟಿನಲ್ಲಿ ಈಗ ಸುನೀಲಗೌಡ ಪಾಟೀಲ ಅವರು 5ನೇ ಬಾರಿಗೆ ಮತ್ತೆ ಸದನದಲ್ಲಿ(Legislative Counsil) ಧ್ವನಿ ಎತ್ತಿದ್ದಾರೆ.  ಈ ಕುರಿತು ಸುನಿಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಮತ್ತೆ ಎತ್ತಿರುವ ಧ್ವನಿಗೆ ಸದಸ್ಯರು ಪಕ್ಷಾತೀತವಾಗಿ ಬೆಂಬಲ ಸೂಚಿಸಿದ್ದಾರೆ.  ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾತನಾಡಿದ ಸುನೀಲಗೌಡ ಪಾಟೀಲ ಗ್ರಾ.ಪಂ ಸದಸ್ಯರ […]