BJP Yatnal: ನನನ್ನು ಬಿಜೆಪಿಯಿಂದ ಉಚ್ಛಾಟಿಸಲು, ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ- ಎದುರಾಳಿಗಳ ವಿರುದ್ಧ ಯತ್ನಾಳ ಗುಡುಗು

ವಿಜಯಪುರ: ನನ್ನನ್ನು ಬಿಜೆಪಿಯಿಂದ(BJP) ಉಚ್ಚಾಟಿಸಲು(Expelled), ಟಿಕೆಟ್ ತಪ್ಪಿಸಲು(Ticket) ಯಾರಿಂದಲೂ ಸಾಧ್ಯವಿಲ್ಲ(Not Possible) ಎಂದು ವಿಜಯನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಗುಡುಗಿದ್ದಾರೆ. ವಿಜಯಪುರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಜನರ ಪ್ರತಿನಿಧಿ. ಅವರ ಪರ ಧ್ವನಿ ಎತ್ತುತ್ತೇನೆ. ಅದು ಪಕ್ಷ ವಿರೋಧಿಯಲ್ಲ. ತಮ್ಮ ವಿರೋಧಿಗಳು ಆಗಾಗ ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ. ನನ್ನನ್ನು ಇಂದು ಹೊರಗೆ ಹಾಕುತ್ತಾರೆ. ನಾಳೆ ಹೊರಗೆ ಹಾಕುತ್ತಾರೆ.‌‌ ನನಗೆ […]