ಆಹಾರ ಖಾಲಿಯಾಗ್ತಿದೆ- ಮೊಬೈಲ್ ಡಾಟಾ ಸಿಗುತ್ತಿಲ್ಲ- ಉಷ್ಣಾಂಶ ಮೈನಸ್ 2 ಡಿಗ್ರಿಯಿದೆ- ಬೇಗ ನಮ್ಮನ್ನು ರಕ್ಷಿಸಿ- ಪೂರ್ವ ಉಕ್ರೇನಿನಲ್ಲಿರುವ ವಿದ್ಯಾರ್ಥಿಗಳ ಅಳಲು

ಮಹೇಶ ವಿ. ಶಟಗಾರ ವಿಜಯಪುರ: ಮೊಬೈಲ್ ಡಾಟಾ ಖಾಲಿಯಾಗುತ್ತಿದೆ.  ಖರೀದಿಸಲೂ ಸಾಧ್ಯವಾಗುತ್ತಿಲ್ಲ.  ಮೊಬೈಲ್ ಮೂಲಕ ಮಾತನಾಡಲೂ ಕೂಡ ಕಷ್ಟವಾಗುತ್ತಿದೆ.  ಸಿಕ್ಕಾಪಟ್ಟೆ ಛಳಿಯಿದೆ.  ಮೈನಸ್ 2 ಡಿಗ್ರಿ ಉಷ್ಣಾಂಶವಿದೆ.  ಸಂಗ್ರಹವಾಗಿರುವ ಆಹಾರ ಪದಾರ್ಥಗಳೂ ಮುಗಿಯುತ್ತಿವೆ.  ವಾಶ್ ರೂಂ ನಲ್ಲಿ ನೀರು ಬಂದ್ ಆಗಿದೆ.  ಹೊರಗಡೆ ಹೋಗುವಂತಿಲ್ಲ.  ಸದಾ ಬಾಂಬ್ ಶಬ್ದಗಳೊಂದಿಗೆ ಕಾಲ ಕಳೆಯುವಂತಾಗಿದೆ.  ಇದು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿ ಅತಂತ್ರರಾಗಿರುವ ಕರ್ನಾಟಕದ ವಿದ್ಯಾರ್ಥಿಗಳ ಗೋಳು.  ಈಗ ಉಕ್ರೇನಿನಲ್ಲಿ ಅತಂತ್ರರಾಗಿರುವ ವೈದ್ಯ ವಿದ್ಯಾರ್ಥಿಗಳಿಗೆ ಬದುಕಲು ಆಹಾರ ಬೇಕು.  ಸಂಪರ್ಕಕ್ಕಾಗಿ […]