Siddhu Joshi: ಆರ್ ಎಸ್ ಎಸ್, ಚಡ್ಡಿ ವಿಚಾರಕ್ಕೆ ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ

ವಿಜಯಪುರ: ಆರ್ ಎಸ್ ಎಸ್(RSS) ಮಾತಿನಂತೆ ಬಿಜೆಪಿ(BJP) ಆಡಳಿತ(Administration) ನಡೆಸುತ್ತದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ(MLA Siddhu Savadi)  ಯಾವ ಅರ್ಥದಲ್ಲಿ‌ ಏನು‌ ಹೇಳಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ(Prahlad Joshi) ಹೇಳಿದ್ದಾರೆ. ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ವಿಜಯಪುರ ಜಿಲ್ಲೆಗೆ ಆಗಮಿಸಿರುವ ಅವರು ನಿಡಗುಂದಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾವು ಆರ್ ಎಸ್ ಎಸ್ ನಿಂದ ಬಂದಿದ್ದೇವೆ.  ಆರ್ ಎಸ್ ಎಸ್ ವೈಚಾರಿಕ […]

Rain DC Visit: ಮಳೆಯಿಂದ ಹಾನಿಗೀಡಾದ ತೋಟಗಾರಿಕೆ ಪ್ರದೇಶಕ್ಕೆ ಡಿಸಿ ಡಾ. ವಿಜಯ ಮಹಾಂತೇಶ ಭೇಟಿ; ಪರಿಶೀಲನೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ(Rain) ತೋಟಗಾರಿಕೆ ಬೆಳೆಗಳು(Horticulture Crop) ಹಾನಿಯಾದ ನಾನಾ ಸ್ಥಳಗಳಿಗೆ(Loss Places) ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ(DC Dr Vijayamahantesh B Danammanavar) ಭೇಟಿ ನೀಡಿ ಪರಿಶೀಲನೆ ನಡೆಸಿದರು.    ಮೊದಲಿಗೆ ಕೋಲಾರ ತಾಲೂಕಿನ ಕೂಡಗಿಯ ಗ್ರಾಮದಲ್ಲಿ ಈರುಳ್ಳಿ ಮತ್ತು ವಿಳ್ಯದೆಲೆ ಹಾಳಾದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ರೈತರಾದ ದಸ್ತಗೀರ್ ಮೋಮಿನಸಾಬ, ಗುರುಬಾಯಿ ಗೋಪಾಲ ರಾಠೋಡ್ ಮತ್ತು ಮಹೆಬೂಬಸಾಬ ತಾಳಿಕೋಟೆ ಜಮೀನುಗಳಲ್ಲಿ ಉಂಟಾಗಿರುವ ಬೆಳೆಹಾನಿ ವೀಕ್ಷಿ,ಸಿದರು. […]

ಆರಕ್ಷಕನ ಸಮಯಪ್ರಜ್ಞೆ- ಕಾಲುವೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆ

ವಿಜಯಪುರ: ಬಸವ ನಾಡಿನ(Basava Nadu) ಆರಕ್ಷಕರೊಬ್ಬರ(Police) ಸಮಯ ಪ್ರಜ್ಞೆ(Time Sense) ಮೆರೆದಿದ್ದು ಕಾಲುವೆಯಲ್ಲಿ(Canal) ಮುಳುಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಸಹೋದರರಿಬ್ಬರ ಸಹಾಯದೊಂದಿಗೆ ಸೇರಿ ರಕ್ಷಣೆ(Secure) ಮಾಡಿದ್ದಾರೆ. ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ಠಾಣೆಯ ಆರಕ್ಷಕ ಎಸ್. ಎಸ್. ಅಂಗಡಗೇರಿ ಮತ್ತು ನಿಡಗುಂದಿ ಪಟ್ಟಣದ ಸಹೋದರರಾದ ಸಿದ್ರಾಮೇಶ ಯಮನಪ್ಪ ಗುಂಡಿನಮನಿ ಮತ್ತು ಸಂತೋಷ ಯಮನಪ್ಪ ಗುಂಡಿನಮನಿ ಜೊತೆ ಸೇರಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯ ಪೇದೆ ಎಸ್. ಎಸ್. ಅಂಗಡಗೇರಿ […]