ಯಲಗೂರು ಯಲಗೂರೇಶ ದೇವಸ್ಥಾನದಲ್ಲಿ ಹನುಮ ಜಯಂತಿ ಪೂಜೆ ಸಲ್ಲಿಸಿ ಆಲಮಟ್ಟಿ ಕೃಷ್ಣಾ ನದಿಯಿಂದ ಜನತಾ ಜಲಧಾರೆ ಯಾತ್ರೆ ಆರಂಭಿಸಿದ ಎಚ್ ಡಿ ಕುಮಾರಸ್ವಾಮಿ

ವಿಜಯಪುರ: 2023ರ ಸಾರ್ವತ್ರಿಕ ಚುನಾವಣೆ(2023 General Ecletion) ತಯಾರಿ ಆರಂಭಿಸಿರುವ ಮಾಜಿ ಸಿಎಂ(Former Chief Minister) ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ(JDS State President) ಎಚ್. ಡಿ. ಕುಮಾರಸ್ವಾಮಿ(H D Kumarswamy) ಬಸವ ನಾಡು(Basava Nadu) ವಿಜಯಪುರದಿಂದ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಸಿದ್ಧತೆ ಆರಂಭಿಸಿದ್ದಾರೆ.   ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರಿನಲ್ಲಿರುವ ಯಲಗೂರೇಶ ದೇವಸ್ಥಾನಕ್ಕೆ ಆಗಮಿಸಿದ ಎಚ್. ಡಿ. ಕುಮಾರಸ್ವಾಮಿ ದೇವರ ದರ್ಶನ ಪಡೆದರು.  ದವನದ ಹುಣ್ಣಿಮೆಯ ದಿನ ರಾಮಭಕ್ತ ಹನುಮಾನ ಜಯಂತಿಯೂ ಇರುವುದರಿಂದ […]